AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’ಭಾರತ ಐಸಿಸ್​ ಉಗ್ರರ ಶಿಬಿರಗಳನ್ನು ನಡೆಸುತ್ತಿದೆ’-ಪಾಕಿಸ್ತಾನದ ಆರೋಪ, ಸ್ಥಳಗಳ ಪಟ್ಟಿ ಬಿಡುಗಡೆ

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್​ಗೆ ಪಾಕಿಸ್ತಾನ ಸಹಕಾರ ಕೊಡುತ್ತಿದೆ. ತಾಲಿಬಾನ್​ ಆಡಳಿತಕ್ಕೆ ಬಂದ ನಂತರ ಪಾಕಿಸ್ತಾನದ ಗಮನ ಹೆಚ್ಚಾಗಿದೆ ಎಂಬ ವರದಿಯ ಬೆನ್ನಲ್ಲೇ ಈ ಆರೋಪ ಮಾಡಲಾಗಿದೆ.

’ಭಾರತ ಐಸಿಸ್​ ಉಗ್ರರ ಶಿಬಿರಗಳನ್ನು ನಡೆಸುತ್ತಿದೆ’-ಪಾಕಿಸ್ತಾನದ ಆರೋಪ, ಸ್ಥಳಗಳ ಪಟ್ಟಿ ಬಿಡುಗಡೆ
ಶಾ ಮೊಹಮ್ಮದ್ ಖುರೇಶಿ
TV9 Web
| Edited By: |

Updated on:Sep 13, 2021 | 4:36 PM

Share

ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಅಡ್ಡಗಾಲು ಹಾಕಲು, ತನ್ನ ನೆಲದ ಹಲವು ನಗರಗಳಲ್ಲಿ ಐಸಿಸ್​ (ISIS) ಭಯೋತ್ಪಾದಕ ಕ್ಯಾಂಪ್​ಗಳನ್ನು ಆಯೋಜಿಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ.  ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮದ್​ ಖುರೇಷಿ, ರಾಷ್ಟ್ರೀ ಭದ್ರತಾ ಸಲಹೆಗಾರ ಮೊಯೀದ್​ ಯುಸುಫ್​ ಮತ್ತು ಮಾನವ ಹಕ್ಕುಗಳ ಸಚಿವ ಶಿರೀನ್​ ಮಜಾರಿ, ಈ ಆರೋಪ ಮಾಡಿದ್ದಾರೆ. ಹಾಗೇ, ಇದಕ್ಕೆ ಸಂಬಂಧಪಟ್ಟ 131 ಪುಟಗಳ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ಭಾರತದ ಗುಲ್​ಮಾರ್ಗ್​, ರಾಯಪುರ, ಜೋಧಪುರ, ಚಕ್ರಾಟಾ, ಅನುಪ್​ ಗಡ್​, ಬಿಕಾನೆರ್​ಗಳಲ್ಲಿ ಐಸಿಸ್​ ಉಗ್ರರ ಶಿಬಿರಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರತಿಪಾದಿಸಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್​ಗೆ ಪಾಕಿಸ್ತಾನ ಸಹಕಾರ ಕೊಡುತ್ತಿದೆ. ತಾಲಿಬಾನ್​ ಆಡಳಿತಕ್ಕೆ ಬಂದ ನಂತರ ಪಾಕಿಸ್ತಾನದ ಗಮನ ಹೆಚ್ಚಾಗಿದೆ ಎಂಬ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದ ಬೆನ್ನಲ್ಲೇ ಪಾಕಿಸ್ತಾನ, ಭಾರತದ ವಿರುದ್ಧ ಆರೋಪ ಮಾಡಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್​ ಅಲಿ ಗಿಲಾನಿ ನಿಧನ ಮತ್ತು ಆ ಬಳಿಕ ಅವರ ಕುಟುಂಬವನ್ನು ಭಾರತ ನಡೆಸಿಕೊಂಡ ರೀತಿಯನ್ನು ಗಮನದಲ್ಲಿಟ್ಟುಕೊಂಡು ನಾವು ದಾಖಲೆಯನ್ನು ಸಂಕಲಿಸಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಪರಿಗಣಿಸಿಕೊಂಡು, ಅಲ್ಲಿನ ಕೇಂದ್ರ ಸರ್ಕಾರದ ನೈಜ ಮುಖವನ್ನು ಜಗತ್ತಿನ ಎದುರು ಅನಾವರಣ ಗೊಳಿಸುವ ಸಲುವಾಗಿ ನಾವು ದಾಖಲೆ ಬಿಡುಗಡೆ ಮಾಡಿದ್ದೇವೆ ಎಂದೂ ಖುರೇಷಿ ಹೇಳಿಕೊಂಡಿದ್ದಾರೆ.

ನಂತರ ಮಾತನಾಡಿದ ಮೊಯೀದ್​ ಯುಸುಫ್,  ಇದೀಗ ನಡೆಯುತ್ತಿರುವ ಕಾಶ್ಮೀರ ಸ್ವಾತಂತ್ರ್ಯ ಹೋರಾಟಕ್ಕೆ ಐಸಿಸ್​ ಉಗ್ರರನ್ನು ಭಾರತವೇ ಸೇರಿಸಿಕೊಂಡು, ನಂತರ ಅದನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಲಿಂಕ್​ ಮಾಡಬಹುದು. ಈ ಮೂಲಕ ಕಾಶ್ಮೀರ ಹೋರಾಟಕ್ಕೆ ಅಡ್ಡಗಾಲು ಹಾಕಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶತಮಾನದ ಆರಂಭದಲ್ಲಿ ಯುವಕರ ನಿದ್ರೆಗೆಡಿಸಿದ್ದ ಶ್ರೀಯಾ ಶರನ್ ಮತ್ತೇ ವಾಪಸ್ಸು ಬಂದಿದ್ದಾಳೆ!

Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಹೇಳಿಕೆ

Published On - 4:31 pm, Mon, 13 September 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ