AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ ಸರ್ಕಾರಿ ಅಧಿಕಾರಿ, ಎಲ್ಲಿ?

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ […]

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ  ಸರ್ಕಾರಿ ಅಧಿಕಾರಿ, ಎಲ್ಲಿ?
KUSHAL V
|

Updated on:Aug 01, 2020 | 4:18 PM

Share

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ ಇಲ್ಲ. ಅದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ಲಂಚಬಾಕತನ. ಹೀಗಾಗಿ, ಈ ಸಲ ಏನೇ ಅದರೂ ಜಮೀನು ಪಡೆಯಲೇಬೇಕು ಎಂಬ ಹಠದಿಂದ ಗ್ರಾಮಸ್ಥರು ಮಂಡಲ್​ ಕಂದಾಯ ಅಧಿಕಾರಿಗೆ ಲಂಚ ನೀಡೋಕೆ ಮುಂದಾದರು. ಕೆಲವರು 40 ಸಾವಿರ ನೀಡಿದರೆ ಮತ್ತೆ ಕೆಲವರು 2 ಕ್ವಿಂಟಾಲ್​ ಈರುಳ್ಳಿ ಸಹ ಲಂಚವಾಗಿ ಕೊಟ್ಟಿದ್ದರಂತೆ. ಹೀಗೆ ಲಂಚ ಕೊಟ್ಟಿದ್ದ ಸುಮಾರು 200 ರೈತರಿಗೆ ಜಮೀನು ಮಂಜೂರು ಮಾಡುವುದಾಗಿ ಆ ಅಧಿಕಾರಿ ಭರವಸೆ ಸಹ ನೀಡಿದ್ದನಂತೆ.

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿ, 2 ಕೋಟಿ ರೂ. ಲಂಚ! ಆದರೆ, ನಿನ್ನೆ ಇದಕ್ಕಿದ್ದಂತೆ ಕಂದಾಯ ಅಧಿಕಾರಿಯನ್ನ ವರ್ಗಾವಣೆ ಮಾಡಲಾಯಿತಂತೆ. ಈ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಕಚೇರಿಗೆ ಓಡಿ ಬಂದ ಗ್ರಾಮಸ್ಥರು ತಾವು ನೀಡಿದ್ದ ಲಂಚ ವಾಪಸ್​ ಮಾಡೋಕೆ ಡಿಮ್ಯಾಂಡ್​ ಇಟ್ಟಿದ್ದಾರೆ. ಪ್ರತಿಭಟನೆ ಸಹ ಮಾಡಿದ್ದಾರೆ. ಇದಕ್ಕೆ ಮಣಿದ ಆ ಅಧಿಕಾರಿ ಕೊನೆಗೆ ಹಣ ವಾಪಸ್​ ಮಾಡೋದಾಗಿ ಲಿಖಿತ ಆಶ್ವಾಸನೆ ಕೊಟ್ಟಿದ್ದಾನೆ. ಅಂದ ಹಾಗೆ, ಅಧಿಕಾರಿ ಪಡೆದ ಒಟ್ಟು ಲಂಚ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ ರೂಪಾಯಿ!

Published On - 4:03 pm, Sat, 1 August 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ