AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ. ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ […]

ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ
ಆಯೇಷಾ ಬಾನು
| Edited By: |

Updated on:Jul 28, 2020 | 12:04 PM

Share

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ.

ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ ಷೇರು ಶೇಕಡಾ 50 ರಷ್ಟು ಏರಿಕೆಯಾಗಿದೆ. ರಿಲಯನ್ಸ್ ಸಂಸ್ಥೆ ಈಗಾಗಲೇ ಡಿಜಿಟಲ್ ಮತ್ತು ರಿಟೇಲ್ ಉದ್ಯಮಗಳಲ್ಲಿ ಶೇಕಡಾ 46ರಷ್ಟು ವಿದೇಶಿ ಹೂಡಿಕೆ ಗಿಟ್ಟಿಸಿಕೊಂಡಿದ್ದು ಸ್ವದೇಶದ ಹೂಡಿಕೆದಾರರನ್ನು ಸಹ ಸೆಳೆಯುತ್ತಿದೆ.

ತಮ್ಮ ತಂದೆ ಧೀರೂಭಾಯಿ ಮರಣಾನಂತರ ಕಂಪನಿಯ ಸಾರಥ್ಯವಹಿಸಿಕೊಂಡ ಮುಕೇಶ್, ಅತ್ಯಂತ ಚಾಣಾಕ್ಷತೆಯಂದ ಅದನ್ನು ಮುನ್ನಡೆಸುತ್ತಾ ವಿಶ್ವದ ಅತಿದೊಡ್ಡ ಕಂಪನಿಗಳಲ್ಲೊಂದಾಗಿ ಮಾರ್ಪಡಿಸಿದ್ದಾರೆ. ಅವರ ಕಾರ್ಯಕ್ಷಮತೆ ಮತ್ತು ವ್ಯಾವಹಾರಿಕ ಬದ್ಧಿಮತ್ತಗೆ ಮಾರುಹೋಗಿರುವ ಗೂಗಲ್ ಮತ್ತು ಫೇಸ್ಬುಕ್ನಂಥ ಪ್ರತಿಷ್ಥಿತ ಸಂಸ್ಥೆಗಳು ಸಹ ರಿಲಯನ್ಸ್ನಲ್ಲಿ ಹೂಡಿಕೆ ಮಾಡಿವೆ.

ಕೊರೊನಾ ಹೊಡೆತಕ್ಕೆ ವಿಶ್ವದ ಎಲ್ಲಾ ಪ್ರಮುಖ ಕಂಪನಿಗಳು ತತ್ತರಿಸಿ ಅಪಾರ ನಷ್ಟ ಅನುಭವಿಸುತ್ತಿದ್ದರೆ, ರಿಲಯನ್ಸ್ ಮಾತ್ರ ತನ್ನ ಮಾರುಕಟ್ಟೆ ಹಾಗೂ ವಹಿವಾಟನ್ನು ಸತತವಾಗಿ ವಿಸ್ತರಿಸುತ್ತಿದೆ.

Published On - 8:06 am, Tue, 28 July 20

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ