ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಏಕೆ ಕಳಿಸಿದ್ರಿ? -ಮೋದಿಗೆ ಮತ್ತೆ ಅದೇ ಪ್ರಶ್ನೆ ಕೇಳಿದ ರಾಹುಲ್​

ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್​​ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್​​ ಗಾಂಧಿ ಪ್ರಶ್ನಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ […]

ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಏಕೆ ಕಳಿಸಿದ್ರಿ? -ಮೋದಿಗೆ ಮತ್ತೆ ಅದೇ ಪ್ರಶ್ನೆ ಕೇಳಿದ ರಾಹುಲ್​
ಸಾಧು ಶ್ರೀನಾಥ್​ Edited By:

Updated on: Jun 26, 2020 | 6:15 PM

ದೆಹಲಿ: ರಾತ್ರಿಯೆಲ್ಲಾ ಭಾರತ-ಚೀನಾ ನಡುವಣ ರಾಮಾಯಣ ಕೇಳಿದ ರಾಹುಲ್ ಗಾಂಧಿ ಬೆಳಗಾನೆದ್ದು ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪ್ರಧಾನ ಮಂತ್ರಿ ಜೀ ನೀವು ನಮಗೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ, ಗಾಬರಿ ಆಗಬೇಡಿ. ನೀವು ಭಾರತದ ಒಂದಿಂಚೂ ಭೂಮಿ ಅತಿಕ್ರಮಿಸಿಲ್ಲ ಅಂತೀರಿ. ಆದರೆ ಲಡಾಖ್​​ ಜನರು, ಸೇನೆಯ ನಿವೃತ್ತ ಅಧಿಕಾರಿಗಳು ಚೀನಾ ನಮ್ಮ ಭೂಮಿಯನ್ನ ಆಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ರಾಹುಲ್​​ ಗಾಂಧಿ ಪ್ರಶ್ನಿಸಿದ್ದಾರೆ.

ನಾವೆಲ್ಲರೂ ಒಗ್ಗಟ್ಟಾಗಿ ಭಾರತದ ಭೂಮಿಯಿಂದ ಚೀನಾ ಸೇನೆಯನ್ನು ವಾಪಸ್ ಓಡಿಸಬೇಕು. ಇದರ ಬಗ್ಗೆ ನೀವು ಮಾತನಾಡಬೇಕು. ಗಾಲ್ವಾನ್ ಕಣಿವೆಯಲ್ಲಿ ಶಸ್ತ್ರಾಸ್ತ್ರ ಇಲ್ಲದೇ ನಮ್ಮ ಸೈನಿಕರನ್ನ ಏಕೆ ಕಳಿಸಿದ್ರಿ? ಯಾರು ಕಳುಹಿಸಿದರು? ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

Published On - 6:02 pm, Fri, 26 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us