AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani: ಆರಲ್ಲ, ಮೂರು ತಿಂಗಳು ಮಾತ್ರ ಟೈಮ್; ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೆಬಿಗೆ ಆಗಸ್ಟ್ 14 ಗಡುವು

Adani-Hindenburg Probe By SEBI: ಅದಾನಿ ಹಿಂಡನ್ಬರ್ಗ್ ಪ್ರಕರಣದ ತನಿಖೆಗೆ ನಿರೀಕ್ಷೆಯಂತೆ ಸರ್ವೋಚ್ಚ ನ್ಯಾಯಾಲಯ ಸೆಬಿ ಮನವಿ ಮಾಡಿದಷ್ಟು ಸಮಯ ನೀಡಲು ನಿರಾಕರಿಸಿದೆ. 6 ತಿಂಗಳು ಬದಲು 3 ತಿಂಗಳು ಮಾತ್ರ ಹೆಚ್ಚಿನ ಕಾಲಾವಕಾಶ ವನ್ನು ನೀಡಿದೆ.

Adani: ಆರಲ್ಲ, ಮೂರು ತಿಂಗಳು ಮಾತ್ರ ಟೈಮ್; ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೆಬಿಗೆ ಆಗಸ್ಟ್ 14 ಗಡುವು
ಸುಪ್ರೀಂಕೋರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2023 | 4:21 PM

ನವದೆಹಲಿ: ಅದಾನಿ ಗ್ರೂಪ್ ಹಿಂಡನ್ಬರ್ಗ್ ರಿಸರ್ಚ್ ಪ್ರಕರಣ (Adani-Hindenburg Case) ಸಂಬಂಧ ತನಿಖೆ ನಡೆಸುತ್ತಿರುವ ತನಿಖೆಗೆ ಸುಪ್ರೀಂ ಕೋರ್ಟ್ 3 ತಿಂಗಳು ಮಾತ್ರ ಹೆಚ್ಚುವರಿ ಕಾಲಾವಕಾಶ ಕೊಡಲಾಗಿದೆ. ತನಿಖೆ ನಡೆಸಲು 6 ತಿಂಗಳು ಹೆಚ್ಚಿನ ಕಾಲಾವಕಾಶಕ್ಕಾಗಿ ಸೆಬಿ (SEBI) ಕೋರಿಕೆ ಮಾಡಿತ್ತು. ನಿರೀಕ್ಷೆಯಂತೆ ಸರ್ವೋಚ್ಚ ನ್ಯಾಯಾಲಯ (Supreme Court) ಸೆಬಿ ಮನವಿ ಮಾಡಿದಷ್ಟು ಸಮಯ ನೀಡಲು ನಿರಾಕರಿಸಿದೆ. 6 ತಿಂಗಳು ಬದಲು 3 ತಿಂಗಳು ಮಾತ್ರ ಹೆಚ್ಚಿನ ಕಾಲಾವಕಾಶ ಪಡೆದು ತನಿಖೆ ಪೂರ್ಣಗೊಳಿಸಿ ತನಗೆ ವರದಿ ಸಲ್ಲಿಸಬೇಕೆಂದು ಸೆಬಿಗೆ ಸರ್ವೋಚ್ಚ ನ್ಯಾಯಪೀಠ ಆದೇಶಿಸಿದೆ. ಸುಪ್ರೀಂ ಸೂಚನೆ ಪ್ರಕಾರ ಸೆಬಿ ಆಗಸ್ಟ್ 14ರೊಳಗೆ ತನ್ನ ವರದಿ ಸಲ್ಲಿಸಬೇಕಾಗುತ್ತದೆ.

ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಜನವರಿ ತಿಂಗಳಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ವಿರುದ್ಧ ಹಲವು ಗಂಭೀರ ಆರೋಪಗಳಿರುವ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು. ಸುಳ್ಳು ಲಾಭದ ವರದಿ ಸೇರಿದಂತೆ ವಿವಿಧ ವಂಚನೆಯ ಮಾರ್ಗಗಳಿಂದ ಷೇರುಬೆಲೆ ಕೃತಕವಾಗಿ ಉಬ್ಬಿಸುವುದು ಇತ್ಯಾದಿ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಕಂಪನಿ ತನ್ನ ವರದಿಯಲ್ಲಿ ಮಾಡಿತ್ತು. ಅದಾದ ಬಳಿಕ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಬೆಲೆ ತೀವ್ರವಾಗಿ ಕುಸಿತಕಂಡವು. ದೇಶ ವಿದೇಶಗಳಲ್ಲಿ ಈ ಬೆಳವಣಿಗೆ ಸಂಚಲನ ಸೃಷ್ಟಿಸಿತು.

ಇದನ್ನೂ ಓದಿSubsidy Cut: ಅತ್ತ ರೈತ, ಇತ್ತ ಐಟಿ; ರಸಗೊಬ್ಬರ ಸಬ್ಸಿಡಿಗೆ ಖೋತಾ; ಐಟಿ ಹಾರ್ಡ್​ವೇರ್​ಗೆ ಜಿಗಿತ; ಕೇಂದ್ರ ಸಂಪುಟದಿಂದ ಸದ್ಯದಲ್ಲೇ ಅನುಮೋದನೆ?

ಇದಾದ ಬಳಿಕ ಸುಪ್ರೀಮ್ ಕೋರ್ಟ್ ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೆಬಿಗೆ ಹೊಣೆ ಹೊರಿಸಿ 2 ತಿಂಗಳು ಗಡುವು ನೀಡಿತು. ಏಪ್ರಿಲ್​ಗೆ ಈ ಗಡುವು ಮುಗಿದಿದೆ. ಆದರೆ, ತನಗೆ ಇನ್ನೂ 6 ತಿಂಗಳು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸೆಬಿ ಕೋರಿಕೊಂಡಿತು. ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ ವರದಿಯಲ್ಲಿರುವ ಆರೋಪಗಳ ಪೈಕಿ 12 ಆರೋಪಗಳು ಬಹಳ ಸಂಕೀರ್ಣದ್ದಾಗಿದ್ದು, ತನಿಖೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಾದಿಸಿದ್ದ ಸೆಬಿ, ಅಮೆರಿಕದಲ್ಲಿ ಇಂಥ ಪ್ರಕರಣಗಳ ತನಿಖೆಗೆ ಸರಾಸರಿ 2 ವರ್ಷ ಆಗುವುದನ್ನು ಉದಾಹರಿಸಿತು. ಆದರೆ, ಸುಪ್ರೀಂ ಕೋರ್ಟ್ 6 ತಿಂಗಳ ಬದಲು 3 ತಿಂಗಳು ಹೆಚ್ಚುವರಿ ಕಾಲಾವಕಾಶಕ್ಕೆ ಮಾತ್ರ ಸಮ್ಮತಿ ನೀಡಿದೆ.

ಜುಲೈ 11ರಂದು ಮತ್ತೊಮ್ಮೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ

ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಆಗಸ್ಟ್ 14ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಸೆಬಿಗೆ ಸೂಚಿಸಿದೆ. ಆರು ಸದಸ್ಯರ ಸಮಿತಿ ಸಲ್ಲಿಸುವ ತನಿಖಾ ವರದಿಯನ್ನು ತಾನು ಪರಾಮರ್ಶಿಸುವುದಾಗಿ ನ್ಯಾಯಪೀಠ ಹೇಳಿದೆ. ಇನ್ನು, ಬೇಸಿಗೆ ರಜೆ ಬಳಿಕ ಜುಲೈ 11ರಂದು ನ್ಯಾಯಪೀಠ ಮತ್ತೊಮ್ಮೆ ಈ ಪ್ರಕರಣದ ಸ್ಥಿತಿಗತಿಯ ವಿಚಾರಣೆ ನಡೆಸಲಿದೆ.

ಇದನ್ನೂ ಓದಿBankrupt: ನಾನ್ಯಾಕೆ ವಾಪಸ್ ಕೊಡ್ಲಿ? ಬ್ಯಾಂಕ್ ದಿವಾಳಿಯಾಗುತ್ತಿದ್ದರೂ ಸಖತ್ ಹಣ ಪಡೆದು ಈಗ ಮರಳಿಸಲು ಒಲ್ಲೆ ಎನ್ನುತ್ತಿರುವ ಮಾಜಿ ಸಿಇಒ ಧೋರಣೆಗೆ ಟೀಕೆ

ಅದಾನಿ ಗ್ರೂಪ್ ಹಿಂಡನ್ಬರ್ಗ್ ರಿಸರ್ಚ್ ಪ್ರಕರಣದ ತನಿಖೆ ನಡೆಸುತ್ತಿರುವ ಸೆಬಿ ವಿಶೇಷ ಸಮಿತಿಯಲ್ಲಿ ಅರು ಮಂದಿ ಇದ್ದಾರೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಎಂ ಸಪ್ರೆ ಈ ಸಮಿತಿ ನೇತೃತ್ವ ವಹಿಸಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ, ಮಾಜಿ ಎಸ್​ಬಿಐ ಛೇರ್ಮನ್ ಓಪಿ ಭಟ್, ನಿ. ನ್ಯಾ| ಜೆ.ಪಿ. ದೇವಧರ್, ಮಾಜಿ ಬ್ಯಾಂಕರ್ ಕೆ.ವಿ. ಕಾಮತ್ ಮತ್ತು ವಕೀಲ ಸೋಮಶೇಖರ್ ಸುಂದರೇಶನ್ ಅವರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ