AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಬೆಳಗ್ಗೆಯೊಳಗೆ ಮಾಳವಿಯಾನನ್ನು ಐಟಿ ಸೆಲ್​ನಿಂದ ಕಿತ್ತೊಗೆಯಿರಿ: ಸುಬ್ರಮಣಿಯನ್​ ಸ್ವಾಮಿ

ಬೆಳಗ್ಗೆಯಷ್ಟೇ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಸಿಡಿದೆದ್ದಿದ್ದ ಹೆಸರಾಂತ ವಕೀಲ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್​ ಸ್ವಾಮಿ ಅವರು ಮತ್ತೊಂದು ಟ್ವೀಟ್ ಮೂಲಕ ಎನ್ಇಇಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪರ ಬ್ಯಾಟ್ ಬೀಸಿದ್ದಾರೆ. ಮೊದಲಿಗೆ ಅವರು ಮಾಳವಿಯಾ ಕುರಿತು ಮಾಡಿರುವ ಟ್ವೀಟ್ ನೋಡೋಣ. ‘‘ನಾಳೆ ಬೆಳಗ್ಗೆಯೊಳಗೆ ಅಮಿತ್ ಮಾಳವಿಯಾರನ್ನು ಬಿಜೆಪಿ ಐಟಿ ಸೆಲ್‌ನಿಂದ ಕಿತ್ತೊಗೆಯದಿದ್ದರೆ ಪಕ್ಷಕ್ಕೆ ನನ್ನನ್ನು ಸಮರ್ಥಿಸುವ ಇರಾದೆ ಇಲ್ಲವೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. […]

ನಾಳೆ ಬೆಳಗ್ಗೆಯೊಳಗೆ ಮಾಳವಿಯಾನನ್ನು ಐಟಿ ಸೆಲ್​ನಿಂದ ಕಿತ್ತೊಗೆಯಿರಿ: ಸುಬ್ರಮಣಿಯನ್​ ಸ್ವಾಮಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 09, 2020 | 2:47 PM

ಬೆಳಗ್ಗೆಯಷ್ಟೇ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಸಿಡಿದೆದ್ದಿದ್ದ ಹೆಸರಾಂತ ವಕೀಲ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್​ ಸ್ವಾಮಿ ಅವರು ಮತ್ತೊಂದು ಟ್ವೀಟ್ ಮೂಲಕ ಎನ್ಇಇಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪರ ಬ್ಯಾಟ್ ಬೀಸಿದ್ದಾರೆ. ಮೊದಲಿಗೆ ಅವರು ಮಾಳವಿಯಾ ಕುರಿತು ಮಾಡಿರುವ ಟ್ವೀಟ್ ನೋಡೋಣ.

‘‘ನಾಳೆ ಬೆಳಗ್ಗೆಯೊಳಗೆ ಅಮಿತ್ ಮಾಳವಿಯಾರನ್ನು ಬಿಜೆಪಿ ಐಟಿ ಸೆಲ್‌ನಿಂದ ಕಿತ್ತೊಗೆಯದಿದ್ದರೆ ಪಕ್ಷಕ್ಕೆ ನನ್ನನ್ನು ಸಮರ್ಥಿಸುವ ಇರಾದೆ ಇಲ್ಲವೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪಕ್ಷದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬೇರೆ ವೇದಿಕೆ ಇಲ್ಲದಿರುವುದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕಾಗಿದೆ.,’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಾಳವಿಯಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಟ್ವೀಟ್ ಮಾಡಿದ್ದು ಅದರಲ್ಲಿ, ‘‘ಮಾಳವಿಯಾ ಅವರಿಂದಾಗಿ ಪಕ್ಷದ ಐಟಿ ಸೆಲ್ ಗಬ್ಬು ನಾರುತ್ತಿದೆ, ನಮ್ಮದು ಮರ್ಯಾದಾ ಪರುಷೋತ್ತಮ ರಾಮನ ಪಕ್ಷವೇ ಹೊರತು, ರಾವಣ ಅಥವಾ ದುಶ್ಶಾಸನನ ಪಕ್ಷವಲ್ಲ,’’ ಎಂದಿದ್ದಾರೆ.

ಎನ್ಇಇಟಿ ಪರೀಕ್ಷೆಯ ಬಗ್ಗೆ ಮಾಡಿರುವ ಟ್ವೀಟ್​ನಲ್ಲಿ ಸ್ವಾಮಿ, ವಿದ್ಯಾರ್ಥಿಗಳ ಪರ ಕೆ ಟಿ ಎಸ್ ತುಳ್ಸಿ ಅವರು ವಕಾಲತ್ತು ಮಾಡಲಿದ್ದು ಅವರೊಬ್ಬ ಅತ್ಯಂತ ಸಮರ್ಥ ವಕೀಲರಾಗಿದ್ದಾರೆ ಎಂದು ಹೇಳಿದ್ದಾರೆ.

‘‘ಇಂದು ಸರ್ವೋಚ್ಛ ನ್ಯಾಯಾಲಯ ಎನ್ಇಇಟಿ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ವಿದ್ಯಾರ್ಥಿಗಳ ಪರವಾಗಿ ಕೆ ಟಿ ಎಸ್ ತುಳ್ಸಿ ಅವರು ವಾದಿಸಲಿದ್ದಾರೆ. ಅವರು ನಿಸ್ಸಂದೇಹವಾಗಿಯೂ ಒಬ್ಬ ಅತ್ಯುತ್ತಮ ವಕೀಲ. 1990-91ರಲ್ಲಿ ನಾನು ಕಾನೂನು ಸಚಿವನಾಗಿದ್ದಾಗ ತುಳ್ಸಿಯವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿದ್ದೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಒಳ್ಳೆಯದಾಗುವ ಬಗ್ಗೆ ನಿರೀಕ್ಷೆಯಿಟ್ಟುಕೊಳ್ಳಬಹುದಾಗಿದೆ. ಆದರೆ, ಜೀವನದಲ್ಲಿ ನಾವಂದುಕೊಂಡಿರುವುದು ಸಂಭವಿಸುವವರೆಗೆ ಯಾವುದೂ ನಿಶ್ಚಿತವಲ್ಲ,’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಾಗೆಯೇ, ಇವತ್ತಿನ ಮತ್ತೊಂದು ಟ್ವೀಟ್​ನಲ್ಲಿ ಸ್ವಾಮಿ ಅವರು, ನಟಿ ಕಂಗನಾ ರನೌತ್ ಅವರಿಗೆ ಹೆದರದಿರುವಂತೆ ಹೇಳಿದ್ದಾರೆ. ‘‘ಕಂಗನಾ ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ನಾವೆಲ್ಲ ಆಕೆಯ ಹೋರಾಟದಲ್ಲಿ ಜೊತೆಗಿದ್ದೇವೆ,’‘ ಎಂದು ಸ್ವಾಮಿ ಹೇಳಿದ್ದಾರೆ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ