AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು.

Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ
ಶಬರಿಮಲೆ ದೇಗುಲ
TV9 Web
| Updated By: Lakshmi Hegde|

Updated on: Jul 11, 2021 | 8:59 AM

Share

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸಪೂಜೆ ಸಲುವಾಗಿ ಜು.17ರಿಂದ 21ರವರೆಗೆ (5ದಿನಗಳು) ಬಾಗಿಲು ತೆರೆಯಲಿದೆ. ಕೇರಳದಲ್ಲೀಗ ಮಲಯಾಳಂ ತಿಂಗಳು ನಡೆಯುತ್ತಿದ್ದು, ಅದರ ನಿಮಿತ್ತ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಶನಿವಾರ ಮಾಹಿತಿ ನೀಡಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು. 48 ಗಂಟೆಗಳ ಹಿಂದೆ ಪಡೆದ ಆರ್​ಟಿ-ಪಿಸಿಆರ್​ ನೆಗೆಟಿವ್​​ ರಿಪೋರ್ಟ್​ ತರಬೇಕು. ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ ಎಂದೂ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗೇ, ದೇಗುಲಕ್ಕೆ ಆಗಮಿಸಲು ಯಾತ್ರಿಕರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿಯನ್ನು ವರ್ಚ್ಯುವಲ್​ ಕ್ಯೂ ಮೂಲಕ ನೀಡಿ, ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಬೇಕಾಗುತ್ತದೆ ಎಂದೂ ಹೇಳಲಾಗಿದೆ.

ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮೇ ತಿಂಗಳಿಂದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿತ್ತು. ಇದೀಗ 5 ದಿನಗಳ ಅವಕಾಶ ಸಿಕ್ಕರೂ ಕೇವಲ 5000 ಜನರಿಗೆ ಮಾತ್ರ ಅವಕಾಶ ಇರಲಿದೆ.

ಇದನ್ನೂ ಓದಿ: ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?

Sabarimala temple to be open for devotees From July 17

ನೋಡ್ಕೊಂಡು ಸುಮ್ಮನಿರಬೇಕಾ? ಕನ್ನಡಿಗನ ಪರ ನಿಂತ ಕನ್ನಡಿಗ
ನೋಡ್ಕೊಂಡು ಸುಮ್ಮನಿರಬೇಕಾ? ಕನ್ನಡಿಗನ ಪರ ನಿಂತ ಕನ್ನಡಿಗ
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ರೂ, 50 ಲಕ್ಷ ನುಂಗಿದ ಪಿಡಿಓ ಸಸ್ಪೆಂಡಾಗಿ 6 ತಿಂಗಳಲ್ಲೇ ವಾಪಸ್: ಶಾಸಕ
ರೂ, 50 ಲಕ್ಷ ನುಂಗಿದ ಪಿಡಿಓ ಸಸ್ಪೆಂಡಾಗಿ 6 ತಿಂಗಳಲ್ಲೇ ವಾಪಸ್: ಶಾಸಕ