AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ

ಮಾಧ್ಯಮಗಳು ಇಂಥ ದ್ವಂದ್ವನೀತಿಗಳಿಂದ ಹೊರಗೆ ಬರಬೇಕು. ಸಾಂಪ್ರದಾಯಿಕ ಸಿಹಿತಿಸಿಸುಗಳೊಂದಿಗೆ ಶೀಘ್ರವೇ ಭಾರತದ ಪರಿಕಲ್ಪನೆಯನ್ನೂ ಸಂಭ್ರಮಿಸಲಿದ್ದೀರಿ ಎಂದು ಹೇಳಿರುವ ಕಾರ್ಣಿಕ್, ಭಾರತೀಯ ಹಬ್ಬಗಳು, ಪಟಾಕಿಗಳು ಪರಿಸರಕ್ಕೆ ಮಾರಕ. ಹಬ್ಬಗಳು ಆಚರಣೆಯಿಂದ ಹಣ ವ್ಯರ್ಥ ಎನ್ನುವ ಕೆಲ ಮಾಧ್ಯಮಗಳ ಲೇಖನಗಳನ್ನು ನಿಲುವನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.

ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ
ಗಣೇಶ ಕಾರ್ಣಿಕ್
guruganesh bhat
| Updated By: ಸಾಧು ಶ್ರೀನಾಥ್​|

Updated on:Dec 24, 2020 | 3:34 PM

Share

ಬೆಂಗಳೂರು: ದೀಪಾವಳಿ ವೇಳೆ ಬಳಸುವ ಸಿಹಿತಿಂಡಿಗಳು ಆರೋಗ್ಯಕ್ಕೆ ಹಾನಿಕರ. ಪಟಾಕಿಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ವಾದ ಇತರ ಧರ್ಮೀಯರ ಹಬ್ಬಗಳಿಗೂ ಏಕೆ ಅನ್ವಯಿಸುವುದಿಲ್ಲ ಎಂದು ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್​ ಕಾರ್ಣಿಕ್ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

ಮಾಧ್ಯಮಗಳು ಇಂಥ ದ್ವಂದ್ವ ನೀತಿಗಳಿಂದ ಹೊರ ಬರಬೇಕು. ಸಾಂಪ್ರದಾಯಿಕ ಸಿಹಿ ತಿಸಿಸುಗಳೊಂದಿಗೆ ಶೀಘ್ರವೇ ಭಾರತದ ಪರಿಕಲ್ಪನೆಯನ್ನೂ ಸಂಭ್ರಮಿಸಲಿದ್ದೀರಿ ಎಂದು ಹೇಳಿರುವ ಕಾರ್ಣಿಕ್, ಭಾರತೀಯ ಹಬ್ಬಗಳು, ಪಟಾಕಿಗಳು ಪರಿಸರಕ್ಕೆ ಮಾರಕ. ಹಬ್ಬಗಳು ಆಚರಣೆಯಿಂದ ಹಣ ವ್ಯರ್ಥ ಎನ್ನುವ ಕೆಲ ಮಾಧ್ಯಮಗಳ ಲೇಖನಗಳನ್ನು ನಿಲುವನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.

‘ದೀಪಾವಳಿ ಸಿಹಿ ತಿನಿಸುಗಳು ಆರೋಗ್ಯ ಹಾಳು ಮಾಡುತ್ತವೆ, ಕ್ರಿಸ್​ಮಸ್​ ಕೇಕ್ ಮಾತ್ರ ಪೋಷಕಾಂಶಭರಿತ’ ಎಂದು ವ್ಯಂಗ್ಯದ ಒಕ್ಕಣೆಯೊಂದಿಗೆ ಮಾಧ್ಯಮ ಸಂಸ್ಥೆಯೊಂದರ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಉಣ್ಣಲು ತಿನ್ನಲು ಗತಿಯಿಲ್ಲದೆ ಕೋಟ್ಯಂತರ ಜನರು ದಿಕ್ಕೆಟ್ಟಿರುವಾಗ ಮಾಧ್ಯಮ ಮತ್ತು ಸರ್ಕಾರದ ಪ್ರತಿನಿಧಿಗಳು ಇಂಥ ವಿಷಯವನ್ನು ಹೀಗೆಲ್ಲಾ ಎಳೆದಾಡುತ್ತಿರುವುದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಯಾವ ರೀತಿ ಇರುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

‘ಕ್ಯಾಪ್ಟನ್, ಸಿಹಿ ತಿನಿಸುಗಳು ಸೌಹಾರ್ದದ ಪ್ರತೀಕವೆಂದು ಅವರಿಗೆ ಗೊತ್ತಿಲ್ಲ. ನಾವು 2014ರಲ್ಲಿ ಸಿಹಿ ತಿಂದೆವು, ಮತ್ತೆ 2019ರಲ್ಲಿಯೂ ಸಿಹಿ ತಿಂದೆವು, ಇನ್ನು 2024ರಲ್ಲಿಯೂ ನಾವು ಸಿಹಿ ತಿನ್ನಲಿದ್ದೇವೆ. ಭಾರತವು ಬದಲಾಗುತ್ತಿದೆ!’ ಹೀಗೆಂದು ರೀಟ್ವೀಟ್ ಮಾಡಿದ ಟ್ವೀಟಿಗರೊಬ್ಬರು ಕಾರ್ಣಿಕ್ ಅವರನ್ನು ಬೆಂಬಲಿಸಿದ್ದಾರೆ.

Published On - 2:08 pm, Thu, 24 December 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!