AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ ಸರ್ಕಾರಿ ಅಧಿಕಾರಿ, ಎಲ್ಲಿ?

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ […]

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ  ಸರ್ಕಾರಿ ಅಧಿಕಾರಿ, ಎಲ್ಲಿ?
KUSHAL V
|

Updated on:Aug 01, 2020 | 4:18 PM

Share

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ ಇಲ್ಲ. ಅದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ಲಂಚಬಾಕತನ. ಹೀಗಾಗಿ, ಈ ಸಲ ಏನೇ ಅದರೂ ಜಮೀನು ಪಡೆಯಲೇಬೇಕು ಎಂಬ ಹಠದಿಂದ ಗ್ರಾಮಸ್ಥರು ಮಂಡಲ್​ ಕಂದಾಯ ಅಧಿಕಾರಿಗೆ ಲಂಚ ನೀಡೋಕೆ ಮುಂದಾದರು. ಕೆಲವರು 40 ಸಾವಿರ ನೀಡಿದರೆ ಮತ್ತೆ ಕೆಲವರು 2 ಕ್ವಿಂಟಾಲ್​ ಈರುಳ್ಳಿ ಸಹ ಲಂಚವಾಗಿ ಕೊಟ್ಟಿದ್ದರಂತೆ. ಹೀಗೆ ಲಂಚ ಕೊಟ್ಟಿದ್ದ ಸುಮಾರು 200 ರೈತರಿಗೆ ಜಮೀನು ಮಂಜೂರು ಮಾಡುವುದಾಗಿ ಆ ಅಧಿಕಾರಿ ಭರವಸೆ ಸಹ ನೀಡಿದ್ದನಂತೆ.

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿ, 2 ಕೋಟಿ ರೂ. ಲಂಚ! ಆದರೆ, ನಿನ್ನೆ ಇದಕ್ಕಿದ್ದಂತೆ ಕಂದಾಯ ಅಧಿಕಾರಿಯನ್ನ ವರ್ಗಾವಣೆ ಮಾಡಲಾಯಿತಂತೆ. ಈ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಕಚೇರಿಗೆ ಓಡಿ ಬಂದ ಗ್ರಾಮಸ್ಥರು ತಾವು ನೀಡಿದ್ದ ಲಂಚ ವಾಪಸ್​ ಮಾಡೋಕೆ ಡಿಮ್ಯಾಂಡ್​ ಇಟ್ಟಿದ್ದಾರೆ. ಪ್ರತಿಭಟನೆ ಸಹ ಮಾಡಿದ್ದಾರೆ. ಇದಕ್ಕೆ ಮಣಿದ ಆ ಅಧಿಕಾರಿ ಕೊನೆಗೆ ಹಣ ವಾಪಸ್​ ಮಾಡೋದಾಗಿ ಲಿಖಿತ ಆಶ್ವಾಸನೆ ಕೊಟ್ಟಿದ್ದಾನೆ. ಅಂದ ಹಾಗೆ, ಅಧಿಕಾರಿ ಪಡೆದ ಒಟ್ಟು ಲಂಚ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ ರೂಪಾಯಿ!

Published On - 4:03 pm, Sat, 1 August 20

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ