AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

56ನೇ ವರ್ಷದಲ್ಲಿ ಎಂಎಸ್ಸಿ ಪಾಸ್, ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ

56 ವರ್ಷದ ವ್ಯಕ್ತಿಯೊಬ್ಬರು ಮದುವೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದ ವ್ಯಕ್ತಿ 23 ಬಾರಿ ಅನುತ್ತೀರ್ಣರಾಗಿ ಅಂತೂ ಈಗ ಎಂಎಸ್ಸಿ ಪೂರೈಸಿದ್ದಾರೆ. ಇದೀಗ ಮನೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದರೆ ಈ ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧ ಎಂದರು. ಸಂಗೀತದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿ ಪಾಸಾಗಿರುವ ಹುಡುಗಿಯನ್ನಾದರೂ ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ.

56ನೇ ವರ್ಷದಲ್ಲಿ ಎಂಎಸ್ಸಿ ಪಾಸ್, ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ
ರಾಜ್​ಕರಣ್​
ನಯನಾ ರಾಜೀವ್
|

Updated on: Nov 30, 2023 | 3:25 PM

Share

56 ವರ್ಷದ ವ್ಯಕ್ತಿಯೊಬ್ಬರು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದ ವ್ಯಕ್ತಿ 23 ಬಾರಿ ಅನುತ್ತೀರ್ಣರಾಗಿ ಅಂತೂ ಈಗ ಎಂಎಸ್ಸಿ ಪೂರೈಸಿದ್ದಾರೆ. ಇದೀಗ ಮನೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದರೆ ಈ ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧ ಎಂದರು. ಸಂಗೀತದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿ ಪಾಸಾಗಿರುವ ಹುಡುಗಿಯನ್ನಾದರೂ ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ.

ಜಬಲ್​ಪುರ ನಿವಾಸಿ ರಾಜ್​ಕರಣ್​ ಅವರ ಕಥೆ ಇದು, ರಾಜ್​ಕರಣ್​ 1997ರಲ್ಲಿ ಎಂಎಸ್​ಸಿ ಗಣಿತ ಮಾಡಲು ನಿರ್ಧರಿಸಿದರು. ಮೊದಲ ವರ್ಷದ ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರೂ ಧೈರ್ಯಗುಂದದೆ 23 ಬಾರಿ ಪರೀಕ್ಷೆಗೆ ಹಾಜರಾಗಿ ಕೊರೊನಾ ಸಮಯದಲ್ಲಿ ಪರೀಕ್ಷೆ ಇಲ್ಲದೆಯೇ ಕೊನೆಗೂ ಉತ್ತೀರ್ಣರಾಗಿದ್ದಾರೆ.

56 ವರ್ಷದ ರಾಜ್​ಕರಣ್ ಈಗ ಮದುವೆಯಾಗಲು ಬಯಸಿದ್ದಾರೆ. ಸ್ವಂತ ಮನೆ ಇಲ್ಲದ ಕಾರಣಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಮನೆ ಕೊಟ್ಟರೆ ನೆಲೆಯೂರಲು ಸಿದ್ಧ ಎಂದಿದ್ದಾರೆ.

1996ರಲ್ಲಿ ಜೀವನೋಪಾಯಕ್ಕಾಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಅವರು ಗಣಿತ ಕಲಿಸುವ ರೀತಿ ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಅದೇ ಸಮಯಕ್ಕೆ ಗಣಿತದಲ್ಲಿ ಎಂಎಸ್ಸಿ ಮಾಡಿದರೆ ಗಣಿತ ಶಿಕ್ಷಕರ ಕೆಲಸ ಸಿಗುತ್ತದೆ ಎಂಬ ಮಾತು ಅವರ ಮನಸ್ಸಿಗೆ ಬಂದಿತ್ತು. ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದರು. ವಿಶ್ವವಿದ್ಯಾನಿಲಯವು ಗಣಿತವನ್ನು ಪ್ರಮುಖ ವಿಷಯವಾಗಿ ಪರಿಗಣಿಸಿ ಪ್ರವೇಶವನ್ನು ನೀಡಿತು.

ಇದಾದ ನಂತರ 1997ರಲ್ಲಿ ರಾಜ್‌ಕರನ್‌ ಪ್ರಥಮ ವರ್ಷದ ಪರೀಕ್ಷೆಯನ್ನು ನೀಡಿದರೂ ಅನುತ್ತೀರ್ಣರಾದರು. ಇದರ ಹೊರತಾಗಿಯೂ, ಅವರು ಧೈರ್ಯವನ್ನು ಕಳೆದುಕೊಳ್ಳಲಿಲ್ಲ ಮತ್ತು 2020 ರಲ್ಲಿ ಕೊರೊನಾ ಅವಧಿಯಲ್ಲಿ, ಅವರು ಸಾಮಾನ್ಯ ಬಡ್ತಿ ಅಡಿಯಲ್ಲಿ MSc ಮೊದಲ ವರ್ಷದ ಪರೀಕ್ಷೆ ಮತ್ತು 2021 ರಲ್ಲಿ MSc ಎರಡನೇ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ 25 ವರ್ಷಗಳ ಹೋರಾಟದ ನಂತರ ಎಂಎಸ್ಸಿ ಪದವಿ ಪಡೆದು ಈಗ ಮದುವೆಯಾಗಿ ಸಂಸಾರ ಸಾಗಿಸಬೇಕೆಂಬುದು  ಅವರ ಆಸೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್