AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್​ ತಲುಪಿದ ರಾಷ್ಟ್ರಪತಿ ರಾಮನಾಥ ಕೋವಿಂದ್​; ನಾಳೆ ಯೋಧರೊಟ್ಟಿಗೆ ವಿಜಯದಶಮಿ ಆಚರಣೆ

ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್​​ನ ದ್ರಾಸ್​ನಲ್ಲಿರಲಿದ್ದಾರೆ. 1999ರ ಕಾರ್ಗಿಲ್​ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು.

ಲಡಾಖ್​ ತಲುಪಿದ ರಾಷ್ಟ್ರಪತಿ ರಾಮನಾಥ ಕೋವಿಂದ್​; ನಾಳೆ ಯೋಧರೊಟ್ಟಿಗೆ ವಿಜಯದಶಮಿ ಆಚರಣೆ
ರಾಮನಾಥ ಕೋವಿಂದ್​
TV9 Web
| Updated By: Lakshmi Hegde|

Updated on: Oct 14, 2021 | 11:18 AM

Share

ರಾಷ್ಟ್ರಪತಿ ರಾಮನಾಥ ಕೋವಿಂದ್​ (President Ram Nath Kovind) ಅವರು ಇಂದಿನಿಂದ ಎರಡು ದಿನಗಳ ಕಾಲ ಲಡಾಖ್​ ಮತ್ತು ಜಮ್ಮು-ಕಾಶ್ಮೀರ (Jammu-Kahsmir) ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ಈಗಾಗಲೇ ಲಡಾಖ್​ ತಲುಪಲಿದ್ದಾರೆ. ಈ ಬಾರಿಯ ದಸರಾ ಹಬ್ಬವನ್ನು ಅವರು ಲಡಾಖ್​ನ ದ್ರಾಸ್​​​ ಪ್ರದೇಶದಲ್ಲಿ, ಭಾರತೀಯ ಸೇನೆ ಜತೆ ಆಚರಿಸಲು ನಿರ್ಧರಿಸಿದ್ದು, ತನ್ನಿಮಿತ್ತ ಇಂದೇ ಅಲ್ಲಿಗೆ ತೆರಳಲಿದ್ದಾರೆ.  ವಿಶ್ವದಲ್ಲಿ ತಾಪಮಾನ ಅತ್ಯಂತ ಕೆಳಮಟ್ಟಕ್ಕೆ ಇಳಿಯುವ ಪ್ರದೇಶಗಳಲ್ಲಿ ಈ  ದ್ರಾಸ್​​ ಪ್ರದೇಶವೂ ಒಂದು. ಇಲ್ಲಿ ಕೆಲವೊಮ್ಮೆ ತಾಪಮಾನ -40 ಡಿಗ್ರಿ ಸೆಲ್ಸಿಯಸ್​​ಗಿಂತಲೂ ಕೆಳಗೆ ಇಳಿಯುತ್ತದೆ. ರಾಷ್ಟ್ರಪತಿಗಳು ಸಾಮಾನ್ಯವಾಗಿ ದಸರಾ ಹಬ್ಬವನ್ನು ದೆಹಲಿಯಲ್ಲಿಯೇ ಆಚರಿಸುವುದು ಸಂಪ್ರದಾಯ. ಆದರೆ ರಾಮನಾಥ ಕೋವಿಂದ್​ ಈ ಬಾರಿ ಸಂಪ್ರದಾಯ ಮೀರಲಿದ್ದು, ಭಾರತೀಯ ಸೇನೆಯೊಂದಿಗೆ, ದ್ರಾಸ್​​ನಲ್ಲಿ ನವರಾತ್ರಿ ವಿಜಯದಶಮಿ ಆಚರಣೆ ನಡೆಸಲಿದ್ದಾರೆ.  

ರಾಷ್ಟ್ರಪತಿ ರಾಮನಾಥ ಕೋವಿಂದ್​​ರ ಲಡಾಖ್​ ಮತ್ತು ಜಮ್ಮು-ಕಾಶ್ಮೀರ ಭೇಟಿ ಬಗ್ಗೆ ರಾಷ್ಟ್ರಪತಿ ಭವನ ಪ್ರಕಟಣೆ ಬಿಡುಗಡೆ ಮಾಡಿದೆ. ರಾಮನಾಥ ಕೋವಿಂದ್​ ಅವರು ಅಕ್ಟೋಬರ್​ 14 ಮತ್ತು 15ರಂದು ಲಡಾಖ್​, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾರ್ಗಿಲ್​ ಯುದ್ಧದಲ್ಲಿ ಮಡಿದ ಹುತಾತ್ಮರಿಗೆ ಅಕ್ಟೋಬರ್​ 15ರಂದು ರಾಮನಾಥ ಕೋವಿಂದ್​ ಶ್ರದ್ಧಾಂಜಲಿ ಸಲ್ಲಿಸುವರು. ಅದಾದ ಬಳಿಕ ಅಲ್ಲಿನ ಸೇನಾ ಅಧಿಕಾರಿಗಳು ಮತ್ತು ಸೈನಿಕರೊಟ್ಟಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದೆ.

ಮೊದಲ ದಿನ ಅಂದರೆ ಇಂದು ರಾಮನಾಥ ಕೋವಿಂದ್ ಅವರು, ಲಡಾಖ್​ಗೆ ತೆರಳಲಿದ್ದಾರೆ. ಅಲ್ಲಿ ಲೇಹ್​​ನ ಸಿಂಧು ಘಾಟ್​​ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಲಿದ್ದಾರೆ. ಈ ಪ್ರದೇಶ ಶೇಯ್​ ಎಂಬ ಗ್ರಾಮದ ಬಳಿಯಿದ್ದು, ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಪ್ರದೇಶವಾಗಿದೆ.  ಇಂದು ಸಂಜೆ ರಾಮನಾಥ ಕೋವಿಂದ್​ ಜಮ್ಮು-ಕಾಶ್ಮಿರಕ್ಕೆ ತೆರಳಿ ಅಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್​​​ನ ಪ್ರಧಾನ ಕಚೇರಿಯಿರುವ ಉಧಾಂಪುರ ಸ್ಟೇಶನ್​​​ನಲ್ಲಿ ಯೋಧರೊಟ್ಟಿಗೆ ಸಂವಾದ ನಡೆಸುವರು.

ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್​​ನ ದ್ರಾಸ್​ನಲ್ಲಿರಲಿದ್ದಾರೆ. 1999ರ ಕಾರ್ಗಿಲ್​ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು. ಈ ದ್ರಾಸ್​​​ನ್ನು ಲಡಾಖ್​​ನ ಗೇಟ್​ವೇ ಎಂದೇ ಕರೆಯಲಾಗುತ್ತದೆ. ಸಮುದ್ರಮಟ್ಟದಿಂದ ಎತ್ತರವಾಗಿರುವ ಈ ಗುಡ್ಡ ಪ್ರದೇಶ ಟ್ರೆಕ್ಕಿಂಗ್​​ಗೆ ಹೆಸರಾದ ತಾಣ. ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶವಾಗಿದೆ. ಹಾಗೇ, ಅತ್ಯಂತ ಮಹತ್ವವಾದ ಸೇನಾ ತಾಣವೂ ಹೌದು. ತುಂಬ ಚಳಿಯಿರುವ ಈ ಜಾಗದಲ್ಲಿ ಭಾರತೀಯ ಯೋಧರು ನಿಂತು ದೇಶ ರಕ್ಷಣೆ ಮಾಡುತ್ತಿದ್ದಾರೆ. ಅಂಥ ಸೈನಿಕರೊಟ್ಟಿಗೆ ರಾಮನಾಥ ಕೋವಿಂದ್​ ವಿಜಯದಶಮಿ ಆಚರಿಸಲಿದ್ದಾರೆ.

ಇದನ್ನೂ ಓದಿ: Coronavirus cases in India ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು

Mysore Palace Ayudha Puja: ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ, ರಾಜ ವಂಶಸ್ಥರಿಂದ ಪಟ್ಟದ ಕತ್ತಿ, ಪಲ್ಲಕ್ಕಿ ಪೂಜೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ