AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ […]

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!
ಶಶಿ ತರೂರ್
KUSHAL V
| Edited By: |

Updated on:Aug 01, 2020 | 2:30 PM

Share

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ ಇರುತ್ತೆ ಅಂತಾ ನೀವು ಅಂದುಕೊಂಡಿದ್ರೇ ಅದು ಸುಳ್ಳು.

ಹಾಗಂತ ನಾವು ಹೇಳುತ್ತಿಲ್ಲ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ನಾಯಕ ಹಾಗೂ ಇದೇ ಲುಟಿಯೆನ್ಸ್​ ದೆಹಲಿಯ ನಿವಾಸಿ ಶಶಿ ತರೂರ್ ಸ್ವತಃ ಹಂಚಿಕೊಂಡಿದ್ದಾರೆ. ತಮ್ಮ ಏರಿಯಾದಲ್ಲಿ ನಿನ್ನೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಲ ಕರೆಂಟ್​ ಹೋದ ಬಗ್ಗೆ Tweet ಮಾಡಿದ್ದರು.

11 ವರ್ಷದಲ್ಲಿ ಮೊದಲ ಬಾರಿಗೆ ನಾನು ಈ ಹಿಂದೆ ಇಂಧನ ಸಚಿವರನ್ನ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ.. ನಾನು ಲುಟಿಯೆನ್ಸ್​ ದೆಹಲಿಯಲ್ಲಿ 11 ವರ್ಷಗಳಿಂದ ವಾಸವಾಗಿದ್ದೇನೆ. ಆದರೆ, ಈವರೆಗೂ ಬಡಾವಣೆಯಲ್ಲಿ ಒಂದು ಬಾರಿಯೂ ಕರೆಂಟ್​ ಕಟ್​ ಆಗೇ ಇಲ್ಲ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಬೀಗಿದ ಸಚಿವರು ಅದು ಹಾಗೆಯೇ ಮುಂದುವರೆಯುವುದು, ಏನೂ ತೊಂದರೆಯಾಗುವುದಿಲ್ಲ ಬಿಡಿ ಎಂದು ಆಶ್ವಾಸನೆ ನೀಡಿದ್ದರು.

ಆದರೆ, ಇಂದು ಬೆಳಗ್ಗೆಯಿಂದ ಐದು ಸಲ ಕರೆಂಟ್​ ಹೋಗಿದೆ. ಕಂಪ್ಲೇಂಟ್​ ಮಾಡೋಣಾ ಅಂದ್ರೆ ವಿದ್ಯುತ್​ ಇಲಾಖೆಯ ಸಹಾಯವಾಣಿ ಸಹ ಸ್ವಿಚ್​ ಆಫ್​ ಆಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಶಶಿ ತರೂರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಶಿ ಮಾತಿಗೆ ಪೂರಕವೆಂಬಂತೆ ದೊರಕಿರುವ ಮಾಹಿತಿ ಪ್ರಕಾರ 2011 ರಿಂದ ಈವರೆಗೂ ಲುಟಿಯೆನ್ಸ್​ ದೆಹಲಿಯಲ್ಲಿ ಒಮ್ಮೆಯೂ ಕರೆಂಟ್ ಹೋಗೇ ಇಲ್ಲವಂತೆ! ಹೀಗಾಗಿ, ದೇಶದ ಶಕ್ತಿ ಕೇಂದ್ರವಾಗಿರುವ ಲುಟಿಯೆನ್ಸ್​ ದೆಹಲಿಯಲ್ಲಿ ಈ ಸಲ ಕರೆಂಟ್ ಹೋಗಿರೋದು ನಮ್ಮ ರಾಜಕೀಯ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ. ಒಟ್ನಲ್ಲಿ, ಈಗಲಾದ್ರೂ ಕರೆಂಟ್​ ಹೋದಾಗ ಜನಸಾಮಾನ್ಯರು ಅನುಭವಿಸುವ ಯಾತನೆ ಹೇಗಿರುತ್ತೆ ಅನ್ನೋ feeling ನಮ್ಮ ನಾಯಕರಿಗೆ ಆಗಿದೆ.

Published On - 2:29 pm, Sat, 1 August 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ