AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್​ನಲ್ಲಿ ದೆಹಲಿ ದಳ್ಳುರಿ, ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಮುಗಿಬೀಳಲು ಕೈ ಸಜ್ಜು

ದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು ಏಪ್ರಿಲ್ 3 ರವರೆಗೆ ನಡೆಯಲಿದೆ. ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದಿರುವ ಆರ್ಥಿಕತೆ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ. ಸಂಸತ್​ ಅಧಿವೇಶನ ಮತ್ತೆ ಕದನವ್ಯೂಹವಾಗಲಿದೆ. ಏಟಿಗೆ ಎದಿರೇಟು. ಪಟ್ಟುಗಳಿಗೆ ಪ್ರತಿ ಪಟ್ಟುಗಳು. ದೆಹಲಿ ದಂಗೆ ವಿರುದ್ಧ ದಂಗಲ್ ಮಾಡಲು ಪ್ರತಿಪಕ್ಷಗಳ ರಣತಂತ್ರ. ಹೌದು, ಇಂದಿನಿಂದ ಆರಂಭವಾಗಲಿರುವ ಬಜೆಟ್ ಮೇಲಿನ ಅಧಿವೇಶನದಲ್ಲಿ ಬೆಂಕಿ ಬಿರುಗಾಳಿಯೇ ಬೀಸಲಿದೆ. ಮಾತಿನ ಮೊರೆತ. ಸದನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗೋದು ಪಕ್ಕಾ. ಕೇಂದ್ರ ಸರ್ಕಾರದ […]

ಸಂಸತ್​ನಲ್ಲಿ ದೆಹಲಿ ದಳ್ಳುರಿ, ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಮುಗಿಬೀಳಲು ಕೈ  ಸಜ್ಜು
ಸಾಧು ಶ್ರೀನಾಥ್​
|

Updated on:Mar 02, 2020 | 10:27 AM

Share

ದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು ಏಪ್ರಿಲ್ 3 ರವರೆಗೆ ನಡೆಯಲಿದೆ. ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದಿರುವ ಆರ್ಥಿಕತೆ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ.

ಸಂಸತ್​ ಅಧಿವೇಶನ ಮತ್ತೆ ಕದನವ್ಯೂಹವಾಗಲಿದೆ. ಏಟಿಗೆ ಎದಿರೇಟು. ಪಟ್ಟುಗಳಿಗೆ ಪ್ರತಿ ಪಟ್ಟುಗಳು. ದೆಹಲಿ ದಂಗೆ ವಿರುದ್ಧ ದಂಗಲ್ ಮಾಡಲು ಪ್ರತಿಪಕ್ಷಗಳ ರಣತಂತ್ರ. ಹೌದು, ಇಂದಿನಿಂದ ಆರಂಭವಾಗಲಿರುವ ಬಜೆಟ್ ಮೇಲಿನ ಅಧಿವೇಶನದಲ್ಲಿ ಬೆಂಕಿ ಬಿರುಗಾಳಿಯೇ ಬೀಸಲಿದೆ. ಮಾತಿನ ಮೊರೆತ. ಸದನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗೋದು ಪಕ್ಕಾ.

ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಲು ‘ಕೈ’ ಪಡೆ ಸಜ್ಜು..! ಹೌದು, ಮೊದಲ ಅಧಿವೇಶನ ಸ್ವಲ್ಪ ಬ್ರೇಕ್ ಪಡೆದು, ಎರಡನೇ ಅವಧಿಯ ಸೆಷನ್ ಇಂದಿನಿಂದ ಆರಂಭವಾಗ್ತಿದೆ. ಏಪ್ರಿಲ್ 3 ರವರೆಗೂ ಅಧಿವೇಶನದ ನಡೆಯಲಿದ್ದು, ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದ ಆರ್ಥಿಕ ವ್ಯವಸ್ಥೆ ವಿಚಾರಗಳೇ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದ್ದು, ಕೇಂದ್ರ ಸರ್ಕಾರಕ್ಕೆ ಸವಾಲಾಗೋ ಸಾಧ್ಯತೆ ಇದೆ.

ದೇಶದ ಆರ್ಥಿಕತೆಗೆ ಗರ ಬಡಿದಂತಾಗಿದೆ. ಸತತ ಏಳನೇ ಅವಧಿಯಲ್ಲೂ ದೇಶದ ಜಿಡಿಪಿ ಬೆಳವಣಿಗೆ ಪಾತಳಕ್ಕಿಳಿದಿದೆ. ಜಿಡಿಪಿ ಬೆಳವಣಿಗೆ ಶೇಕಡ 4.7ಕ್ಕೆ ಕುಸಿದಿರುವ ಬಗ್ಗೆ ವಿಪಕ್ಷ ನಾಯಕರು ಸಂಸತ್​ನಲ್ಲಿ ಗಮನ ಸೆಳೆಯಲಿದ್ದಾರೆ. ಈಗಾಗಲೇ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡಲು ಕಾಂಗ್ರೆಸ್ ಸಜ್ಜಾಗಿದೆ.

ಪ್ರತಿಪಕ್ಷಗಳ ಅಸ್ತ್ರ: ಇನ್ನು ಪೌರತ್ವ ತಿದ್ಡುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ವಿಚಾರವನ್ನು ಪ್ರತಿಪಕ್ಷಗಳು ಎತ್ತಿಕೊಂಡಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ದತೆ ನಡೆಸಿವೆ. ದೆಹಲಿ ಹಿಂಸಾಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. 43 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನಾಯಕರು ಆಗ್ರಹಿಸುವ ಸಾಧ್ಯತೆ ಇದೆ.

ಇನ್ನು ವಿರೋಧ ಪಕ್ಷಗಳ ಟೀಕಾಸ್ತ್ರಕ್ಕೆ ತಿರುಗೇಟು ನೀಡಲು ಆಡಳಿತ ಪಕ್ಷ ಬಿಜೆಪಿ ಸಿದ್ಧತೆ ನಡೆಸಿದೆ. ದೆಹಲಿ ಹಿಂಸಾಚಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಕೈವಾಡ ಇದೆ ಎಂಬ ವಾದ ಮಂಡಿಸಲು ಬಿಜೆಪಿ ನಾಯಕುರ ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಬಜೆಟ್ ಅಧಿವೇಶನದ ಎರಡನೇ ಅವಧಿಯ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಕಲಾಪ ಹೇಗೆ ನಡೆಯಲಿದೆ ಅನ್ನೋ ವಿಚಾರವೇ ರಣರೋಚಕವಾಗಿರಲಿದೆ.

Published On - 7:03 am, Mon, 2 March 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ