ಗಣರಾಜ್ಯೋತ್ಸವ
ನವದೆಹಲಿ, ಜನವರಿ 26: ದೇಶದಾದ್ಯಂತ ಇಂದು 77ನೇ ಗಣರಾಜ್ಯೋತ್ಸವವನ್ನು (Republic Day 2026) ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ಕರ್ತವ್ಯಪಥ, ಬೆಂಗಳೂರಿನ ಮಾಣೆಕ್ ಶಾ ಮೈದಾನ ಸೇರಿದಂತೆ ನಾಡಿನಾದ್ಯಂತ ಗಣರಾಜ್ಯೋತ್ಸವ ದಿನನ ಆಚರಿಸಲಾಗಿದ್ದು, ಸಂಭ್ರಮ ಮುಗಿಲುಮುಟ್ಟಿದೆ. ಹಲವು ಕಾರಣಗಳಿಂದ ಈ ವರ್ಷದ ಗಣರಾಜ್ಯೋತ್ಸವ ವಿಶೇಷ ಮಹತ್ವವನ್ನೂ ಪಡೆದಿದೆ. ಹಾಗಾದರೆ, ಈ ಬಾರಿಯ ಗಣತಂತ್ರ ದಿವಸನದ ವಿಶೇಷಗಳೇನು? ಇಲ್ಲಿದೆ ಮಾಹಿತಿ.
- ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಬಂಕಿಮಚಂದ್ರ ಚಟರ್ಜಿ (ಬಂಕಿಮಚಂದ್ರ ಚಟ್ಟೋಪಾಧ್ಯಾಯ) ರಚಿಸಿದ ‘ವಂದೇ ಮಾತರಂ’ನ 150ನೇ ವರ್ಷಾಚರಣೆ. ಈ ಸಂಭ್ರಮವನ್ನು ವರ್ಷಪೂರ್ತಿ ಆಚರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2025 ರ ನವೆಂಬರ್ 7 ರಂದು ಕರೆ ನೀಡಿದ್ದರು.
- ಸಮೃದ್ಧಿ ಕಾ ಮಂತ್ರ್- ಆತ್ಮನಿರ್ಭರ ಭಾರತ: ರಾಷ್ಟ್ರದ ಸ್ವಾವಲಂಬನೆ ಮತ್ತು ಕಳೆದ ವರ್ಷದ ಸಾಧನೆಗಳನ್ನು ಈ ಥೀಮ್ ಪ್ರತಿಬಿಂಬಿಸುತ್ತದೆ.
- ಆಪರೇಷನ್ ಸಿಂದೂರ್ ಮತ್ತು ಮಿಷನ್ ಸುದರ್ಶನ ಚಕ್ರ: ಭಯೋತ್ಪಾದನೆಯ ವಿರುದ್ಧ ಭಾರತದ ದಿಟ್ಟ ಪ್ರತಿಕ್ರಿಯೆಯನ್ನು ಪರೇಡ್ನ ಈ ಥೀಮ್ ಮೂಲಕ ಎತ್ತಿ ತೋರಿಸಲಾಯಿತು. ವಿಶೇಷವಾಗಿ 2025ರ ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ‘ಆಪರೇಷನ್ ಸಿಂದೂರ್’ ಥೀಮ್ ಪ್ರದರ್ಶಿಸುತ್ತಿರುವುದು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ವಿಶೇಷ.
- ಭಾರತೀಯ ಸೇನೆಯು ಆಧುನಿಕ ಯುದ್ಧ ಸನ್ನದ್ಧ ಮತ್ತು ರಕ್ಷಣಾ ಸಾಮರ್ಥ್ಯವನ್ನು ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾಯಿತು.
- ಪ್ಯಾರಾಶೂಟ್ ರೆಜಿಮೆಂಟ್, ಬ್ರಿಗೇಡ್ ಆಫ್ ದಿ ಗಾರ್ಡ್ಸ್ ಮತ್ತು ರಜಪೂತಾನ ರೈಫಲ್ಸ್ನ 75 ಸಂಗೀತಗಾರರ ತಂಡವು ಲತಾ ಮಂಗೇಶ್ಕರ್ ಅವರು ಹಾಡಿರುವ ‘ವಂದೇ ಮಾತರಂ’ ಆವೃತ್ತಿಯನ್ನು ನುಡಿಸಿತು.
- ‘ಆಯುಷ್ ಕಾ ತಂತ್ರ, ಸ್ವಾಸ್ಥ್ಯ ಕಾ ಮಂತ್ರ’ ಎಂಬ ವಿಷಯದ ಅಡಿಯಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿ ಪ್ರದರ್ಶನ.
- ಎಐ, ನವೀಕರಿಸಬಹುದಾದ ಇಂಧನ ಮತ್ತು ಸೆಮಿಕಂಡಕ್ಟರ್ಗಳಂತಹ ಭವಿಷ್ಯದ ಕ್ಷೇತ್ರಗಳ ಮೇಲೆ ಗಮನ ಹರಿಸಿದ ಟ್ಯಾಬ್ಲೋಗಳು.
- ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಭಾರತದ ಮೊದಲ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ.
- ಬಿಎಸ್ಎಫ್ನ ವಿಶ್ವದ ಏಕೈಕ ಒಂಟೆ ಸವಾರರ ಬ್ಯಾಂಡ್ ತಂಡವು ಈ ಮೆರವಣಿಗೆಯಲ್ಲಿ ಭಾಗವಹಿಸಿದೆ.
- ಭಾರತ್ ಪರ್ವ ಕಾರ್ಯಕ್ರಮ: ವಿವಿಧ ರಾಜ್ಯಗಳ ಆಹಾರ, ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ.
- ವೀರ್ ಗಾಥಾ 5.0: ದೇಶಾದ್ಯಂತ 1.92 ಕೋಟಿ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ 100 ವಿಜೇತ ವಿದ್ಯಾರ್ಥಿಗಳನ್ನು ಕರ್ತವ್ಯ ಪಥದಲ್ಲಿ ಗೌರವಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ