AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ […]

11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!
ಶಶಿ ತರೂರ್
KUSHAL V
| Edited By: ಸಾಧು ಶ್ರೀನಾಥ್​|

Updated on:Aug 01, 2020 | 2:30 PM

Share

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ ಇರುತ್ತೆ ಅಂತಾ ನೀವು ಅಂದುಕೊಂಡಿದ್ರೇ ಅದು ಸುಳ್ಳು.

ಹಾಗಂತ ನಾವು ಹೇಳುತ್ತಿಲ್ಲ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ನಾಯಕ ಹಾಗೂ ಇದೇ ಲುಟಿಯೆನ್ಸ್​ ದೆಹಲಿಯ ನಿವಾಸಿ ಶಶಿ ತರೂರ್ ಸ್ವತಃ ಹಂಚಿಕೊಂಡಿದ್ದಾರೆ. ತಮ್ಮ ಏರಿಯಾದಲ್ಲಿ ನಿನ್ನೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಲ ಕರೆಂಟ್​ ಹೋದ ಬಗ್ಗೆ Tweet ಮಾಡಿದ್ದರು.

11 ವರ್ಷದಲ್ಲಿ ಮೊದಲ ಬಾರಿಗೆ ನಾನು ಈ ಹಿಂದೆ ಇಂಧನ ಸಚಿವರನ್ನ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ.. ನಾನು ಲುಟಿಯೆನ್ಸ್​ ದೆಹಲಿಯಲ್ಲಿ 11 ವರ್ಷಗಳಿಂದ ವಾಸವಾಗಿದ್ದೇನೆ. ಆದರೆ, ಈವರೆಗೂ ಬಡಾವಣೆಯಲ್ಲಿ ಒಂದು ಬಾರಿಯೂ ಕರೆಂಟ್​ ಕಟ್​ ಆಗೇ ಇಲ್ಲ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಬೀಗಿದ ಸಚಿವರು ಅದು ಹಾಗೆಯೇ ಮುಂದುವರೆಯುವುದು, ಏನೂ ತೊಂದರೆಯಾಗುವುದಿಲ್ಲ ಬಿಡಿ ಎಂದು ಆಶ್ವಾಸನೆ ನೀಡಿದ್ದರು.

ಆದರೆ, ಇಂದು ಬೆಳಗ್ಗೆಯಿಂದ ಐದು ಸಲ ಕರೆಂಟ್​ ಹೋಗಿದೆ. ಕಂಪ್ಲೇಂಟ್​ ಮಾಡೋಣಾ ಅಂದ್ರೆ ವಿದ್ಯುತ್​ ಇಲಾಖೆಯ ಸಹಾಯವಾಣಿ ಸಹ ಸ್ವಿಚ್​ ಆಫ್​ ಆಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಶಶಿ ತರೂರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಶಿ ಮಾತಿಗೆ ಪೂರಕವೆಂಬಂತೆ ದೊರಕಿರುವ ಮಾಹಿತಿ ಪ್ರಕಾರ 2011 ರಿಂದ ಈವರೆಗೂ ಲುಟಿಯೆನ್ಸ್​ ದೆಹಲಿಯಲ್ಲಿ ಒಮ್ಮೆಯೂ ಕರೆಂಟ್ ಹೋಗೇ ಇಲ್ಲವಂತೆ! ಹೀಗಾಗಿ, ದೇಶದ ಶಕ್ತಿ ಕೇಂದ್ರವಾಗಿರುವ ಲುಟಿಯೆನ್ಸ್​ ದೆಹಲಿಯಲ್ಲಿ ಈ ಸಲ ಕರೆಂಟ್ ಹೋಗಿರೋದು ನಮ್ಮ ರಾಜಕೀಯ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ. ಒಟ್ನಲ್ಲಿ, ಈಗಲಾದ್ರೂ ಕರೆಂಟ್​ ಹೋದಾಗ ಜನಸಾಮಾನ್ಯರು ಅನುಭವಿಸುವ ಯಾತನೆ ಹೇಗಿರುತ್ತೆ ಅನ್ನೋ feeling ನಮ್ಮ ನಾಯಕರಿಗೆ ಆಗಿದೆ.

Published On - 2:29 pm, Sat, 1 August 20

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!