AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?

ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.

ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?
ಐಪಿಎಸ್ ಅಧಿಕಾರಿ ಸಂಜಯ್​ ಕುಮಾರ್ ಮತ್ತು ಸಮೀರ್ ವಾಂಖೆಡೆ
TV9 Web
| Edited By: |

Updated on: Nov 06, 2021 | 11:08 AM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​​ ಖಾನ್​​ ಮುಂಬೈ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದ ಅವರೆಷ್ಟು ಸುದ್ದಿಯಾಗಿದ್ದಾರೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು ಆರ್ಯನ್​ ಖಾನ್​ರನ್ನು ಬಂಧಿಸಿದ್ದ ಎನ್​ಸಿಬಿ ಅಧಿಕಾರಿ  ಸಮೀರ್​ ವಾಂಖೆಡೆ. ಅವರ ವಿರುದ್ಧ ಸುಲಿಗೆ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಆರ್ಯನ್​ ಖಾನ್ ಸಂಬಂಧಪಟ್ಟ ಡ್ರಗ್ಸ್​ ಕೇಸ್​ ತನಿಖೆಯಿಂದ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅವರು ತನಿಖೆ ನಡೆಸುತ್ತಿದ್ದ ಇನ್ನೂ ಆರು ಕೇಸ್​ಗಳಿಂದಲೂ ಕೊಕ್​ ನೀಡಲಾಗಿದ್ದು, ವಾಂಖೆಡೆ ಜಾಗಕ್ಕೆ ಈಗ ಐಪಿಎಸ್​ ಅಧಿಕಾರಿ ಸಂಜಯ್​ ಕುಮಾರ್​ ಸಿಂಗ್​ ಬಂದಿದ್ದಾರೆ. ಇನ್ನು ಮುಂದೆ ಆರ್ಯನ್​ ಖಾನ್​ ಕೇಸ್​​ ಸೇರಿ ಉಳಿದೆಲ್ಲ ಕೇಸ್​ಗಳನ್ನೂ ಸಂಜಯ್​ ಕುಮಾರ್​ ಅವರೇ ತನಿಖೆ ನಡೆಸಲಿದ್ದಾರೆ.   

ಇನ್ನು ಸಮೀರ್​ ವಾಂಖೆಡೆ ಬದಲಿಗೆ ಬಂದಿರುವ ಸಂಜಯ್​ ಕುಮಾರ್​ 1996ನೇ ಬ್ಯಾಚ್​ನ, ಒಡಿಶಾ ಕೇಡರ್​​ನ ಐಪಿಎಸ್​ ಅಧಿಕಾರಿ. 2021ರ ಜನವರಿಯಲ್ಲಿ ಇವರನ್ನು ಎನ್​ಸಿಬಿಯ ಉಪ ಪ್ರಧಾನ ನಿರ್ದೇಶಕರಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ಇದಕ್ಕೂ ಮುನ್ನ ಸಂಜಯ್​ ಕುಮಾರ್​ ಭುವನೇಶ್ವರ್​​ನಲ್ಲಿ ಪೊಲೀಸ್​ ಮಾಡರ್ನೈಶೇನ್​ನ ಎಡಿಜಿಯಾಗಿದ್ದರು.  ಇವರು ಮೊದಲಿನಿಂದಲೂ ಡ್ರಗ್​ ಮಾಫಿಯಾಕ್ಕೆ ದುಃಸ್ವಪ್ನರಾದವರೇ ಆಗಿದ್ದಾರೆ. ಒಡಿಶಾ ರಾಜ್ಯ ಪೊಲೀಸ್​ನ ಡ್ರಗ್​​ ಟಾಸ್ಕ್​ ಫೋರ್ಸ್​​ನ ಮುಖ್ಯಸ್ಥರಾಗಿದ್ದಾಗಲೂ ಹಲವು ಪ್ರಕರಣಗಳ ತನಿಖೆ ನಡೆಸಿದ್ದಾರೆ.

ಇನ್ನು ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.ಇನ್ನು ಆರ್ಯನ್ ಖಾನ್​ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದಲೂ ಸಮೀರ್​ ವಾಂಖೆಡೆ ಸುದ್ದಿಯಲ್ಲಿದ್ದರು. ಅನೇಕರು ಅವರ ಕೆಲಸವನ್ನು ಶ್ಲಾಘಿಸಿದ್ದರೆ, ಇನ್ನೂ ಹಲವರು ವಾಂಖೆಡೆ ವಿರುದ್ಧ ಮಾತನಾಡಿದ್ದರು. ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಕೂಡ ವಾಂಖೆಡೆ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ