ಪುಣೆಯಲ್ಲಿ ಆರ್​​ಎಸ್​​ಎಸ್​​ ಸಮನ್ವಯ ಬೈಠಕ್ ಕಾರ್ಯಸೂಚಿಯಲ್ಲಿ ಮಹಿಳಾ ಸಬಲೀಕರಣ ವಿಷಯ ಚರ್ಚೆ ಸಾಧ್ಯತೆ

|

Updated on: Sep 14, 2023 | 8:23 PM

ಸಭೆಯಲ್ಲಿ ಮಹಿಳಾ ಸಬಲೀಕರಣದ ವಿಷಯ ಪ್ರಸ್ತಾಪವಾಗಿದೆ ಎಂದು ಆರ್‌ಎಸ್‌ಎಸ್ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ. ಭಾರತೀಯ ರೀತಿಯಲ್ಲಿ ಮಹಿಳಾ ಸಬಲೀಕರಣವನ್ನು ಹೇಗೆ ಸಾಧಿಸಬಹುದು ಎಂಬುದನ್ನು ನಾವು ಚರ್ಚಿಸುತ್ತೇವೆ ಎಂದು ಅವರು ಹೇಳಿದರು. ರಾಷ್ಟ್ರ ಸೇವಿಕಾ ಸಮಿತಿಯ ಮುಖ್ಯಸ್ಥೆ ಶಾಂತಕ್ಕ, ರಾಷ್ಟ್ರ ಸೇವಾ ಭಾರತಿಯ ಮುಖ್ಯಸ್ಥೆ ರೀತು ಪಾಠಕ್ ಸೇರಿದಂತೆ 30 ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳಾ ಸಬಲೀಕರಣ ಕುರಿತು ಚರ್ಚೆ ನಡೆಯಲಿದೆ.

ಪುಣೆಯಲ್ಲಿ ಆರ್​​ಎಸ್​​ಎಸ್​​ ಸಮನ್ವಯ ಬೈಠಕ್ ಕಾರ್ಯಸೂಚಿಯಲ್ಲಿ ಮಹಿಳಾ ಸಬಲೀಕರಣ ವಿಷಯ ಚರ್ಚೆ ಸಾಧ್ಯತೆ
ಆರ್​​ಎಸ್​​ಎಸ್​​
Follow us on

ಪುಣೆ, ಸೆಪ್ಟೆಂಬರ್ 14: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಅಖಿಲ ಭಾರತೀಯ ಸಮನ್ವಯ ಬೈಠಕ್ (ಸಭೆ) ಇಂದು(ಗುರವಾರ) ಪುಣೆಯಲ್ಲಿ ನಡೆಯುತ್ತಿದ್ದು, ಪ್ರಸ್ತುತ ಸಂಘಟನೆ ತನ್ನ ಕಾರ್ಯಸೂಚಿಯಲ್ಲಿ ಮಹಿಳಾ ಸಬಲೀಕರಣವನ್ನು ಪ್ರಮುಖ ವಿಷಯವನ್ನಾಗಿ ಮಾಡುವ ಸಾಧ್ಯತೆಯಿದೆ. ಅದೇ ವೇಳೆ ಭಾರತೀಯ ಪರಿಸರ ಮತ್ತು ಸಂಪ್ರದಾಯದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ವಿಧಾನಗಳನ್ನು ಚರ್ಚಿಸುವ ಸಾಧ್ಯತೆಯಿದೆ. ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಕಳೆದ ವರ್ಷ ದೇಶಾದ್ಯಂತ ಮಹಿಳಾ ಸಮಾವೇಶಗಳನ್ನು ಆಯೋಜಿಸಿವೆ. ಈ ಸಮಾವೇಶಗಳ ಫಲಿತಾಂಶವನ್ನು ಸಮನ್ವಯ ಬೈಠಕ್ ನಲ್ಲಿ ಚರ್ಚಿಸಲಾಗುವುದು.

ಸಭೆಯಲ್ಲಿ ಮಹಿಳಾ ಸಬಲೀಕರಣದ ವಿಷಯ ಪ್ರಸ್ತಾಪವಾಗಿದೆ ಎಂದು ಆರ್‌ಎಸ್‌ಎಸ್ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ. ಭಾರತೀಯ ರೀತಿಯಲ್ಲಿ ಮಹಿಳಾ ಸಬಲೀಕರಣವನ್ನು ಹೇಗೆ ಸಾಧಿಸಬಹುದು ಎಂಬುದನ್ನು ನಾವು ಚರ್ಚಿಸುತ್ತೇವೆ ಎಂದು ಅವರು ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿಯ ಮುಖ್ಯಸ್ಥೆ ಶಾಂತಕ್ಕ, ರಾಷ್ಟ್ರ ಸೇವಾ ಭಾರತಿಯ ಮುಖ್ಯಸ್ಥೆ ರೀತು ಪಾಠಕ್ ಸೇರಿದಂತೆ 30 ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳಾ ಸಬಲೀಕರಣ ಕುರಿತು ಚರ್ಚೆ ನಡೆಯಲಿದೆ.

262 ಮಂದಿ ಬೈಠಕ್ ನಲ್ಲಿ ಭಾಗವಹಿಸಲಿದ್ದು, ಚಂದ್ರಯಾನ-3 ಮತ್ತು ಆದಿತ್ಯ-L1 ಮಿಷನ್‌ಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ವಿಜ್ಞಾನಿಗಳ ಯಶಸ್ಸನ್ನು ಎತ್ತಿ ತೋರಿಸುವ ಮಾರ್ಗಗಳನ್ನು ಚರ್ಚಿಸುವ ಸಾಧ್ಯತೆಯಿದೆ.

ಈ ಹಿಂದೆ ಆರ್‌ಎಸ್‌ಎಸ್ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಆರೋಪಿಸಲಾಗಿತ್ತು. ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಏಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪದೇ ಪದೇ ಪ್ರಶ್ನಿಸಿದ್ದಾರೆ. ಏತನ್ಮಧ್ಯೆ ಮಹಿಳಾ ಸಬಲೀಕರಣದ ಮೇಲೆ ಸಂಸ್ಥೆಯ ಗಮನ ಹರಿಸಿದ್ದು ಅದರ ಟೀಕಾಕಾರರಿಗೆ ಉತ್ತರವಾಗಿ ಗ್ರಹಿಸಲ್ಪಟ್ಟಿದೆ.

ಈ ಆರೋಪವನ್ನು ಆರ್‌ಎಸ್‌ಎಸ್ ತಳ್ಳಿಹಾಕಿದೆ. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರೊಬ್ಬರು ಮಹಿಳೆಯರು ಸಂಘಟನೆಯ ಬೆನ್ನೆಲುಬು ಎಂದು ಹೇಳಿದ್ದಾರೆ. ಸಂಘದ ಕಾರ್ಯಚಟುವಟಿಕೆಯಲ್ಲಿ ಮಹಿಳೆಯರು ಯಾವಾಗಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಮಹಿಳೆಯರು ತಮ್ಮ ತಾಯಂದಿರು ಮತ್ತು ಸಹೋದರಿಯರ ರೀತಿಯಲ್ಲಿ ಪುರುಷ ಪ್ರಚಾರಕರನ್ನು ನೋಡಿಕೊಳ್ಳುತ್ತಾರೆ. ಮಾತೃ ಶಕ್ತಿ (ಮಹಿಳಾ ಶಕ್ತಿ) ನಮ್ಮ ಹಿಂದೆ ಬಂಡೆಯಂತೆ ನಿಲ್ಲದಿದ್ದರೆ, ಸಂಘದ ಕಾರ್ಯಕರ್ತರು ತಮ್ಮ ಕೆಲಸವನ್ನು ವಿಸ್ತರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೆಸರು ಹೇಳಲು ಬಯಸದ ಕಾರ್ಯಕಾರಿಣಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:  ಇಂದಿರಾ ಕ್ಯಾಂಟೀನ್​​ ಬಾಕಿ ಬಿಲ್​ ಷಡ್ಯಂತ್ರ: ಚೈತ್ರಾ ಕುಂದಾಪುರ ಆರೋಪಕ್ಕೆ ತುಷಾರ್​ ಗಿರಿನಾಥ್​ ಸ್ಪಷ್ಟನೆ

ಆರ್‌ಎಸ್‌ಎಸ್ ಶಾಖಾ (ಘಟಕ)ದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆರೋಪವನ್ನು ಸಹ ಕಾರ್ಯಕಾರಿಣಿ ಅಲ್ಲಗಳೆದಿದ್ದಾರೆ .ಶಾಖಾದಲ್ಲಿನ ಚಟುವಟಿಕೆಗಳನ್ನು ಪುರುಷರಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರ ಸೇವಿಕಾ ಸಮಿತಿಯ ರೂಪದಲ್ಲಿ ಮಹಿಳೆಯರಿಗೆ ವಿಭಿನ್ನ ಶಾಖೆ ಇದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Thu, 14 September 23