AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ! ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ […]

ಕೊರೊನಾ ಕುರುಕ್ಷೇತ್ರ.. ಚಹಾ ಮಾರುವವನಿಗೆ 50 ಕೋಟಿ ರೂ ಶಾಕ್ ಕೊಟ್ಟ ಬ್ಯಾಂಕ್
Guru
| Edited By: |

Updated on:Jul 24, 2020 | 8:20 PM

Share

ಕುರುಕ್ಷೇತ್ರ: ತನ್ನ ಪಾಡಿಗೆ ತಾನು ರೋಡ್‌ ಮೇಲೆ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗೆ ಬ್ಯಾಂಕ್‌ ಒಂದು ಜೀವಮಾನದ ಶಾಕ್‌ ನೀಡಿದೆ. ಆ ವ್ಯಾಪಾರಿಗೆ ತಾನು ತೆಗೆದುಕೊಳ್ಳದೇ ಇದ್ದ ಲೋನ್‌ ಕಟ್ಟು ಅಂತಾ ಬರೋಬ್ಬರಿ 50 ಕೋಟಿ ರೂಪಾಯಿಗಳ ನೋಟಿಸ್‌ ಕಳಿಸಿದೆ!

ಹೌದು ಹರಿಯಾಣದ ಕುರುಕ್ಷೇತ್ರ ಸಿಟಿಯಲ್ಲಿ ರಾಜಕುಮಾರ ಅನ್ನೋ ರಾಜಬೀದಿ ಬದಿಯ ವ್ಯಾಪಾರಿ ತನ್ನ ಪಾಡಿಗೆ ತಾನು ಟೀ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಆದ್ರೆ ಕೊರೊನಾ ಹೆಮ್ಮಾರಿಯಿಂದಾಗಿ ಹಣಕಾಸಿನ ತೊಂದರೆಗೆ ಸಿಲುಕಿದ. ಹೀಗಾಗಿ ಟೀ ವ್ಯಾಪಾರ ಬಿಟ್ಟು ಬೇರೆ ವ್ಯಾಪಾರ ಮಾಡೋಣ ಅಂತಾ ಬ್ಯಾಂಕ್‌ ಲೋನ್‌ಗೆ ಅಪ್ಲೈ ಮಾಡಿದ್ದ.

ಆಗಲೇ ಬಂತು ನೋಡಿ ಪಾಪ ಈ ವ್ಯಾಪಾರಿಗೆ ಜೀವನ ಪೂರ್ತಿ ಎಂದೂ ಮರೆಯದ ಶಾಕ್‌. ಬ್ಯಾಂಕ್‌ ಲೋನ್ ಕೊಡುವುದು ಹಾಗಿರಲಿ.. ಮೊದಲು ನೀನು ತೆಗೆದುಕೊಂಡಿರುವ 50 ಕೋಟಿ ರೂಪಾಯಿ ಸಾಲ ಕಟ್ಟು ಅಂತಾ ನೋಟಿಸ್‌ ನೀಡಿದೆ.

ಇದನ್ನು ನೋಡಿ ಆಕಾಶವೇ ಮೈಮೇಲೆ ಕಳಚಿ ಬಿದ್ದಂತಾಗಿದೆ ಈ ರಾಜಕುಮಾರನಿಗೆ. ನಾನು ಒಬ್ಬ ಬೀದಿ ಬದಿಯ ಚಿಕ್ಕ ಚಹಾ ಮಾರುವ ವ್ಯಾಪಾರಿ. ಒಮ್ಮೆಯೂ ಬ್ಯಾಂಕ್‌ ನಿಂದ ಯಾವುದೇ ಲೋನ್‌ ಪಡೆದಿಲ್ಲ. ಇನ್ನು 50 ಕೋಟಿ ರೂ. ಲೋನ್‌ ತೆಗೆದುಕೊಳ್ಳುವುದು ಎಲ್ಲಿಂದ ಸಾಧ್ಯ ಸ್ವಾಮಿ? ಅಂತಾ ಕಂಗಾಲಾಗಿದ್ದಾನೆ.

Published On - 1:25 pm, Thu, 23 July 20

Follow Us
Guru
Guru
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?