72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ

ರಾಜಪಥ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಧ್ವಜಾರೋಹಣ ನೇರವೇರಿಸಿದ್ದಾರೆ. ಈ ವೇಳೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥರು, ಸಿಡಿಎಸ್ ರಾವತ್ ಉಪಸ್ಥಿತರಿದ್ರು.

72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ
ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ
ಆಯೇಷಾ ಬಾನು

Updated on: Jan 26, 2021 | 10:28 AM

ದೆಹಲಿ: ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ರಾಜಪಥ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಧ್ವಜಾರೋಹಣ ನೇರವೇರಿಸಿದ್ದಾರೆ. ಈ ವೇಳೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥರು, ಸಿಡಿಎಸ್ ರಾವತ್ ಉಪಸ್ಥಿತರಿದ್ರು.

ದೆಹಲಿಯ ರಾಜಪಥ್‌ನಲ್ಲಿ ವಿಜಯ್‌ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ಆರಂಭಗೊಂಡಿದೆ. ಎರಡು ಸಾಲುಗಳಲ್ಲಿ ವಾಯುಪಡೆ & ನೌಕಾಪಡೆ ತುಕಡಿ ಶಕ್ತಿ ಅನಾವರಣಗೊಳ್ಳುತ್ತಿದೆ. ಇನ್ನು ಪರೇಡ್​ನಲ್ಲಿ 122 ಮಂದಿ ಸೈನಿಕರ ಬಾಂಗ್ಲಾದೇಶ ಸೇನಾ ತುಕಡಿ ಭಾಗಿಯಾಗಿದೆ.

600 ಬದಲು ಈ ಬಾರಿ 160 ವಿದ್ಯಾರ್ಥಿಗಳಷ್ಟೇ ಭಾಗಿಯಾಗಲು ಅವಕಾಶ ನೀಡಲಾಗಿದೆ. ಪ್ರತಿವರ್ಷ 1 ಲಕ್ಷ 15 ಸಾವಿರ ಮಂದಿ ಪರೇಡ್ ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಸೋಂಕು ಹಿನ್ನೆಲೆ ದೈಹಿಕ ಅಂತರ ಪಾಲನೆಯಾಗಬೇಕು ಹೀಗಾಗಿ 25,000 ಮಂದಿಗಷ್ಟೇ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ದೆಹಲಿಯ ರಾಜಪಥ್‌ನಲ್ಲಿ ಯುದ್ಧ ಟ್ಯಾಂಕರ್ ಪರೇಡ್
ರಷ್ಯಾ ನಿರ್ಮಿತ T-90 ಯುದ್ಧ ಟ್ಯಾಂಕರ್​ಗಳ ಪರೇಡ್, ಲೇಸರ್ ನಿಯಂತ್ರಿತ ಟಿ-90 ಟ್ಯಾಂಕರ್‌ಗಳ ಪರೇಡ್, ರಾಕೆಟ್ ಲಾಂಚರ್ ಪಿನಕ, ಬ್ರಹ್ಮೋಸ್​ ಕ್ಷಿಪಣಿ ಪರೇಡ್, ಮಲ್ಟಿ ಲಾಂಚರ್ ರಾಕೆಟ್ ಸಿಸ್ಟಮ್ ಪರೇಡ್, T-72 ಯುದ್ಧ ಟ್ಯಾಂಕರ್ ಪರೇಡ್ ನಡೆಯಿತು.

Published On - 10:08 am, Tue, 26 January 21

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us