AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ. ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..! ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ […]

ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ
ಸಾಧು ಶ್ರೀನಾಥ್​
|

Updated on:Dec 13, 2019 | 7:34 AM

Share

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ.

ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..! ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ ಬಿಜೆಪಿ ಪಾಳಯದ ಒಳಬೇಗುದಿ ಹೊರ ಬಿದ್ದಿದ್ದು ಆಂತರಿಕ ಕಚ್ಚಾಟ ತಾರಕಕ್ಕೇರಿದೆ. ಮಾಜಿ ಸಚಿವೆ ಪಂಕಜಾ ಮುಂಡೆ ಬಿಜೆಪಿ ತ್ಯಜಿಸುತ್ತಾರೆ ಅನ್ನೋ ಸುದ್ದಿ ಕೆಲ ದಿನಗಳ ಹಿಂದೆ ಸುಳಿದಾಡ್ತಿತ್ತು. ಆದ್ರೀಗ ಪಂಕಜಾ ಮುಂಡೆ ಅಧಿಕೃತ ಸ್ಪಷ್ಟನೆ ನೀಡಿದ್ದು, ನಾನ್ಯಾಕೆ ಪಕ್ಷ ತ್ಯಜಿಸಲಿ. ಬೇಕಾದ್ರೆ ನನ್ನನ್ನು ಹೊರಹಾಕಲಿ. ಈ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿ ಅಂತಾ ಸಿಡಿದೆದ್ದಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಸಿಡಿದೆದ್ದಿರೋ ಪಂಕಜಾ ಮುಂಡೆ ಭೀಡ್ ಜಿಲ್ಲೆಯ ಪರ್ಲಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ವಿರುದ್ಧ ಸ್ಪರ್ಧಿಸದೇ ಇದ್ದಿದ್ದರೇ ತಾವು ಸೋಲುತ್ತಿರಲಿಲ್ಲ. ತಮ್ಮ ಎದುರಾಳಿ ಧನಂಜಯ ಮುಂಡೆ, ಬಿಜೆಪಿ ಸರ್ಕಾರದ ಕೆಲವರು ಸಹಾಯ ಮಾಡಿದ್ದಾರೆ ಅಂತಾ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಮಾಜಿ ಸಚಿವೆ ಪಂಕಜಾ ಮುಂಡೆ, ಏಕನಾಥ್ ಖಡ್ಸೆ, ವಿನೋದ್ ತಾವಡೆ, ಚಂದ್ರಶೇಖರ್ ಭವನಕುಲೆ, ಪ್ರಕಾಶ್ ಮೆಹ್ತಾ ಸೇರಿದಂತೆ ಅನೇಕರರು ಅಸಮಾಧಾನಗೊಂಡಿದ್ದಾರೆ.

ಕೆಲವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿತ್ತು. ಹೀಗೆ, ಬಿಜೆಪಿ ಹೈಕಮಾಂಡ್ ತಮಗೆ ಟಿಕೆಟ್ ನಿರಾಕರಿಸಿಲ್ಲ. ಮುಂಬೈನಲ್ಲಿ ಕುಳಿತುಕೊಂಡೇ ದೇವೇಂದ್ರ ಫಡ್ನವೀಸ್ ತಮಗೆ ಟಿಕೆಟ್ ನಿರಾಕರಿಸಿದ್ರು ಅಂತಾ ಸ್ಫೋಟಕ ಮಾಹಿತಿ ಹೊರಹಾಕಿರೋದು ಬಿಜೆಪಿ ಪಾಳಯದಲ್ಲಿ ಸುನಾಮಿ ಎಬ್ಬಿಸಿದೆ. ಅಂದು ಕಮಲ ಪಾಳಯದಲ್ಲಿ ಸಿಡಿದೆದ್ದಿದ್ದ ತಂದೆ ಗೋಪಿನಾಥ್ ಮುಂಡೆ ಹಾದಿಯಲ್ಲೇ ಪಂಕಜಾ ಮುಂದೆ ಸಾಗ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ಸಿಗದೆ ಪರದಾಡಿರೋ ಬಿಜೆಪಿಗೆ ಇದೀಗ ಪಂಕಜಾ ಬಿಗ್ ಶಾಕ್ ನೀಡಿದ್ದಾರೆ.

Published On - 7:34 am, Fri, 13 December 19

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್