AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 14 ಕೆಜಿ ಜಿನ್ನ ಜಪ್ತಿ!

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆಜಿ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 14 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಕಲ್ಲು ದಂಧೆಕೋರರ ಪುಂಡಾಟ: ರಾಜಸ್ಥಾನದ ಟೋಂಕ್‌ ಎಂಬಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನನ್ನ ಅರಣ್ಯ ಅಧಿಕಾರಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ ದಂಧೆಕೋರರು ಸೈಲೆನ್ಸರ್ ಪೈಪ್‌ನಿಂದ ಅಧಿಕಾರಿಗಳಿಗೆ ಹೊಡೆಯಲು ಯತ್ನಿಸಿದ್ದಾರೆ. […]

ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 14 ಕೆಜಿ ಜಿನ್ನ ಜಪ್ತಿ!
ಸಾಧು ಶ್ರೀನಾಥ್​
|

Updated on: Dec 13, 2019 | 11:45 AM

Share

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆಜಿ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 14 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

ಕಲ್ಲು ದಂಧೆಕೋರರ ಪುಂಡಾಟ: ರಾಜಸ್ಥಾನದ ಟೋಂಕ್‌ ಎಂಬಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನನ್ನ ಅರಣ್ಯ ಅಧಿಕಾರಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ ದಂಧೆಕೋರರು ಸೈಲೆನ್ಸರ್ ಪೈಪ್‌ನಿಂದ ಅಧಿಕಾರಿಗಳಿಗೆ ಹೊಡೆಯಲು ಯತ್ನಿಸಿದ್ದಾರೆ. ಅಲ್ಲದೇ ಟ್ರ್ಯಾಕ್ಟರ್‌ನಲ್ಲಿದ್ದ ಕಲ್ಲನ್ನ ರೋಡ್‌ನಲ್ಲೇ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ.

ಬೈಕ್ ಮೇಲೆ ಕಾಡಾನೆ ದಾಳಿ: ಒಡಿಶಾದ ಮಯೂರಬಂಜ್‌ನಲ್ಲಿ ಕಾಡಾನೆಯೊಂದು ಬೈಕ್‌ ಮೇಲೆ ಅಟ್ಯಾಕ್‌ ಮಾಡಿದೆ. ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ಬೈಕ್ ಮೇಲೆ ಅಟ್ಯಾಕ್ ಮಾಡಿದ್ದು, ಬೈಕನ್ನ ಪುಡಿಗಟ್ಟಿದೆ. ಆದ್ರೆ ಬೈಕ್‌ ಸವಾರ ಇದ್ದನ ಅಥವಾ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾನಾ ಅನ್ನೋದು ತಿಳಿದು ಬಂದಿಲ್ಲ.

ಎಟಿಎಂಗೆ ನುಗ್ಗಿದ್ದ ಖದೀಮ ಸೆರೆ: ಉತ್ತರ ಪ್ರದೇಶದ ಬರೇಲಿಯಲ್ಲಿ ಎಟಿಎಂ ದರೋಡೆಗೆ ಯತ್ನಿಸಿದ್ದ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೊನ್ನೆ ರಾತ್ರಿ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ್ದ ಖದೀಮ, ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ್ದ. ಈ ಕೇಸ್ ಬೆನ್ನುಬಿದ್ದಿದ್ದ ಪೊಲೀಸರು ಸಿಸಿಟಿವಿ ಆಧರಿಸಿ ಕಿರಾತಕನನ್ನು ಖೆಡ್ಡಾಗೆ ಕೆಡವಿದ್ದಾರೆ.

ರಾಶಿ ರಾಶಿ ಆಲಿಕಲ್ಲು ನಗೌರ್, ರಾಜಸ್ಥಾನ: ರಾಜಸ್ಥಾನದ ನಗೌರ್​ನಲ್ಲಿ ಭಾರಿ ಆಲಿಕಲ್ಲು ಮಳೆ ಸುರಿದಿದೆ. ಇದ್ರಿಂದಾಗಿ ರಸ್ತೆ, ಮನೆಗಳು ಸೇರಿದಂತೆ ಎಲ್ಲೆಂದ್ರಲ್ಲಿ ಆಲಿಕಲ್ಲುಗಳ ರಾಶಿ ಬಿದ್ದು ಜನ ಪರದಾಡಿದ್ರು. ಅದ್ರಲ್ಲೂ ಮನೆ ಮೇಲೆ ಬಿದ್ದಿದ್ದ ಆಲಿಕಲ್ಲು ರಾಶಿಯನ್ನ ಹೊರಹಾಕಿ ಜನ ಸುಸ್ತಾದ್ರು.

‘ಆಲಿಕಲ್ಲು’ ಅವತಾರ ಶಾಜಾಪುರ, ಮಧ್ಯಪ್ರದೇಶ ಮಧ್ಯಪ್ರದೇಶದ ಶಾಜಾಪುರದಲ್ಲೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಇದ್ರಿಂದಾಗಿ ಎಲ್ಲೆಂದ್ರಲ್ಲಿ ಆಲಿಕಲ್ಲಿನ ರಾಶಿ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ದೆ, ರಸ್ತೆಯಲ್ಲಿ ಆಲಿಕಲ್ಲು ರಾಶಿ ಬಿದ್ದಿದ್ರಿಂದ ವಾಹನ ಸವಾರರು ಪರದಾಡಿದ್ರು.

ಪ್ಯಾನ್‌ಗೆ ಆಧಾರ್‌ ಲಿಂಕ್‌ಗೆ ಡಿ.31 ಲಾಸ್ಟ್‌: ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಇದೇ ಡಿಸೆಂಬರ್​ 31ಕ್ಕೆ ಕೊನೆಯಾಗಲಿದೆ. ಈ ಮೊದಲು ಸೆಪ್ಟೆಂಬರ್‌ 30ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿಸಲು ಸೂಚಿಸಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಜನರು ಸ್ಪಂದಿಸದ ಕಾರಣ ಅಂತಿಮ ದಿನಾಂಕವನ್ನು ಮತ್ತೆ 2019ರ ಡಿಸೆಂಬರ್ 31ಕ್ಕೆ ಮುಂದೂಡಿತ್ತು.