AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆಯಾಗಿದ್ದು 11 ಸಾವಿರ ಲೀಟರ್​ ಹಾಲು-ತುಪ್ಪ!

ಇತ್ತೀಚೆಗೆ ಈ ದೇವಸ್ಥಾನದ ಅಡಿಗಲ್ಲು ಸಮಾರಂಭ ನಡೆದಿತ್ತು. ಮೊದಲ ಬಾರಿಗೆ ಭೂಮಿ ಪೊಜೆ ಮಾಡುವಾಗ ನೈವೇದ್ಯಕ್ಕಾಗಿ ಹಾಲು, ತುಪ್ಪ ಮೊಸರು ಇತ್ಯಾದಿ ಬಳಕೆ ಮಾಡುತ್ತಾರೆ. ಆದರೆ, ಇಲ್ಲಿ, ಒಂದಲ್ಲ ಎರಡಲ್ಲ ಬರೋಬ್ಬರಿ 11 ಸಾವಿರ ಲೀಟರ್​ ಹಾಲು, ತುಪ್ಪ, ಮೊಸರು ಬಳಕೆ ಆಗಿತ್ತು.

ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆಯಾಗಿದ್ದು 11 ಸಾವಿರ ಲೀಟರ್​ ಹಾಲು-ತುಪ್ಪ!
ಈ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಳಕೆ ಆಯ್ತು 11 ಸಾವಿರ ಲೀಟರ್​ ಹಾಲು-ತುಪ್ಪ!
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​|

Updated on: Dec 29, 2020 | 6:19 PM

Share

ಕೋಟಾ: ಅಲ್ಲಿ ದೇವಸ್ಥಾನದ ಅಡಿಗಲ್ಲು ಸಮಾರಂಭ ನೆರವೇರುತ್ತಿತ್ತು. ಸಮಾರಂಭದಲ್ಲಿ ನೆರೆದಿದ್ದ ಬಹುತೇಕರ ಕೈಯಲ್ಲಿ ದೊಡ್ಡ ದೊಡ್ಡ ಬಿಂದಿಗೆ ಹಾಗೂ ಬಾಟಲಿಗಳಿದ್ದವು. ಅದರ ತುಂಬ ಹಾಲು, ಮೊಸರು, ತುಪ್ಪ ಇತ್ತು. ಇದನ್ನು ಎಲ್ಲರೂ ತಂದು ತಂದು ಅಡಿಗಲ್ಲು ಸಮಾರಂಭಕ್ಕೆ ತೋಡಿದ್ದ ಗುಂಡಿಗೆ ಸುರಿಯುತ್ತಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಈ ದೃಶ್ಯ ಕಂಡು ಬಂದಿದ್ದು ರಾಜಸ್ಥಾನದ ಜಲಾವರ್​ ಜಿಲ್ಲೆಯಲ್ಲಿ. ಇಲ್ಲಿ ದೇವನಾರಾಯಣ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗೆ ಈ ದೇವಸ್ಥಾನದ ಅಡಿಗಲ್ಲು ಸಮಾರಂಭ ನಡೆದಿತ್ತು. ಮೊದಲ ಬಾರಿಗೆ ಭೂಮಿ ಪೊಜೆ ಮಾಡುವಾಗ ನೈವೇದ್ಯಕ್ಕಾಗಿ ಹಾಲು, ತುಪ್ಪ ಮೊಸರು ಇತ್ಯಾದಿ ಬಳಕೆ ಮಾಡುತ್ತಾರೆ. ಆದರೆ, ಇಲ್ಲಿ, ಒಂದಲ್ಲ ಎರಡಲ್ಲ ಬರೋಬ್ಬರಿ 11 ಸಾವಿರ ಲೀಟರ್​ ಹಾಲು, ತುಪ್ಪ, ಮೊಸರು ಬಳಕೆ ಆಗಿತ್ತು.

11 ಸಾವಿರ ಲೀಟರ್​ನಲ್ಲಿ 1,500 ಲೀಟರ್​ ಮೊಸರು, 1 ಕ್ಷಿಂಟಾಲ್​ ದೇಸಿ ತುಪ್ಪ ಹಾಗೂ ಉಳಿದವು ಹಾಲು. ಇದಕ್ಕೆ ತಗುಲಿದ ವೆಚ್ಛ ಬರೋಬ್ಬರಿ 1.50 ಲಕ್ಷ ರೂಪಾಯಿ.

ನಾವು ದೇವರಿಗೆ ನೀಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ.. ಈ ಬಗ್ಗೆ ಗುಜ್ಜರ್​ ಸಮುದಾಯದವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಮೊದಲು ಕೂಡ ಈ ರೀತಿ ಸಾಕಷ್ಟು ಬಾರಿ ಮಾಡಿದ್ದೇವೆ. ದೇವರು ನಮಗೆ ನೀಡಿದ್ದಕ್ಕೆ ಹೋಲಿಕೆ ಮಾಡಿದರೆ ನಾವು ದೇವರಿಗೆ ನೀಡುತ್ತಿರುವುದು ಏನು ಅಲ್ಲ. ನಾವು ದೇವರಿಗೆ ನೀಡಿದ್ದು ಎಂದಿಗೂ ವ್ಯರ್ಥವಾಗುವುದಿಲ್ಲ. ದೇವರು ನಮಗೆ ಅದನ್ನು ಹಿಂದಿರುಗಿಸುತ್ತಾರೆ ಎನ್ನುವ ಅಭಿಪ್ರಾಯ ಗುಜ್ಜರ್​ ಸಮುದಾಯದವರದ್ದು.

ದೇವನಾರಾಯಣ ದೇವಸ್ಥಾನಕ್ಕೆ ಒಂದು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಎರಡು ವರ್ಷಗಳಲ್ಲಿ ಈ ದೇವಸ್ಥಾನ ತಲೆ ಎತ್ತಲಿದೆ.

ಶ್ರೀರಾಮ ಮಂದಿರ ಪಕ್ಕದಲ್ಲಿಯೇ ಕರ್ನಾಟಕ ಯಾತ್ರಿ ನಿವಾಸ ಕಟ್ಟುತ್ತಾ ರಾಜ್ಯ ಸರ್ಕಾರ?

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!