Revenue for Sabarimala: ಶಬರಿಮಲೆಗೆ 310.40 ಕೋಟಿ ರೂ. ಆದಾಯ

ಆದಾಯದ ಬಗ್ಗೆ ಶಬರಿಮಲೆ ಆಡಳಿತಮಂಡಳಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಶುಕ್ರವಾರದಂದು ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಭಾಗವಾಗಿ ಜನವರಿ 12 ರವರೆಗೆ ದೇಗುಲಕ್ಕೆ 310.40 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಿದೆ.

Revenue for Sabarimala: ಶಬರಿಮಲೆಗೆ 310.40 ಕೋಟಿ ರೂ. ಆದಾಯ
Sabarimala Image Credit source: google image
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 14, 2023 | 11:08 AM

ಪತ್ತನಂತಿಟ್ಟ: ಇಂದು ಮಕರ ಸಂಕ್ರಾಂತಿ, (makar sankranti) ದೇಶದಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಇಂದು ಕೇರಳಲ್ಲಿ ಮಾತ್ರ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಹೌದು ಇಂದು ಮಕರ ಸಂಕ್ರಾಂತಿ ಆಗಿರುವ ಕಾರಣ ಕೇರಳ ಅಯ್ಯಪ್ಪ ಸ್ವಾಮಿ ಶಬರಿಮಲೆಯಲ್ಲಿ (Sabarimala) ದಿವ್ಯಜ್ಯೋತಿ ಭಕ್ತರಿಗೆ ಕಾಣುವ ಕ್ಷಣ, ಶಬರಿಮಲೆಗೆ ನವೆಂಬರ್​ನಿಂದ ಭಕ್ತಕೋಟಿ ಹರಿದು ಬರುತ್ತಿದೆ. ಇದೀಗ ಇಲ್ಲಿ ಆದಾಯದ ಬಗ್ಗೆ ಶಬರಿಮಲೆ ಆಡಳಿತಮಂಡಳಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಶುಕ್ರವಾರದಂದು ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಭಾಗವಾಗಿ ಜನವರಿ 12 ರವರೆಗೆ ದೇಗುಲಕ್ಕೆ 310.40 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಿದೆ.

ಸನ್ನಿಧಾನದ ಅತಿಥಿಗೃಹದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್, ‘ತಿರುವಾಭರಣ ಘೋಷಯಾತ್ರೆ’ ಗುರುವಾರದಿಂದ ಬೆಟ್ಟದ ಮೇಲಿನ ದೇಗುಲಕ್ಕೆ ಪವಿತ್ರ ಆಭರಣಗಳನ್ನು ಹೊತ್ತ ಮೆರವಣಿಗೆ ಆರಂಭಗೊಂಡಿದ್ದು, ಜನವರಿ 14 ರಂದು ಶರಮಕುತಿ ತಲುಪಲಿದೆ.

ಇದನ್ನು ಓದಿ:Sabarimala Ayyappa Swamy: ಅರಣ್ಯಪಾಲಕ, ಮಣಿಕಂಠ, ಹರಿಹರ ಸುತ ಅಯ್ಯಪ್ಪ ಸ್ವಾಮಿ ಬಗ್ಗೆ ನಿಮಗೆಷ್ಟು ಗೊತ್ತು?

ಡಿಸೆಂಬರ್ 27 ರಂದು ‘ಮಂಡಲ ಪೂಜೆ’ ನಡೆಯಿತು, ಇದು ಋತುವಿನ ಮೊದಲ ಪಾದಯಾತ್ರೆಯ ಮುಕ್ತಾಯವಾಗಿದೆ. ದೇಗುಲವನ್ನು ಮೂರು ದಿನಗಳ ಕಾಲ ಮುಚ್ಚಲಾಯಿತು ಮತ್ತು ಋತುವಿನ ಎರಡನೇ ಹಂತವಾದ ‘ಮಕರವಿಳಕ್ಕು’ ಸಮಾರಂಭಗಳಿಗಾಗಿ ಡಿಸೆಂಬರ್ 30 ರಂದು ಪುನಃ ತೆರೆಯಲಾಯಿತು.

ಡಿ.27ಕ್ಕೆ ಕೊನೆಗೊಂಡ ‘ಮಂಡಲಂ’ ಋತುವಿನಲ್ಲಿ ₹ 310,40,97,309 ರಲ್ಲಿ ಒಟ್ಟು ₹ 231,55,32,006 ಆದಾಯ ಬಂದಿದೆ. ಪ್ರಸ್ತುತ ನಡೆಯುತ್ತಿರುವ ‘ಮಕರವಿಳಕ್ಕು’ ಉತ್ಸವದಲ್ಲಿ ₹ 78,85,65,303 ಆದಾಯ ಬಂದಿದೆ. ಡಿಸೆಂಬರ್ 30 ರಂದು ಪ್ರಾರಂಭವಾಯಿತು ಎಂದು ಅವರು ಹೇಳಿದರು. ಜನವರಿ 14 ರಂದು ಮಕರವಿಳಕ್ಕು ಆಚರಣೆ ನಡೆಯಲಿದೆ. ನಂತರ, ತೀರ್ಥಯಾತ್ರೆಯ ಅಂತ್ಯವನ್ನು ಸೂಚಿಸುವ ಮೂಲಕ ಜನವರಿ 20 ರಂದು ದೇಗುಲವನ್ನು ಮುಚ್ಚಲಾಗುವುದು.

‘ತಿರುವಾಭರಣ’ ಹೊತ್ತ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಬರಮಾಡಿಕೊಂಡು ಸಂಜೆ 6.30ಕ್ಕೆ ಪೂಜೆ ಸಲ್ಲಿಸಲಿದ್ದಾರೆ ಎಂದರು. ನಂತರ ಪೊನ್ನಂಬಲಮೆಟ್ಟುವಿನಲ್ಲಿ ಮಕರಜ್ಯೋತಿ ಕಾಣಲಿದ್ದು, ಮಕರವಿಳಕ್ಕು ಉತ್ಸವಕ್ಕೆ ಕೋಟ್ಯಾಂತರ ಭಕ್ತರ ನಿರೀಕ್ಷೆ ಇದೆ, ಹಾಗಾಗಿ ಮಂಡಳಿಯು ಸಕಲ ಸೌಕರ್ಯಗಳನ್ನು ಕಲ್ಪಿಸಿದೆ ಎಂದರು. ಹಬ್ಬಕ್ಕೆ ಮುನ್ನ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸುರಕ್ಷತಾ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ