AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ […]

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!
ಶಶಿ ತರೂರ್
KUSHAL V
| Updated By: ಸಾಧು ಶ್ರೀನಾಥ್​|

Updated on:Aug 01, 2020 | 2:30 PM

Share

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ ಇರುತ್ತೆ ಅಂತಾ ನೀವು ಅಂದುಕೊಂಡಿದ್ರೇ ಅದು ಸುಳ್ಳು.

ಹಾಗಂತ ನಾವು ಹೇಳುತ್ತಿಲ್ಲ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ನಾಯಕ ಹಾಗೂ ಇದೇ ಲುಟಿಯೆನ್ಸ್​ ದೆಹಲಿಯ ನಿವಾಸಿ ಶಶಿ ತರೂರ್ ಸ್ವತಃ ಹಂಚಿಕೊಂಡಿದ್ದಾರೆ. ತಮ್ಮ ಏರಿಯಾದಲ್ಲಿ ನಿನ್ನೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಲ ಕರೆಂಟ್​ ಹೋದ ಬಗ್ಗೆ Tweet ಮಾಡಿದ್ದರು.

11 ವರ್ಷದಲ್ಲಿ ಮೊದಲ ಬಾರಿಗೆ ನಾನು ಈ ಹಿಂದೆ ಇಂಧನ ಸಚಿವರನ್ನ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ.. ನಾನು ಲುಟಿಯೆನ್ಸ್​ ದೆಹಲಿಯಲ್ಲಿ 11 ವರ್ಷಗಳಿಂದ ವಾಸವಾಗಿದ್ದೇನೆ. ಆದರೆ, ಈವರೆಗೂ ಬಡಾವಣೆಯಲ್ಲಿ ಒಂದು ಬಾರಿಯೂ ಕರೆಂಟ್​ ಕಟ್​ ಆಗೇ ಇಲ್ಲ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಬೀಗಿದ ಸಚಿವರು ಅದು ಹಾಗೆಯೇ ಮುಂದುವರೆಯುವುದು, ಏನೂ ತೊಂದರೆಯಾಗುವುದಿಲ್ಲ ಬಿಡಿ ಎಂದು ಆಶ್ವಾಸನೆ ನೀಡಿದ್ದರು.

ಆದರೆ, ಇಂದು ಬೆಳಗ್ಗೆಯಿಂದ ಐದು ಸಲ ಕರೆಂಟ್​ ಹೋಗಿದೆ. ಕಂಪ್ಲೇಂಟ್​ ಮಾಡೋಣಾ ಅಂದ್ರೆ ವಿದ್ಯುತ್​ ಇಲಾಖೆಯ ಸಹಾಯವಾಣಿ ಸಹ ಸ್ವಿಚ್​ ಆಫ್​ ಆಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಶಶಿ ತರೂರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಶಿ ಮಾತಿಗೆ ಪೂರಕವೆಂಬಂತೆ ದೊರಕಿರುವ ಮಾಹಿತಿ ಪ್ರಕಾರ 2011 ರಿಂದ ಈವರೆಗೂ ಲುಟಿಯೆನ್ಸ್​ ದೆಹಲಿಯಲ್ಲಿ ಒಮ್ಮೆಯೂ ಕರೆಂಟ್ ಹೋಗೇ ಇಲ್ಲವಂತೆ! ಹೀಗಾಗಿ, ದೇಶದ ಶಕ್ತಿ ಕೇಂದ್ರವಾಗಿರುವ ಲುಟಿಯೆನ್ಸ್​ ದೆಹಲಿಯಲ್ಲಿ ಈ ಸಲ ಕರೆಂಟ್ ಹೋಗಿರೋದು ನಮ್ಮ ರಾಜಕೀಯ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ. ಒಟ್ನಲ್ಲಿ, ಈಗಲಾದ್ರೂ ಕರೆಂಟ್​ ಹೋದಾಗ ಜನಸಾಮಾನ್ಯರು ಅನುಭವಿಸುವ ಯಾತನೆ ಹೇಗಿರುತ್ತೆ ಅನ್ನೋ feeling ನಮ್ಮ ನಾಯಕರಿಗೆ ಆಗಿದೆ.

Published On - 2:29 pm, Sat, 1 August 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ