AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಒಸಿ ಬಳಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನನ್ನು ಕೊಂದು, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದ ಭಾರತೀಯ ಸೇನೆ

ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್​, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಎಲ್​ಒಸಿ ಬಳಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನನ್ನು ಕೊಂದು, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದ ಭಾರತೀಯ ಸೇನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 02, 2022 | 7:07 PM

Share

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿರುವ ಕೇರಣ್​ ಸೆಕ್ಟರ್​​ನ ಬಳಿ ಲೈನ್​ ಆಫ್​ ಕಂಟ್ರೋಲ್​​ನಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನ (Pakistan Army)ದ ವ್ಯಕ್ತಿಯೊಬ್ಬನನ್ನು ನಿನ್ನೆ ಭಾರತೀಯ ಸೇನೆ (Indian Army)ಹತ್ಯೆ ಮಾಡಿದೆ. ಆತನ ಮೃತದೇಹವನ್ನು ಪಾಕ್​ ಸೈನ್ಯಕ್ಕೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಒಸಿ 28, ಪದಾತಿ ದಳದ ಮೇಜರ್​ ಜನರಲ್​ ಎಎಸ್​ ಪೆಂಡರ್ಕರ್​, ನಿನ್ನೆ ಬಿಎಟಿ (ಪಾಕಿಸ್ತಾನ ಸೇನೆಯ ಗಡಿ ಕಾರ್ಯಪಡೆ ತಂಡ) ಸದಸ್ಯನೊಬ್ಬ ನಿನ್ನೆ ಕೇರನ್ ವಲಯದಲ್ಲಿ ಎಲ್​ಒಸಿ ಗಡಿ ನುಸುಳಲು ಪ್ರಯತ್ನ ಮಾಡಿದ. ಆದರೆ ಎಲ್​ಒಸಿ(LOC) ಕಾಯುತ್ತಿದ್ದ ಯೋಧರು ಅದನ್ನು ವಿಫಲಗೊಳಿಸಿತು.  ನುಸುಳಲು ಯತ್ನಿಸಿದ ಉಗ್ರನನ್ನು ನಮ್ಮ ಸೇನೆಯ ಯೋಧರು ಹತ್ಯೆ ಮಾಡಿದರು ಎಂದು ತಿಳಿಸಿದ್ದಾರೆ. 

ಗುಂಡಿನ ದಾಳಿಗೆ ಬಲಿಯಾದವನನ್ನು ಮೊಹಮ್ಮದ್​ ಶಬೀರ್ ಮಲ್ಲಿಕ್​ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಸೇನೆ ಗಡಿ ಕಾರ್ಯಪಡೆ (BAT)ಯ ಸಿಬ್ಬಂದಿ ಎಂದು ಮೂಲಗಳಿಂದ ತಿಳಿದುಬಂದಿದೆ.  ಗಡಿಭಾಗದಲ್ಲಿ ಹಾಕಿದ್ದ ಬೇಲಿಯ ಬಳಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದ. ಈ ವೇಳೆ ಯೋಧರು ಗುಂಡು ಹೊಡೆದ ಪರಿಣಾಮ ಆತ ಪಾಕಿಸ್ತಾನದ ಬದಿಯಲ್ಲೇ ಸತ್ತಿದ್ದಾನೆ ಎಂದು ಮೇಜರ್​ ಜನರಲ್​ ಮಾಹಿತಿ ನೀಡಿದ್ದಾರೆ. ಹಾಗೇ, ಆ ಶವ ಸದ್ಯ ನಮ್ಮ ವಶದಲ್ಲೇ ಇದ್ದು, ಅದನ್ನ ಕೊಂಡೊಯ್ಯುವಂತೆ ಪಾಕ್​ ಸೈನ್ಯಕ್ಕೆ ತಿಳಿಸಲಾಗಿದೆ ಎಂದೂ ಹೇಳಿದ್ದಾರೆ.

ಈ ಒಳನುಸುಳುವಿಕೆ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅಲ್ಲಿ ಕಾವಲು ಪಡೆ ಅದಾಗಲೇ ಚುರುಕಾಗಿತ್ತು. ಈತ ಶವದ ಬಳಿಯಿದ್ದ ಎಕೆ ರೈಫಲ್​, ಶಸ್ತ್ರಾಸ್ತ್ರಗಳು, ಏಳು ಗ್ರೇನೇಡ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಸ್ಥಳದಲ್ಲಿ ಕಣ್ಗಾವಲು ವಹಿಸಲಾಗಿದೆ. ಪಾಕಿಸ್ತಾನ ಗಡಿ ಬಳಿ ಸದಾ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದೆ. ಮೃತ ವ್ಯಕ್ತಿಯ ಬಳಿ ಪಾಕಿಸ್ತಾನದ ಐಡಿ ಕಾರ್ಡ್​ ಮತ್ತು ಕೊವಿಡ್​ 19 ಲಸಿಕೆ ಸರ್ಟಿಫಿಕೇಟ್​ ಸಿಕ್ಕಿದೆ. ಆತ ಪಾಕ್ ಆರ್ಮಿಯ ಸಿಬ್ಬಂದಿ ಎಂಬುದು ಅದರಲ್ಲೇ ಸ್ಪಷ್ಟವಾಗಿದೆ. ಪಾಕಿಸ್ತಾನಿ ಸೇನಾ ಸಮವಸ್ತ್ರದ ಫೋಟೋವೇ ಇದೆ.

ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಚಿವರ ಕಾರ್ಯಕ್ಷಮತೆ ಚಿಂತನ-ಮಂಥನ: ಆರ್​.ಅಶೋಕ್

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್