AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​
ಮೋಹನ್ ಭಾಗವತ್​
TV9 Web
| Updated By: Lakshmi Hegde|

Updated on:Nov 29, 2021 | 2:47 PM

Share

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬುದು ಮಿಲಿಟರಿ ಸಂಘಟನೆಯಲ್ಲ. ಕೌಟುಂಬಿಕ ವಾತಾವರಣ ಇರುವ ಒಂದು ಗುಂಪು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.  ಸಂಘವು ಆಲ್​ ಇಂಡಿಯಾ ಸಂಗೀತ ಶಾಲೆಯಲ್ಲ.  ಇಲ್ಲಿ ಮಾರ್ಷಲ್​ ಆರ್ಟ್ಸ್​ಗಳೂ ನಡೆಯುತ್ತವೆ. ಹಾಗಂತ ಇದು ಜಿಮ್​ ಅಥವಾ ಮಾರ್ಷಲ್ ಆರ್ಟ್ಸ್​ ಕ್ಲಬ್​ ಅಲ್ಲ. ಕೆಲವೊಮ್ಮ ಆರ್​​ಎಸ್​ಎಸ್​​ನ್ನು ಪ್ಯಾರಾಮಿಲಿಟರಿ ಸಂಘಟನೆ ಎನ್ನಲಾಗುತ್ತದೆ. ಆದರೆ ಖಂಡಿತ ಇದು ಮಿಲಿಟರಿ ಆರ್ಗನೈಸೇಶನ್​ ಅಲ್ಲ. ನಮ್ಮ ಸಂಘವೆಂದರೆ ಕೌಟುಂಬಿಕ ವಾತಾವರಣವಿರುವ ಒಂದು ಗುಂಪು ಎಂದು ಭಾಗವತ್​ ತಿಳಿಸಿದರು. 

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು. ಪಾಶ್ಚಿಮಾತ್ರ ದೇಶಗಳು ಸಂಗೀತವನ್ನು ಒಂದು ಮನರಂಜನೆಯೆಂದು ಪರಗಣಿಸಿವೆ. ಅವರು ಥ್ರಿಲ್​​ಗಾಗಿ ಅದನ್ನು ಕೇಳುತ್ತಾರೆ. ಆದರೆ ಭಾರತದಲ್ಲಿ ಸಂಗೀತವೆಂದರೆ ಆತ್ಮಸಂತೋಷದ ಮಾರ್ಗ. ಮನಸನ್ನು ಶಾಂತಗೊಳಿಸುವ ಒಂದು ಕಲೆ ಎಂದು ಮೋಹನ್ ಭಾಗವತ್​ ಹೇಳಿದ್ದಾರೆ.

ಭಾರತ ಈ ಬಾರಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಆಚರಣೆಯಲ್ಲಿದೆ. 1857ರಲ್ಲಿ ಶುರುವಾದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಕ್ಕಿದ್ದು 1947ರ ಆಗಸ್ಟ್​ 15ರಂದು. ಅಂದು ಸಂಪೂರ್ಣವಾಗಿ ವಿದೇಶಿ ಶಕ್ತಿ ನಮ್ಮಲ್ಲಿಂದ ತೊಲಗಿತು.  ಅದಾದ ಬಳಿಕ ದೇಶವನ್ನು ಕಟ್ಟಲು ಬಹಳಷ್ಟು ಶ್ರಮ ಬೇಕಾಯಿತು. ವಿದೇಶಿಗರು ಮಾಡಿದ ಹಾನಿಗಳು, ಲೂಟಿಗಳನ್ನು ಸರಿದೂಗಿಸಿ, ಒಂದು ಹಂತಕ್ಕೆ ತರಲು ಸುಮಾರು 10-12ವರ್ಷಗಳು ಹಿಡಿದವು ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ

Published On - 2:46 pm, Mon, 29 November 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ