ಅಣೆಕಟ್ಟಿನ ನೀರು ಬತ್ತಿದ್ದರಿಂದ ಮುಳುಗಿದ್ದ ಕಾರು ಮೇಲೆ ಬಂತು, ಇಬ್ಬರ ಅಸ್ಥಿಪಂಜರ ಪತ್ತೆ

ಮಧ್ಯಪ್ರದೇಶದ ನದಿಯೊಂದರಲ್ಲಿ ಕಾರೊಂದು ಗೋಚರವಾಗಿದ್ದು, ಅದರಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದವರ ಅಸ್ಥಿಪಂಜರ ಇದು ಎಂಬುದು ತಿಳಿದುಬಂದಿದೆ.

ಅಣೆಕಟ್ಟಿನ ನೀರು ಬತ್ತಿದ್ದರಿಂದ ಮುಳುಗಿದ್ದ ಕಾರು ಮೇಲೆ ಬಂತು, ಇಬ್ಬರ ಅಸ್ಥಿಪಂಜರ ಪತ್ತೆ
ಕಾರು
Image Credit source: Patrika.com

Updated on: Jun 19, 2024 | 11:24 AM

ಮಧ್ಯಪ್ರದೇಶ(Madhya Pradesh)ದ ಮೊರೆನಾ ಜಿಲ್ಲೆಯ ಕುವಾರಿ ನದಿಯ ಗೋಪಿ ಗ್ರಾಮದ ಬಳಿ ನಿರ್ಮಿಸಲಾದ ಸ್ಟಾಪ್ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದ ಕಾರಣ,  ಕಾರು ಕಾಣಿಸಿಕೊಂಡಿದೆ. ಕಾರಿನ ಮಧ್ಯದ ಸೀಟಿನಲ್ಲಿ ಮಹಿಳೆ ಹಾಗೂ ಪುರುಷರೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನ ಸಮೇತ ಅಸ್ಥಿಪಂಜರಗಳನ್ನು ಹೊರತೆಗೆದಿದ್ದಾರೆ. ಮೊದಲು ಯಾರ ಅಸ್ಥಿಪಂಜರಗಳು ಎಂಬುದು ತಿಳಿದುಬಂದಿರಲಿಲ್ಲ.

ಮೃತರ ಗ್ರಾಮ ಸಮೀಪದಲ್ಲೇ ಇದ್ದುದರಿಂದ ಗ್ರಾಮಸ್ಥರು ಅವರನ್ನು ಪತ್ತೆಹಚ್ಚಿದ್ದಾರೆ. ಮಾಹಿತಿ ಪಡೆದ ಸಿಹೋನಿಯಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳಲ್ಲಿ ಛಟ್ ಕಾ ಪುರದ ನಿವಾಸಿ ಜಗದೀಶ್ ಜಾತವ್ ಅವರ ಪುತ್ರ 26 ವರ್ಷದ ನೀರಜ್ ಮತ್ತು ಛಟ್ ಕಾ ಪುರ ನಿವಾಸಿ ಮುಖೇಶ್ ಜಾತವ್ ಅವರ ಪತ್ನಿ 32 ವರ್ಷದ ಮಿಥಿಲೇಶ್ ಅವರು ಗುರುದ್ವಾರ ಮೊಹಲ್ಲಾ ಅಂಬಾಹ್ ನವರು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಜ್ ಜಾತವ್ ಮತ್ತು ಮಹಿಳೆಯ ಪತಿ ಮುಖೇಶ್ ಜಾತವ್ ಸೋದರ ಸಂಬಂಧಿಗಳು. ಮಹಿಳೆಯ ಪತಿ ಅಂಬಾದಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಗುರುದ್ವಾರ ಮೊಹಲ್ಲಾ ಅಂಬಾದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು.
ಶಿಕ್ಷಕ ಮುಖೇಶ್ ಜಾತವ್ ಫೆಬ್ರವರಿ ತಿಂಗಳಲ್ಲಿ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಥಿಲೇಶ್ ನಾಪತ್ತೆ ದೂರು ದಾಖಲಿಸಿದ್ದರು.

ಮತ್ತಷ್ಟು ಓದಿ: ಕಾವೇರಿ ನದಿಯಲ್ಲಿ ತೇಲಿ ಬಂದ ಮಹಿಳೆ-ಪುರುಷನ ಮೃತದೇಹ: ನೋಡಲು ಮುಗಿಬಿದ್ದ ಜನರು

ಅದೇ ಸಮಯದಲ್ಲಿ ನೀರಜ್ ಜಾತವ್ ಕೂಡ ಮನೆಯಿಂದ ನಾಪತ್ತೆಯಾಗಿದ್ದರು. ಮಹಿಳೆಯ ಪತಿ ಅಂಬಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು, ಆದರೆ ಯುವಕನ ಕುಟುಂಬವು ಯಾವುದೇ ದೂರು ನೀಡಿರಲಿಲ್ಲ. ಇದು ಮರ್ಯಾದಾ ಹತ್ಯೆಯೋ ಅಥವಾ ಅಕಸ್ಮಾತ್​ ಆಗಿ ಕಾರು ನದಿಗೆ ಬಿದ್ದಿದೆಯೋ ಎಂಬುದು ತಿಳಿದುಬಂದಿಲ್ಲ.

ಪ್ರತಿ ವರ್ಷ ಮಳೆಗಾಲದ ಮೊದಲು, ಈ ಸ್ಟಾಪ್ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗುತ್ತದೆ ಮತ್ತು ನದಿಯಿಂದ ನೀರನ್ನು ಹೊರತೆಗೆಯಲಾಗುತ್ತದೆ, ಇದು ನದಿಯನ್ನು ಸಹ ಸ್ವಚ್ಛಗೊಳಿಸುತ್ತದೆ.

ಮಂಗಳವಾರ ಬೆಳಗ್ಗೆ ಸ್ಟಾಪ್ ಡ್ಯಾಂನ ಗೇಟ್ ತೆರೆಯಲಾಯಿತು. ಮಧ್ಯಾಹ್ನದ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನದಿಯ ಮಧ್ಯದಲ್ಲಿ ಪಾಚಿ ಹಾಗೂ ನದಿಯಲ್ಲಿ ಗಿಡಗಳು ಬೆಳೆದು ನಿಂತಿದ್ದ ಕಾರೊಂದು ಕಾಣಿಸಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us