AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?

ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.

ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?
ಐಪಿಎಸ್ ಅಧಿಕಾರಿ ಸಂಜಯ್​ ಕುಮಾರ್ ಮತ್ತು ಸಮೀರ್ ವಾಂಖೆಡೆ
TV9 Web
| Edited By: |

Updated on: Nov 06, 2021 | 11:08 AM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​​ ಖಾನ್​​ ಮುಂಬೈ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದ ಅವರೆಷ್ಟು ಸುದ್ದಿಯಾಗಿದ್ದಾರೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು ಆರ್ಯನ್​ ಖಾನ್​ರನ್ನು ಬಂಧಿಸಿದ್ದ ಎನ್​ಸಿಬಿ ಅಧಿಕಾರಿ  ಸಮೀರ್​ ವಾಂಖೆಡೆ. ಅವರ ವಿರುದ್ಧ ಸುಲಿಗೆ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಆರ್ಯನ್​ ಖಾನ್ ಸಂಬಂಧಪಟ್ಟ ಡ್ರಗ್ಸ್​ ಕೇಸ್​ ತನಿಖೆಯಿಂದ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅವರು ತನಿಖೆ ನಡೆಸುತ್ತಿದ್ದ ಇನ್ನೂ ಆರು ಕೇಸ್​ಗಳಿಂದಲೂ ಕೊಕ್​ ನೀಡಲಾಗಿದ್ದು, ವಾಂಖೆಡೆ ಜಾಗಕ್ಕೆ ಈಗ ಐಪಿಎಸ್​ ಅಧಿಕಾರಿ ಸಂಜಯ್​ ಕುಮಾರ್​ ಸಿಂಗ್​ ಬಂದಿದ್ದಾರೆ. ಇನ್ನು ಮುಂದೆ ಆರ್ಯನ್​ ಖಾನ್​ ಕೇಸ್​​ ಸೇರಿ ಉಳಿದೆಲ್ಲ ಕೇಸ್​ಗಳನ್ನೂ ಸಂಜಯ್​ ಕುಮಾರ್​ ಅವರೇ ತನಿಖೆ ನಡೆಸಲಿದ್ದಾರೆ.   

ಇನ್ನು ಸಮೀರ್​ ವಾಂಖೆಡೆ ಬದಲಿಗೆ ಬಂದಿರುವ ಸಂಜಯ್​ ಕುಮಾರ್​ 1996ನೇ ಬ್ಯಾಚ್​ನ, ಒಡಿಶಾ ಕೇಡರ್​​ನ ಐಪಿಎಸ್​ ಅಧಿಕಾರಿ. 2021ರ ಜನವರಿಯಲ್ಲಿ ಇವರನ್ನು ಎನ್​ಸಿಬಿಯ ಉಪ ಪ್ರಧಾನ ನಿರ್ದೇಶಕರಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ಇದಕ್ಕೂ ಮುನ್ನ ಸಂಜಯ್​ ಕುಮಾರ್​ ಭುವನೇಶ್ವರ್​​ನಲ್ಲಿ ಪೊಲೀಸ್​ ಮಾಡರ್ನೈಶೇನ್​ನ ಎಡಿಜಿಯಾಗಿದ್ದರು.  ಇವರು ಮೊದಲಿನಿಂದಲೂ ಡ್ರಗ್​ ಮಾಫಿಯಾಕ್ಕೆ ದುಃಸ್ವಪ್ನರಾದವರೇ ಆಗಿದ್ದಾರೆ. ಒಡಿಶಾ ರಾಜ್ಯ ಪೊಲೀಸ್​ನ ಡ್ರಗ್​​ ಟಾಸ್ಕ್​ ಫೋರ್ಸ್​​ನ ಮುಖ್ಯಸ್ಥರಾಗಿದ್ದಾಗಲೂ ಹಲವು ಪ್ರಕರಣಗಳ ತನಿಖೆ ನಡೆಸಿದ್ದಾರೆ.

ಇನ್ನು ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.ಇನ್ನು ಆರ್ಯನ್ ಖಾನ್​ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದಲೂ ಸಮೀರ್​ ವಾಂಖೆಡೆ ಸುದ್ದಿಯಲ್ಲಿದ್ದರು. ಅನೇಕರು ಅವರ ಕೆಲಸವನ್ನು ಶ್ಲಾಘಿಸಿದ್ದರೆ, ಇನ್ನೂ ಹಲವರು ವಾಂಖೆಡೆ ವಿರುದ್ಧ ಮಾತನಾಡಿದ್ದರು. ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಕೂಡ ವಾಂಖೆಡೆ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ

Follow Us
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ