ಸುದ್ದಿಗೋಷ್ಠಿಯಲ್ಲಿ ಅವಾಚ್ಯ ಪದ ಬಳಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು; ನೆಟ್ಟಿಗರಿಂದ ಟೀಕೆ

Navjot Singh Sidhu ಚಂಡೀಗಢದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದಿಂದ ಲೇಬರ್ ಕಾರ್ಡ್‌ಗಳ ವಿತರಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಧು ಕೆಟ್ಟ ಪದ ಬಳಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವಾಚ್ಯ ಪದ ಬಳಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು; ನೆಟ್ಟಿಗರಿಂದ ಟೀಕೆ
ನವಜೋತ್ ಸಿಂಗ್ ಸಿಧು
Edited By:

Updated on: Dec 17, 2021 | 4:31 PM

ದೆಹಲಿ: ಪಂಜಾಬ್ ಕಾಂಗ್ರೆಸ್ (Punjab Congress)ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಸಂವಾದದ ವೇಳೆ ಕೆಟ್ಟ ಪದ ಬಳಸಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಚಂಡೀಗಢದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದಿಂದ ಲೇಬರ್ ಕಾರ್ಡ್‌ಗಳ ವಿತರಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಧು ಕೆಟ್ಟ ಪದ ಬಳಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಧು ಮುಜುಗರಕ್ಕೊಳಗಾಗಿದ್ದಾರೆ. ಇದು ಯಾರೊಂದಿಗಾದರೂ ಆಗಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದು, ಸಾರ್ವಜನಿಕವಾಗಿ ಈ ರೀತಿ ವರ್ತಿಸಿದ್ದಕ್ಕೆ ಟೀಕಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನಾನು ಅವರನ್ನು ವಿಶೇಷವಾಗಿ ದೂಷಿಸುವುದಿಲ್ಲ. ಇದು ಪಂಜಾಬಿ ವಿಷಯ ಮತ್ತು ಉತ್ತರ ಭಾರತದಲ್ಲಿ ಪ್ರಚಲಿತವಾಗಿದೆ. ಆದರೆ, ಅವರು ಈ ರೀತಿ ಹೇಳುವ  ಮೊದಲು ಸ್ವಲ್ಪ ಯೋಚಿಸಬಹುದಿತ್ತು. ನಮ್ಮಲ್ಲಿ ಹೆಚ್ಚಿನವರಿಗೆ ಸಂಭವಿಸುತ್ತದೆ ಎಂದು ಆಯುಷ್ ಎಂಬ ಟ್ವೀಟಿ ಗ ಪ್ರತಿಕ್ರಿಯಿಸಿದ್ದಾರೆ.

ನಾವು ಚಲನಚಿತ್ರಗಳಲ್ಲಿ MC BC ಅನ್ನು ಬಳಸುವಾಗ ಸೆನ್ಸಾರ್ ಮಂಡಳಿಯು ಅವುಗಳನ್ನು ಮ್ಯೂಟ್ ಮಾಡಲು ಅಥವಾ A ಪ್ರಮಾಣೀಕರಣವನ್ನು ತೆಗೆದುಕೊಳ್ಳಲು ಬಯಸುತ್ತದೆ. ಮತ್ತೊಂದೆಡೆ ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಿಂದ ಎಡ ಬಲ ಮತ್ತು ಮಧ್ಯದಿಂದ ಎಂಸಿ ಬಿಸಿ  ಎಂದು ಹೇಳುತ್ತಿದ್ದಾರೆ ಎಂದು  ದೂಪ್ ಅಶ್ವಿನಿ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಸ್ವಲ್ಪ ಹಿಂದೆ   ಕರ್ನಾಟಕ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅತ್ಯಾಚಾರವನ್ನು ವೈಭವೀಕರಿಸುತ್ತಿದ್ದರು ಮತ್ತು ಇಲ್ಲಿ ಈ ವ್ಯಕ್ತಿ ಅವಾಚ್ಯ  ಪದ ಬಳಸಿದ್ದಾರೆ. ಕಾಂಗ್ರೆಸ್​​ಗೆ ನಾಚಿಕೆಗೇಡು ಎಂದು  ಮತ್ತೊಬ್ಬರು  ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ