AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಗೆ ತೆರಳುವ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ: ಎಚ್ಚರಿಕೆ ನೀಡಿದ ಪಂಜಾಬ್ ರೈತರು

ಸತತ ಐದನೇ ದಿನಕ್ಕೆ ದೆಹಲಿ ಚಲೋ ಕಾಲಿಟ್ಟಿದೆ. ಯಾವುದೇ ಪೂರ್ವಭಾವಿ ಷರತ್ತು ವಿಧಿಸದೇ ಮಾತುಕತೆಗೆ ಒಪ್ಪಿದರೆ ಮಾತ್ರ, ಕೇಂದ್ರ ಸರ್ಕಾರದ ಜೊತೆ ಸಭೆ ನಡೆಸಲು ಸಿದ್ಧರಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

ದೆಹಲಿಗೆ ತೆರಳುವ ಮಾರ್ಗಗಳನ್ನೇ ಬಂದ್ ಮಾಡುತ್ತೇವೆ: ಎಚ್ಚರಿಕೆ ನೀಡಿದ ಪಂಜಾಬ್ ರೈತರು
ಚಳಿಯಲ್ಲಿ ಪ್ರತಿಭಟನಾ ನಿರತ ಪಂಜಾಬ್ ರೈತರು
guruganesh bhat
|

Updated on:Dec 05, 2020 | 11:28 AM

Share

ದೆಹಲಿ: ಪಂಜಾಬ್ ರೈತರ ದೆಹಲಿ ಚಲೋ ಚಳವಳಿ ಐದನೇ ದಿನಕ್ಕೆ ಕಾಲಿಟ್ಟಿದೆ. ಸಿಂಘು-ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್​ ರೈತರು ದೆಹಲಿಯ ಬುರಾರಿಯಲ್ಲಿರುವ ನಿರಂಕಾರಿ ಮೈದಾನಕ್ಕೆ ತೆರಳಲು ನಿರಾಕರಿಸಿದ್ದಾರೆ. ದೆಹಲಿ ಪ್ರವೇಶಿಸುವ ಎಲ್ಲ ಐದು ಮಾರ್ಗಗಳನ್ನು ಮುಚ್ಚುವ ಆಯ್ಕೆಯೂ ತಮ್ಮ ಬಳಿಯಿದೆಯೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಷರತ್ತಿಗೆ ಮಣಿಯಲ್ಲ ಗೃಹ ಸಚಿವ ಅಮಿತ್ ಶಾ ನಿರಂಕಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಒದಗಿಸುವ ಭರವಸೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್​ ನಾಯಕ ಹರ್ಮೀತ್ ಸಿಂಗ್, ‘ಯಾವುದೇ ಪೂರ್ವಭಾವಿ ಷರತ್ತು ವಿಧಿಸದೇ ಮಾತುಕತೆಗೆ ಒಪ್ಪಿದರೆ ಮಾತ್ರ, ಕೇಂದ್ರ ಸರ್ಕಾರದ ಜೊತೆ ಸಭೆ ನಡೆಸಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು. ಇನ್ನೂ ಸಾವಿರಾರು ರೈತರು ಈ ಪ್ರತಿಭಟನೆಯನ್ನು ಸೇರಿಕೊಳ್ಳಲಿದ್ದಾರೆ. ನಿರಂಕಾರಿ ಮೈದಾನವನ್ನು ಕೆಲವು ರೈತರು ತಲುಪಿದರೂ ಅದು ತೆರೆದ ಜೈಲಿಗೆ ಸಮ’ ಎಂದು ಸಹ ಅವರು ಹೇಳಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಗಾಜಿಯಾಬಾದ್​ನ ಬಳಿ ಪೊಲೀಸರು ರಸ್ತೆ ತಡೆಹಿಡಿಯುತ್ತಿರುವುದು

ಸರ್ಕಾರ ರೈತರನ್ನು ಭಯೋತ್ಪಾಕರಂತೆ ನಡೆಸಿಕೊಳ್ಳುತ್ತಿದೆ ದೆಹಲಿ ಚಲೋ ವಿಷಯದಲ್ಲಿ ಬಿಜೆಪಿ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಶಿವಸೇನೆ ಟೀಕಿಸಿದೆ. ಶಿವಸೇನಾ ಸಂಸದ ಸಂಜಯ್ ರಾವುತ್, ಕೇಂದ್ರವು ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ. ರೈತರ ಬೇಡಿಕೆಗಳನ್ನು ಆಲಿಸಬೇಕಿತ್ತು. ಬದಲಿಗೆ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಹರಿಹಾಯ್ದಿದ್ದಾರೆ.

ಇನ್ನಷ್ಟು.. ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು ಪ್ರತಿಭಟನೆ ಸ್ಥಳ ಬದಲಿಸಿದರೆ ಮಾತುಕತೆ ಎಂಬ ಅಮಿತ್​ ಶಾ ಷರತ್ತಿಗೆ ರೈತರ ತಿರಸ್ಕಾರ ‘ದೆಹಲಿ ಚಲೋ; ಪ್ರತಿಭಟನಾಕಾರರ ರೌದ್ರಾವತಾರ; ಪೊಲೀಸರತ್ತ ಇಟ್ಟಿಗೆ ಎಸೆದ ರೈತರು ಏನೇ ಆಗ್ಲಿ, ದೆಹಲಿ ತಲುಪೇ ತಲುಪುತ್ತೇವೆ -6 ತಿಂಗಳ ದಿನಸಿ ಹೊತ್ತು ದೆಹಲಿಯತ್ತ ಸಾಗಿದ ರೈತನ ಆಕ್ರೋಶ

Published On - 11:28 am, Mon, 30 November 20

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್