AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಪವರ್ ರನ್; ಲಿಯಾಂಡರ್ ಪೇಸ್, ಜೂಲಿಯಾ ಮಾರ್ಲೀ, ಸುಧಾರೆಡ್ಡಿಯಿಂದ ಚಾಲನೆ

Pink Power Run 2.0: ತೆಲಂಗಾಣ ರಾಜಧಾನಿಯ ನೆಕ್​ಲೇಸ್ ರೋಡ್​ನಲ್ಲಿ ಭಾನುವಾರ ಪಿಂಕ್ ಪವರ್ ರನ್ 2.0 ಓಟ ಆಯೋಜಿತವಾಗಿತ್ತು. ಸ್ತನ ಕ್ಯಾನ್ಸರ್ ವಿರುದ್ಧ ಜನಜಾಗೃತಿ ಮೂಡಿಸಲು ಸುಧಾರೆಡ್ಡಿ ಫೌಂಡೇಶನ್ ಈ ಪಿಂಕ್ ಪವರ್ ರನ್ ಅನ್ನು ಆಯೋಜಿಸಿತ್ತು. ಸುಧಾ ರೆಡ್ಡಿ, ಲಿಯಾಂಡರ್ ಪೇಸ್, ಮಿಸ್ ವರ್ಲ್ಡ್ ಆರ್ಗನೈಸೇಶನ್​ನ ಮಾರ್ಲೀ, ಉದ್ಯಮಿ ಕೃಷ್ಣ ರೆಡ್ಡಿ ಅವರು ಈ ಮ್ಯಾರಥಾನ್​ಗೆ ಚಾಲನೆ ನೀಡಿದರು.

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಪವರ್ ರನ್; ಲಿಯಾಂಡರ್ ಪೇಸ್, ಜೂಲಿಯಾ ಮಾರ್ಲೀ, ಸುಧಾರೆಡ್ಡಿಯಿಂದ ಚಾಲನೆ
ಪಿಂಕ್ ಪವರ್ ರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2025 | 12:47 PM

Share

ಹೈದರಾಬಾದ್, ಸೆಪ್ಟೆಂಬರ್ 28: ಸುಧಾರೆಡ್ಡಿ ಫೌಂಡೇಶನ್ (Sudha Reddy Foundation) ವತಿಯಿಂದ ಎರಡನೇ ಆವೃತ್ತಿಯ ಪಿಂಕ್ ಪವರ್ ರನ್ 2025 (Pink Power Run 2.0) ಮ್ಯಾರಥಾನ್ ಓಟ ನಡೆಯಿತು. ಹೈದರಾಬಾದ್​ನ ನೆಕ್​ಲೇಸ್ ರೋಡ್​ನಲ್ಲಿ 20,000 ಮಂದಿ ಪಾಲ್ಗೊಂಡಿದ್ದ ಈ ಓಟವನ್ನು ಬ್ರೆಸ್ಟ್ ಕ್ಯಾನ್ಸರ್ ಜಾಗೃತಿಗಾಗಿ ನಡೆಸಲಾಗಿತ್ತು. ಖ್ಯಾತ ಸಮಾಜಸೇವಕಿ ಸುಧಾರೆಡ್ಡಿ, ಮೇಘ ಎಂಜಿನಿಯರಿಂಗ್ ಸಂಸ್ಥೆಯ (ಎಂಇಐಎಲ್) ಎಂಡಿ ಕೃಷ್ಣ ರೆಡ್ಡಿ, ಮಿಸ್ ವರ್ಲ್ಡ್ ಆರ್ಗನೈಸೇಶನ್ ಮುಖ್ಯಸ್ಥೆ ಜೂಲಿಯಾ ಮಾರ್ಲೀ, ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರು ಭಾನುವಾರ ಬೆಳಗ್ಗೆ ಈ ಜಾಗೃತಿ ಓಟಕ್ಕೆ ಚಾಲನೆ ಕೊಟ್ಟರು.

ಸ್ತನ ಕ್ಯಾನ್ಸರ್ ಅನ್ನು ಬೇಗ ಪತ್ತೆ ಮಾಡಿದರೆ ಗುಣಪಡಿಸಲು ಸಾಧ್ಯ ಎಂಬ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಕ್ಯಾನ್ಸರ್ ಬಾಧಿತವಾದ ಹಾಲಿ ಮಿಸ್ ವರ್ಲ್ಡ್ ಕೂಡ ಆಗಿರುವ ಓಪಾಲ್ ಸುಚಾತಾ ಚುವಾಂಗಸ್ರಿ ಹಾಗೂ ವಿವಿಧ ಪ್ರದೇಶಗಳ ವಿಶ್ವ ಸುಂದರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಶ್ವ ಸುಂದರಿ ಜೊತೆಗೆ, ಮಿಸ್ ವರ್ಲ್ಡ್ ಕೆರಿಬಿಯನ್, ಮಿಸ್ ನಮೀಬಿಯಾ, ಮಿಸ್ ವರ್ಲ್ಡ್ ಓಷಾನಿಯಾ, ಮಿಸ್ ವರ್ಲ್ಡ್ ಅಮೇರಿಕಾಸ್, ಮಿಸ್ ವರ್ಲ್ಡ್ ಯೂರೋಪ್, ಮಿಸ್ ವರ್ಲ್ಡ್ ಏಷ್ಯಾ ಅವರೂ ಇದ್ದರು. ಮಿಸ್ ಇಂಡಿಯಾ ವರ್ಲ್ಡ್ ನಂದಿನಿ ಗುಪ್ತ ಮತ್ತ ನಿಕಿತಾ ಪೊರವಾಲ್ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಶಂಕರ್ ಮಹದೇವನ್ ಹಾಡಿದ ದೇಶಭಕ್ತಿ ಗೀತೆಗಳ ಆಲ್ಬಂ ‘ಸಂಘ್ ಗೀತ್’ ಲೋಕಾರ್ಪಣೆ

ಈ ಪಿಂಕ್ ರನ್ 2.0 ಮ್ಯಾರಥಾನ್​ನಲ್ಲಿ 10 ಕಿಮೀ, 5 ಕಿಮೀ ಹಾಗೂ 3 ಕಿಮೀ ರೇಸ್​ಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ರೇಸ್​ಗಳಲ್ಲೂ ಸಾಕಷ್ಟು ಜನರು ಭಾಗವಹಿಸಿದ್ದರು. 10 ಕಿಮೀ ರೇಸ್​ನಲ್ಲಿ ಪುರುಷರ ವಿಭಾಗದಲ್ಲಿ ಅಂಕಿತ್ ಗುಪ್ತಾ ಮೊದಲ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಸೀಮಾ ಗೆದ್ದರು.

Pink Power Run for breast cancer awareness organized by Sudha Reddy Foundation at Hyderabad

ಪಿಂಕ್ ಪವರ್ ರನ್​ನಲ್ಲಿ ಸುಧಾ ರೆಡ್ಡಿ ಮತ್ತಿತರರು

2026ರಲ್ಲಿ 140 ದೇಶಗಳಲ್ಲಿ ಪಿಂಕ್ ಪವರ್ ರನ್

ಪಿಂಕ್ ಪವರ್ ರನ್​ನ ಎರಡನೇ ಆವೃತ್ತಿಗೆ ಸಿಕ್ಕ ಭರ್ಜರಿ ಸ್ಪಂದನೆಯು ಈಗ ಜಾಗತಿಕ ಮಟ್ಟದಲ್ಲಿ ಇದನ್ನು ಆಯೋಜಿಸಲು ಸುಧಾ ರೆಡ್ಡಿ ಫೌಂಡೇಶನ್ ನಿರ್ಧರಿಸಿದೆ. 2026ರಲ್ಲಿ ಜಾಗತಿಕ ಮಟ್ಟದ ಪಿಂಕ್ ಪವರ್ ರನ್ ನಡೆಸಲಾಗಲಿದೆ. ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳಲು ಫೌಂಡೇಶನ್ ಮುಂದಾಗಿದೆ.

ಇದನ್ನೂ ಓದಿ: 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್; ಸಿಇಒ ಜೂಲೀ ಸ್ವೀಟ್ ಬಿಚ್ಚಿಟ್ಟ ಕಾರಣ ಇದು

ಮಿಸ್ ವರ್ಲ್ಡ್ ಆರ್ಗನೈಸೇಶನ್​ನಿಂದ ಏಳು ಖಂಡಗಳ ಬ್ಯೂಟಿ ಕ್ವೀನ್​ಗಳು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಜಾಗತಿಕ ರಾಯಭಾರಿಯಾಗಿ ನೆರವಾಗಲಿದ್ದಾರೆ. 2026ರಲ್ಲಿ ಈ ಮೆಗಾ ಇವೆಂಟ್​​ನಲ್ಲಿ ಓಟದ ಸ್ಪರ್ಧಿಗಳು ಬ್ಯಾಟಾನ್ ಅನ್ನು ಒಂದು ಖಂಡದಿಂದ ಮತ್ತೊಂದು ಖಂಡದಲ್ಲಿರುವವರಿಗೆ ಹಸ್ತಾಂತರಿಸುತ್ತಾರೆ. ಈ ರೀತಿ ಏಳು ಖಂಡಗಳಲ್ಲೂ ಈ ಜಾಗೃತಿ ಓಟ ಮುಂದುವರಿದುಕೊಂಡು ಹೋಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?