AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯುವ ಕೆಲವೇ ಗಂಟೆಗಳ ಮೊದಲು ಅಳಬೇಡ ಎಂದಿದ್ದರು ನನ್ನಜ್ಜಿ: ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ

ಅಜ್ಜಿಯ ಅಂತ್ಯಕ್ರಿಯೆ ನಡೆದ ದಿನವು ನನ್ನ ಜೀವನದ 2ನೇ ಅತ್ಯಂತ ಕಠಿಣ ದಿನ ಅದಾಗಿತ್ತು ಎಂದು ಹೇಳಿದರು.

ಸಾಯುವ ಕೆಲವೇ ಗಂಟೆಗಳ ಮೊದಲು ಅಳಬೇಡ ಎಂದಿದ್ದರು ನನ್ನಜ್ಜಿ: ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ
ಇಂದಿರಾ ಗಾಂಧಿ ಪಾರ್ಥಿವ ಶರೀರದೊಂದಿಗೆ ರಾಹುಲ್ ಗಾಂಧಿ (ಎಡಚಿತ್ರ)
TV9 Web
| Edited By: |

Updated on:Oct 31, 2021 | 9:57 PM

Share

ದೆಹಲಿ: ಇಂದಿರಾ ಗಾಂಧಿ ಹತ್ಯೆ ಮತ್ತು ಅಂತ್ಯಕ್ರಿಯೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಒಂದು ವೇಳೆ ನನಗೇನಾದರೂ ಆದರೆ ಅಳಬಾರದು ಎಂದು ಅಜ್ಜಿ ತಾನು ಸಾಯುವ ಕೆಲವೇ ಗಂಟೆಗಳ ಮೊದಲು ಹೇಳಿದ್ದರು’ ಎಂದು ನೆನಪಿಸಿಕೊಂಡರು. ಇಂದಿರಾ ಗಾಂಧಿ ಅವರ 37ನೇ ಪುಣ್ಯತಿಥಿ ಅಂಗವಾಗಿ ಯುಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, ಅಜ್ಜಿಯ ಅಂತ್ಯಕ್ರಿಯೆ ನಡೆದ ದಿನವು ನನ್ನ ಜೀವನದ 2ನೇ ಅತ್ಯಂತ ಕಠಿಣ ದಿನ ಅದಾಗಿತ್ತು ಎಂದು ಹೇಳಿದರು.

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 1984ರಲ್ಲಿ ಅವರ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ‘ನನಗೆ ಏನಾದರೂ ಆದರೆ ನೀನು ಅಳಬಾರದು ಎಂದು ಹೇಳಿದ ಎರಡು-ಮೂರು ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದರು. ನನಗೆ ಅವರು ಹಾಗೆ ಏಕೆ ಹೇಳಿದರು ಎನ್ನುವುದು ಈವರೆಗೆ ಅರ್ಥವಾಗಲಿಲ್ಲ. ತಮಗೆ ಹಾಗೂ ತಮ್ಮ ಕುಟುಂಬ ಆ ದಿನ ಅನುಭವಿಸಿದ ಸಂಕಟದ ಕ್ಷಣಗಳ ಬಗ್ಗೆ ಅವರು ಬೇಸರ ತೋಡಿಕೊಂಡರು.

‘ತನ್ನನ್ನು ಕೊಲ್ಲಲಾಗುವುದು ಎಂಬ ಅನುಮಾನ ಅವರಿಗೆ (ಇಂದಿರಾ ಗಾಂಧಿ) ಬಂದಿತ್ತು. ಮನೆಯಲ್ಲಿದ್ದ ಎಲ್ಲರಿಗೂ ಈ ವಿಷಯ ಗೊತ್ತಿತ್ತು. ರೋಗ ಬಂದು ಸಾಯುವುದು ಕೆಟ್ಟ ಶಾಪ ಎಂದು ಊಟ ಮಾಡುವಾಗ ಒಮ್ಮೆ ಹೇಳಿದ್ದರು. ‘With love, in memory of my beloved Grandmother, Indira ji’ (ನನ್ನ ಪ್ರೀತಿಯ ಅಜ್ಜಿಯ ನೆನಪಿನೊಂದಿಗೆ) ಎಂಬ ಹೆಸರಿನ ವಿಡಿಯೊದಲ್ಲಿ ರಾಹುಲ್ ಗಾಂಧಿ ಮನದ ಮಾತು ಹಂಚಿಕೊಂಡಿದ್ದಾರೆ.

ತಾನು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಮತ್ತು ತನ್ನ ದೇಶಕ್ಕಾಗಿ ಸಾಯುವುದು ಒಳ್ಳೆಯದು ಎಂಬುದು ಅವರ (ಇಂದಿರಾ ಗಾಂಧಿ) ಉದ್ದೇಶವಾಗಿತ್ತು. ನನಗೆ ಇಬ್ಬರು ಅಮ್ಮಂದಿರಿದ್ದರು. ನನ್ನ ಅಜ್ಜಿ ನನ್ನ ಪಾಲಿನ ಸೂಪರ್​ ಅಮ್ಮ ಆಗಿದ್ದರು. ಅಪ್ಪ ಸಿಟ್ಟು ಮಾಡಿಕೊಂಡಾಗ ನನ್ನ ಪರ ಮಾತನಾಡುತ್ತಿದ್ದರು. ಅಜ್ಜಿ ಸತ್ತ ದಿನ ನನಗೆ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗಿತ್ತು ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಅಂತಿಮಯಾತ್ರೆ ಮತ್ತು ಅಂತ್ಯಕ್ರಿಯೆಯ ದೃಶ್ಯಾವಳಿಗಳೂ ಈ ವಿಡಿಯೊದಲ್ಲಿವೆ. ಬಾಲಕ ರಾಹುಲ್ ಅಜ್ಜಿಯ ಸಾವಿನ ದಿನ ಶೋಕ ವ್ಯಕ್ತಪಡಿಸಿದ ದೃಶ್ಯವೂ ವಿಡಿಯೊದಲ್ಲಿದೆ. ಭಾನುವಾರ ಮುಂಜಾನೆ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು.

ಕೊನೆಯ ಕ್ಷಣದವರೆಗೂ ನನ್ನ ಅಜ್ಜಿಗೆ ದೇಶದ ಹಿತವೇ ಮುಖ್ಯವಾಗಿತ್ತು. ಆಕೆಯ ಬದುಕು ನಮಗೆ ಸ್ಫೂರ್ತಿ ಎಂದು ರಾಹುಲ್ ಗಾಂಧಿ ಹಿಂದಿ ಟ್ವೀಟ್​ನಲ್ಲಿ ಹೇಳಿದ್ದರು. ಮಹಿಳಾ ಶಕ್ತಿಯ ಅತ್ಯುತ್ತಮ ಉದಾಹರಣೆ. ಇಂದಿರಾ ಗಾಂಧಿ ಹುತಾತ್ಮರಾದ ದಿನದಂದು ಅವರಿಗೆ ನನ್ನ ನಮನಗಳು ಎಂದು ಹೇಳಿದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬೆನ್ನಲ್ಲೇ ಗೋವಾಕ್ಕೆ ತೆರಳಿದ ರಾಹುಲ್ ಗಾಂಧಿ; ಇಂದು ಮೀನುಗಾರರೊಂದಿಗೆ ಮಾತುಕತೆ ಇದನ್ನೂ ಓದಿ: RIP Puneeth Rajkumar: ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರ ಸಂತಾಪ

Published On - 9:57 pm, Sun, 31 October 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ