AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ತಿರುವನಂತಪುರಂ: ಕಳೆದ ಕೆಲವು ತಿಂಗಳ ಹಿಂದೆ ಪಟಾಕಿ ತುಂಬಿದ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದ ಮನಕಲುಕುವ ಘಟನೆ ಕೇರಳದಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್​ 10 ರಂದು ಕಾಡುಪ್ರಾಣಿಯ ಮಾಂಸವನ್ನು ಕೆಲವರು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರು ಬೇಟೆಗಾರರನ್ನು ಬಂಧಿಸಿದ್ದರು. ಬಂಧಿತ ಬೇಟೆಗಾರರನ್ನು ಅಬು, ಮುಹಮ್ಮದ್​ ಅನ್ಸಿಫ್​, ಮುಹಮ್ಮದ್​ ಬುಸ್ಥಾನ್​, ಸುಹೇಲ್​ ಮತ್ತು ಆಶಿಖ್ […]

ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 20, 2020 | 11:51 AM

ತಿರುವನಂತಪುರಂ: ಕಳೆದ ಕೆಲವು ತಿಂಗಳ ಹಿಂದೆ ಪಟಾಕಿ ತುಂಬಿದ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದ ಮನಕಲುಕುವ ಘಟನೆ ಕೇರಳದಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಆಗಸ್ಟ್​ 10 ರಂದು ಕಾಡುಪ್ರಾಣಿಯ ಮಾಂಸವನ್ನು ಕೆಲವರು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರು ಬೇಟೆಗಾರರನ್ನು ಬಂಧಿಸಿದ್ದರು. ಬಂಧಿತ ಬೇಟೆಗಾರರನ್ನು ಅಬು, ಮುಹಮ್ಮದ್​ ಅನ್ಸಿಫ್​, ಮುಹಮ್ಮದ್​ ಬುಸ್ಥಾನ್​, ಸುಹೇಲ್​ ಮತ್ತು ಆಶಿಖ್ ಎಂದು ಗುರುತಿಸಲಾಗಿದೆ.

ಬಂಧಿತರ ವಿಚಾರಣೆ ವೇಳೆ ಆರೋಪಿಗಳು ಕಾಡೆಮ್ಮೆಯೊಂದನ್ನು ಪಂಚಾ ಅರಣ್ಯದಲ್ಲಿ ಬೇಟೆಯಾಡಿದ್ದು ಅದರ ಮಾಂಸವನ್ನು ತೆಗೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಬೇಟೆಯಾಡಿದ್ದ ಜಾಗಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೇಟೆಯಾದ ಕಾಡೆಮ್ಮೆ ಗರ್ಭಿಣಿಯಾಗಿತ್ತು ಎಂದು ಅದರ ಕಳೆಬರದ ಪರಿಶೀಲನೆ ವೇಳೆ ಗೊತ್ತಾಗಿದೆ. ಈ ಮಾಹಿತಿಯನ್ನು ಬಂಧಿತರು ವಿಚಾರಣೆ ವೇಳೆ ಸಹ ಒಪ್ಪಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕೇಸ್​ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಬಂಧಿತರ ಮನೆಯಿಂದ ಕಾಡೆಮ್ಮೆಯ ಮಾಂಸ ಹಾಗೂ ಒಂದು ದೇಸಿ ಕೋವಿ ಹಾಗೂ ಇತರೆ ಮಾರಕಾಸ್ತ್ರಗಳನ್ನ ಸಹ ವಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ, ಮಾಂಸದ ಆಸೆಗೆ ಬಿದ್ದು ಬಸುರಿ ಎಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು ವಿಚಾರಣೆ ವೇಳೆ ನಾವು ದೇಹ ಬಗಿಯುವಾಗ ಒಳಗೆ ಕರುವಿನ ಕಳೆಬರ ನೋಡಿ ಅದನ್ನು ಮುಟ್ಟಲಿಲ್ಲ ಎಂದರಂತೆ. ಆದರೆ, ಏನು ಪ್ರಯೋಜನ ಕಾಡೆಮ್ಮೆಯ ಕೊರಳು ಹಿಸುಕಿ ಕೊಂದರೆ ಅದರ ಕರುಳಬಳ್ಳಿ ಬದುಕುವುದೇ?

ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ರೋಚಕ 

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್