AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷರು ನಿರ್ಮಿಸಿದ ಬಾಂಬೆ ರೈಲು ನಿಲ್ದಾಣದಷ್ಟು ಸುಂದರವಾದ ಒಂದೇ ಒಂದು ಕಟ್ಟಡವನ್ನು ಭಾರತ ನಿರ್ಮಿಸಿದೆಯೇ? ಅಮೆರಿಕದ ಟಿವಿ ನಿರೂಪಕನ ಹೇಳಿಕೆಗೆ ತರೂರ್ ಕಿಡಿ

75 ವರ್ಷಗಳ ಸ್ವಾತಂತ್ರ್ಯದ ನಂತರ, ಆ ದೇಶವು ಬ್ರಿಟಿಷ್ ವಸಾಹತುಶಾಹಿಗಳು ನಿರ್ಮಿಸಿದ ಬಾಂಬೆ ರೈಲು ನಿಲ್ದಾಣದಷ್ಟು ಸುಂದರವಾದ ಒಂದೇ ಒಂದು ಕಟ್ಟಡವನ್ನು ನಿರ್ಮಿಸಿದೆಯೇ? ಇಲ್ಲ,

ಬ್ರಿಟಿಷರು ನಿರ್ಮಿಸಿದ ಬಾಂಬೆ ರೈಲು ನಿಲ್ದಾಣದಷ್ಟು ಸುಂದರವಾದ ಒಂದೇ ಒಂದು ಕಟ್ಟಡವನ್ನು ಭಾರತ ನಿರ್ಮಿಸಿದೆಯೇ?  ಅಮೆರಿಕದ ಟಿವಿ ನಿರೂಪಕನ ಹೇಳಿಕೆಗೆ ತರೂರ್ ಕಿಡಿ
ಟಕರ್ ಕಾರ್ಲ್ಸನ್- ಶಶಿ ತರೂರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 13, 2022 | 1:20 PM

“ಬ್ರಿಟಿಷ್ ವಸಾಹತುಶಾಹಿಗಳು ನಿರ್ಮಿಸಿದ ಬಾಂಬೆ ರೈಲು ನಿಲ್ದಾಣದಷ್ಟು ಸುಂದರವಾಗಿರುವ ಒಂದೇ ಒಂದು ಕಟ್ಟಡವನ್ನು ಭಾರತ ನಿರ್ಮಿಸಿಲ್ಲ ಎಂದು ಅಮೆರಿಕದ ಟಿವಿ ನಿರೂಪಕ ಹೇಳಿದ್ದು, ಇದನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಖಂಡಿಸಿದ್ದಾರೆ . ಫಾಕ್ಸ್ ನ್ಯೂಸ್‌ನಲ್ಲಿ ರಾತ್ರಿಯ ರಾಜಕೀಯ ಟಾಕ್ ಶೋ ‘ಟಕರ್ ಕಾರ್ಲ್ಸನ್ ಟುನೈಟ್’ ಅನ್ನು (Tucker Carlson Tonight) ನಿರೂಪಣೆ ಮಾಡುವ ಸಂಪ್ರದಾಯವಾದಿ ರಾಜಕೀಯ ನಿರೂಪಕ ಟಕರ್ ಕಾರ್ಲ್ಸನ್, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಬಿಟ್ಟುಹೋದ ಅವ್ಯವಸ್ಥೆಯನ್ನು ಬ್ರಿಟಿಷ್ ವಸಾಹತುಶಾಹಿ ಕಾಲಕ್ಕೆ ಹೋಲಿಸಿದ್ದಾರೆ. ಬ್ರಿಟಿಷರು ಭಾರತದಲ್ಲಿ ಸಂಪೂರ್ಣ ನಾಗರೀಕತೆಯನ್ನು ಬಿಟ್ಟುಹೋದರು ಮತ್ತು ಹಿಂದೂ ಸಂಪ್ರದಾಯವಾದ ಸತಿ ಸಹಗಮನ ಪದ್ದತಿ ರದ್ದುಗೊಳಿಸಿದರು ಎಂದು ಕಾರ್ಲ್ಸನ್ ಹೇಳಿದ್ದಾರೆ. ರಾಜಾ ರಾಮ್ ಮೋಹನ್ ರಾಯ್ ಅವರು ಸತಿ ಸಹಗಮನವನ್ನು ರದ್ದುಗೊಳಿಸಲು ಶ್ರಮಿಸಿದ್ದರು ಎಂಬುದನ್ನು ಕಾರ್ಲ್ಸನ್ ಉಲ್ಲೇಖಿಸಲೇ ಇಲ್ಲ.

ನಿಮ್ಮ ಸಹನೆಯನ್ನು ಮೀರದೆ ಏನಾದರೂ ವ್ಯಕ್ತಪಡಿಸುವುದಕ್ಕೆ ಹೆಚ್ಚಿನ ಆಯ್ಕೆಗಳು ಇಲ್ಲಿ ಬೇಕಿತ್ತು ಎಂದು ಟ್ವಿಟರ್​​ನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಶಶಿ ತರೂರ್, ಸದ್ಯಕ್ಕೆ, ಕೋಪ, ಹತಾಶೆ, ಅಥವಾ ಕ್ರೋಧವನ್ನು ತಿಳಿಸುವ ಎಮೋಜಿಗಳೊಂದಿಗೆ ನಾನು ಅದನ್ನು ವ್ಯಕ್ತ ಪಡಿಸುತ್ತೇನೆ ಎಂದಿದ್ದಾರೆ.

ಬ್ರಿಟಿಷರು ತಮ್ಮ “ವಸಾಹತುಶಾಹಿ ಜವಾಬ್ದಾರಿಯನ್ನು” ಗಂಭೀರವಾಗಿ ತೆಗೆದುಕೊಂಡರು. ಅವರು ಕೇವಲ ವಿಷಯಗಳನ್ನು ಮಾತ್ರವಲ್ಲ ಅದಕ್ಕೆ ಹಲವನ್ನು ಸೇರಿಸಿದರು ಎಂದು ಫಾಕ್ಸ್ ನ್ಯೂಸ್ ಆಂಕರ್ ಹೇಳಿದ್ದಾರೆ. ಉದಾಹರಣೆಗೆ ಬಾಂಬೆಯಲ್ಲಿ ಇಂಗ್ಲಿಷರು ನಿರ್ಮಿಸಿದ ರೈಲು ನಿಲ್ದಾಣ  ಎಂದು ಕಾರ್ಲ್ಸನ್ ಹೇಳಿದಾಗ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಚಿತ್ರವು ಪರದೆಯ ಮೇಲೆ ಮೂಡಿ ಬರುತ್ತದೆ.

ಇದೀಗ ವಾಷಿಂಗ್ಟನ್ ಡಿಸಿಯಲ್ಲಿ ಅಂತಹದ್ದೇನೂ ಇಲ್ಲ, ಕಾಬೂಲ್ ಅಥವಾ ಬಾಗ್ದಾದ್‌ನಲ್ಲಿ ಕಡಿಮೆ. ಇಂದು ಭಾರತವು ಯುಕೆಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ, ಒಂದು ಕಾಲದಲ್ಲಿ ಅದನ್ನು ಆಳಿದ ರಾಷ್ಟ್ರವಾಗಿತ್ತು. 75 ವರ್ಷಗಳ ಸ್ವಾತಂತ್ರ್ಯದ ನಂತರ, ಆ ದೇಶವು ಬ್ರಿಟಿಷ್ ವಸಾಹತುಶಾಹಿಗಳು ನಿರ್ಮಿಸಿದ ಬಾಂಬೆ ರೈಲು ನಿಲ್ದಾಣದಷ್ಟು ಸುಂದರವಾದ ಒಂದೇ ಒಂದು ಕಟ್ಟಡವನ್ನು ನಿರ್ಮಿಸಿದೆಯೇ? ಇಲ್ಲ, ಬೇಜಾರಿನ ಸಂಗತಿ ಎಂದರೆ ಒಂದೇ ಒಂದು ಕಟ್ಟಡವನ್ನು ನಿರ್ಮಿಸಿಲ್ಲ.

ಬ್ರಿಟಿಷ್ ಸಾಮ್ರಾಜ್ಯವು ಕೇವಲ ನರಮೇಧ ಮಾತ್ರವಲ್ಲ. ವಾಸ್ತವವಾಗಿ, ಬೋಯರ್ ಯುದ್ಧದ ಸಮಯದಲ್ಲಿ ಡಚ್ಚರ ವಿರುದ್ಧ  ಬ್ರಿಟಿಷರು ನರಮೇಧವನ್ನು ಮಾಡಲಿಲ್ಲ. ಬ್ರಿಟಿಷರು ಮ್ಯಾಗ್ನಾ ಕಾರ್ಟಾ ಮತ್ತು ಹೇಬಿಯಸ್ ಕಾರ್ಪಸ್ ಮತ್ತು ವಾಕ್ ಸ್ವಾತಂತ್ರ್ಯವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಅವರು ಅಟ್ಲಾಂಟಿಕ್ ಗುಲಾಮ ವ್ಯಾಪಾರವನ್ನು ಕೊನೆಗೊಳಿಸಲು ಸಹಾಯ ಮಾಡಿದರು. ಭಾರತದಲ್ಲಿ ವಿಧವೆಯರ ಧಾರ್ಮಿಕ ಹತ್ಯೆಯನ್ನು ಕೊನೆಗೊಳಿಸಿದರು ಎಂದಿದ್ದಾರೆ.

ಟಕರ್ ಕಾರ್ಲ್ಸನ್ ಅವರ ಕಾರ್ಯಕ್ರಮದ ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಟ್ವಿಟರ್ ಬಳಕೆದಾರರು, ಫಾಕ್ಸ್ ನ್ಯೂಸ್ ನಿರೂಪಕರನ್ನು ಟೀಕಿಸಿದ್ದು “ತಮಾಷೆಯ ಸಂಗತಿ ಎಂದರೆ ನಾನು ಭಾರತದಾದ್ಯಂತ ಪ್ರಯಾಣಿಸಿದಾಗ, ನಾನು ನೋಡಿದ ಅತ್ಯಂತ ಅದ್ಭುತವಾದ ಕಟ್ಟಡಗಳನ್ನು ಬ್ರಿಟಿಷರು ನಿರ್ಮಿಸಿಲ್ಲ ಆದರೆ ಭಾರತೀಯರು ಸ್ವತಃ ನಿರ್ಮಿಸಿದ್ದಾರೆ ಎಂದು ಬರೆದಿದ್ದಾರೆ.

ಇನ್ನೊಬ್ಬ ಟ್ವೀಟಿಗರು ವಸಾಹತುಶಾಹಿ ಭಾರತವನ್ನು ಧ್ವಂಸಗೊಳಿಸಿತು, ಅದು ಅದನ್ನು ನಿರ್ಮಿಸಲಿಲ್ಲ. ಅವರು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ ಎಂದಿದ್ದಾರೆ.

Published On - 12:53 pm, Tue, 13 September 22