AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಒಸಿ ಬಳಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನನ್ನು ಕೊಂದು, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದ ಭಾರತೀಯ ಸೇನೆ

ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್​, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಎಲ್​ಒಸಿ ಬಳಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನನ್ನು ಕೊಂದು, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದ ಭಾರತೀಯ ಸೇನೆ
ಸಾಂದರ್ಭಿಕ ಚಿತ್ರ
TV9 Web
| Updated By: Lakshmi Hegde|

Updated on: Jan 02, 2022 | 7:07 PM

Share

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿರುವ ಕೇರಣ್​ ಸೆಕ್ಟರ್​​ನ ಬಳಿ ಲೈನ್​ ಆಫ್​ ಕಂಟ್ರೋಲ್​​ನಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನ (Pakistan Army)ದ ವ್ಯಕ್ತಿಯೊಬ್ಬನನ್ನು ನಿನ್ನೆ ಭಾರತೀಯ ಸೇನೆ (Indian Army)ಹತ್ಯೆ ಮಾಡಿದೆ. ಆತನ ಮೃತದೇಹವನ್ನು ಪಾಕ್​ ಸೈನ್ಯಕ್ಕೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಒಸಿ 28, ಪದಾತಿ ದಳದ ಮೇಜರ್​ ಜನರಲ್​ ಎಎಸ್​ ಪೆಂಡರ್ಕರ್​, ನಿನ್ನೆ ಬಿಎಟಿ (ಪಾಕಿಸ್ತಾನ ಸೇನೆಯ ಗಡಿ ಕಾರ್ಯಪಡೆ ತಂಡ) ಸದಸ್ಯನೊಬ್ಬ ನಿನ್ನೆ ಕೇರನ್ ವಲಯದಲ್ಲಿ ಎಲ್​ಒಸಿ ಗಡಿ ನುಸುಳಲು ಪ್ರಯತ್ನ ಮಾಡಿದ. ಆದರೆ ಎಲ್​ಒಸಿ(LOC) ಕಾಯುತ್ತಿದ್ದ ಯೋಧರು ಅದನ್ನು ವಿಫಲಗೊಳಿಸಿತು.  ನುಸುಳಲು ಯತ್ನಿಸಿದ ಉಗ್ರನನ್ನು ನಮ್ಮ ಸೇನೆಯ ಯೋಧರು ಹತ್ಯೆ ಮಾಡಿದರು ಎಂದು ತಿಳಿಸಿದ್ದಾರೆ. 

ಗುಂಡಿನ ದಾಳಿಗೆ ಬಲಿಯಾದವನನ್ನು ಮೊಹಮ್ಮದ್​ ಶಬೀರ್ ಮಲ್ಲಿಕ್​ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಸೇನೆ ಗಡಿ ಕಾರ್ಯಪಡೆ (BAT)ಯ ಸಿಬ್ಬಂದಿ ಎಂದು ಮೂಲಗಳಿಂದ ತಿಳಿದುಬಂದಿದೆ.  ಗಡಿಭಾಗದಲ್ಲಿ ಹಾಕಿದ್ದ ಬೇಲಿಯ ಬಳಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದ. ಈ ವೇಳೆ ಯೋಧರು ಗುಂಡು ಹೊಡೆದ ಪರಿಣಾಮ ಆತ ಪಾಕಿಸ್ತಾನದ ಬದಿಯಲ್ಲೇ ಸತ್ತಿದ್ದಾನೆ ಎಂದು ಮೇಜರ್​ ಜನರಲ್​ ಮಾಹಿತಿ ನೀಡಿದ್ದಾರೆ. ಹಾಗೇ, ಆ ಶವ ಸದ್ಯ ನಮ್ಮ ವಶದಲ್ಲೇ ಇದ್ದು, ಅದನ್ನ ಕೊಂಡೊಯ್ಯುವಂತೆ ಪಾಕ್​ ಸೈನ್ಯಕ್ಕೆ ತಿಳಿಸಲಾಗಿದೆ ಎಂದೂ ಹೇಳಿದ್ದಾರೆ.

ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್​, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಸ್ಥಳದಲ್ಲಿ ಕಣ್ಗಾವಲು ವಹಿಸಲಾಗಿದೆ. ಪಾಕಿಸ್ತಾನ ಗಡಿ ಬಳಿ ಸದಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದೆ. ಮೃತ ವ್ಯಕ್ತಿಯ ಬಳಿ ಪಾಕಿಸ್ತಾನದ ಐಡಿ ಕಾರ್ಡ್​ ಮತ್ತು ಕೊವಿಡ್​ 19 ಲಸಿಕೆ ಸರ್ಟಿಫಿಕೇಟ್​ ಸಿಕ್ಕಿದೆ. ಆತ ಪಾಕ್ ಆರ್ಮಿಯ ಸಿಬ್ಬಂದಿ ಎಂಬುದು ಅದರಲ್ಲೇ ಸ್ಪಷ್ಟವಾಗಿದೆ. ಪಾಕಿಸ್ತಾನಿ ಸೇನಾ ಸಮವಸ್ತ್ರದ ಫೋಟೋವೇ ಇದೆ.

ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಚಿವರ ಕಾರ್ಯಕ್ಷಮತೆ ಚಿಂತನ-ಮಂಥನ: ಆರ್​.ಅಶೋಕ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ