Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ. ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ […]

ರಿಲಯನ್ಸ್ ಮತ್ತೊಂದು ಮೈಲಿಗಲ್ಲು, ಇಂಧನ ವಲಯದಲ್ಲಿ ಜಾಗತಿಕವಾಗಿ 2ನೇ ಸ್ಥಾನ
Follow us
ಆಯೇಷಾ ಬಾನು
| Updated By:

Updated on:Jul 28, 2020 | 12:04 PM

ವಿಶ್ವದ ಅತಿದೊಡ್ಡ ಉದ್ದಿಮೆಯಾಗಿ ಬೆಳೆಯುವತ್ತ ದಾಪುಗಾಲಿಡುತ್ತಿರುವ ಮುಕೇಶ್ ಆಂಬಾನಿಯ ರಿಲಯನ್ಸ್ ಸಂಸ್ಥೆಯು, ಕಳೆದ ಶುಕ್ರವಾರದಂದು ತನ್ನ ಗುರಿಗೆ ಮತ್ತಷ್ಟು ಹತ್ತಿರವಾಗಿದೆ. ಇಂಧನ ವಲಯದಲ್ಲಿ ಅಮೆರಿಕದ ದೈತ್ಯ ಎಕ್ಸಾನ್ ಕಂಪನಿಯನ್ನು ಹಿಂದಿಕ್ಕಿರುವ ರಿಲಯನ್ಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1.75 ಟ್ರಿಲಿಯನ್ ಡಾಲರ್ನಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸೌದಿ ಅರೇಬಿಯಾದ ಅರಾಮ್ಕೊ ಸಂಸ್ಥೆ ಮಾತ್ರ ರಿಲಯನ್ಸ್ ಇಂಡಸ್ಟ್ರೀಸ್ಗಿಂತ ಗಾತ್ರ, ಆದಾಯ ಮತ್ತು ವಹಿವಾಟಿನಲ್ಲಿ ಮುಂದಿದೆ.

ಮೂಲಗಳ ಪ್ರಕಾರ ಈ ವರ್ಷ ಅಂಬಾನಿ ಕಂಪನಿಯ ಷೇರು ಶೇಕಡಾ 50 ರಷ್ಟು ಏರಿಕೆಯಾಗಿದೆ. ರಿಲಯನ್ಸ್ ಸಂಸ್ಥೆ ಈಗಾಗಲೇ ಡಿಜಿಟಲ್ ಮತ್ತು ರಿಟೇಲ್ ಉದ್ಯಮಗಳಲ್ಲಿ ಶೇಕಡಾ 46ರಷ್ಟು ವಿದೇಶಿ ಹೂಡಿಕೆ ಗಿಟ್ಟಿಸಿಕೊಂಡಿದ್ದು ಸ್ವದೇಶದ ಹೂಡಿಕೆದಾರರನ್ನು ಸಹ ಸೆಳೆಯುತ್ತಿದೆ.

ತಮ್ಮ ತಂದೆ ಧೀರೂಭಾಯಿ ಮರಣಾನಂತರ ಕಂಪನಿಯ ಸಾರಥ್ಯವಹಿಸಿಕೊಂಡ ಮುಕೇಶ್, ಅತ್ಯಂತ ಚಾಣಾಕ್ಷತೆಯಂದ ಅದನ್ನು ಮುನ್ನಡೆಸುತ್ತಾ ವಿಶ್ವದ ಅತಿದೊಡ್ಡ ಕಂಪನಿಗಳಲ್ಲೊಂದಾಗಿ ಮಾರ್ಪಡಿಸಿದ್ದಾರೆ. ಅವರ ಕಾರ್ಯಕ್ಷಮತೆ ಮತ್ತು ವ್ಯಾವಹಾರಿಕ ಬದ್ಧಿಮತ್ತಗೆ ಮಾರುಹೋಗಿರುವ ಗೂಗಲ್ ಮತ್ತು ಫೇಸ್ಬುಕ್ನಂಥ ಪ್ರತಿಷ್ಥಿತ ಸಂಸ್ಥೆಗಳು ಸಹ ರಿಲಯನ್ಸ್ನಲ್ಲಿ ಹೂಡಿಕೆ ಮಾಡಿವೆ.

ಕೊರೊನಾ ಹೊಡೆತಕ್ಕೆ ವಿಶ್ವದ ಎಲ್ಲಾ ಪ್ರಮುಖ ಕಂಪನಿಗಳು ತತ್ತರಿಸಿ ಅಪಾರ ನಷ್ಟ ಅನುಭವಿಸುತ್ತಿದ್ದರೆ, ರಿಲಯನ್ಸ್ ಮಾತ್ರ ತನ್ನ ಮಾರುಕಟ್ಟೆ ಹಾಗೂ ವಹಿವಾಟನ್ನು ಸತತವಾಗಿ ವಿಸ್ತರಿಸುತ್ತಿದೆ.

Published On - 8:06 am, Tue, 28 July 20

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ