Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ ಎಸ್​ಪಿಬಿ ಸರ್ ಆರೋಗ್ಯ ಸ್ಥಿತಿ, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಚೆನ್ನೈ: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರ ಜೊತೆಗೆ ಎಸ್​ಪಿಬಿ ಪುತ್ರ ಚರಣ್ ಚರ್ಚೆ ನಡೆಸುತ್ತಿದ್ದಾರೆ. ಎಸ್​ಪಿಬಿ ಪುತ್ರಿ ಪಲ್ಲವಿ, ಸಹೋದರಿ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್​ಪಿಬಿ ಆಪ್ತರಲ್ಲಿ, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲಹೊತ್ತಲ್ಲಿ ಖ್ಯಾತ ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡುವ ಮಾಹಿತಿ ಇದೆ. ಇಂದು ಬೆಳಗ್ಗೆ ಕಮಲ್​ ಹಾಸನ್ ಬಂದು  ಎಸ್ಪಿಬಿ ಆರೋಗ್ಯ ವಿಚಾರಿಸಿಕೊಂಡು […]

ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ ಎಸ್​ಪಿಬಿ ಸರ್ ಆರೋಗ್ಯ ಸ್ಥಿತಿ, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Sep 25, 2020 | 2:16 PM

ಚೆನ್ನೈ: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರ ಜೊತೆಗೆ ಎಸ್​ಪಿಬಿ ಪುತ್ರ ಚರಣ್ ಚರ್ಚೆ ನಡೆಸುತ್ತಿದ್ದಾರೆ.

ಎಸ್​ಪಿಬಿ ಪುತ್ರಿ ಪಲ್ಲವಿ, ಸಹೋದರಿ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್​ಪಿಬಿ ಆಪ್ತರಲ್ಲಿ, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲಹೊತ್ತಲ್ಲಿ ಖ್ಯಾತ ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡುವ ಮಾಹಿತಿ ಇದೆ.

ಇಂದು ಬೆಳಗ್ಗೆ ಕಮಲ್​ ಹಾಸನ್ ಬಂದು  ಎಸ್ಪಿಬಿ ಆರೋಗ್ಯ ವಿಚಾರಿಸಿಕೊಂಡು ಹೋದರು. ಚೆನ್ನೈ ಎಂಜಿಎಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಚೆನ್ನೈನ ಎಸ್​ಪಿಬಿ ನಿವಾಸಕ್ಕೆ ಆಗಮಿಸ್ತಿರೋ ಆಪ್ತರು: ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‌ಪಿಬಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇನ್ನೂ ಹೆಲ್ತ್​ಬುಲೆಟಿನ್ ಬಿಡುಗಡೆಯಾಗಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಎಸ್​ಪಿಬಿ ನಿವಾಸದಲ್ಲಿ ಕುಟುಂಬಸ್ಥರೆಲ್ಲ ಸೇರಿದ್ದಾರೆ. ಕಣ್ಣೀರು ಸುರಿಸುತ್ತಿದ್ದಾರೆ. ಎಸ್​ಪಿಬಿ ಮನೆಯ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ನಿವಾಸಕ್ಕೆ ಆಗಮಿಸೋರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ.

ಎಸ್​ಪಿಬಿ ಅವರು ಯಾವತ್ತೂ ನನ್ನನ್ನ ಡ್ರೈವರ್ ಅಂತಾ ನೋಡ್ಲಿಲ್ಲ: ಎಸ್​ಪಿ ಬಾಲಸುಬ್ರಹ್ಮಣ್ಯಂ ನಮಗೆ ದೇವರಿದ್ದಂತೆ. ಆದ್ರೆ ನಾವೀಗ ಭಗವಂತನ ಮೇಲೆಯೇ ಭಾರ ಹಾಕಿದ್ದೇವೆ ಎಂದು ಎಂಜಿಎಂ ಆಸ್ಪತ್ರೆ ಎದುರು ಎಸ್​ಪಿಬಿ ಡ್ರೈವರ್ ದುಃಖ ಹಂಚಿಕೊಂಡಿದ್ದಾರೆ. ಎಸ್​ಪಿಬಿ ಅವರು ಯಾವತ್ತೂ ನನ್ನನ್ನ ಡ್ರೈವರ್ ಅಂತಾ ನೋಡ್ಲಿಲ್ಲ. ಅವರ ಜೊತೆ ಊಟ ಮಾಡಿದ್ದೀನಿ, ಅವರ ಜೊತೆ ಓಡಾಡಿದ್ದೀನಿ. ಅವರ ಮನೆಯ ಮಗನ ರೀತಿ ನಮ್ಮನ್ನ ನೋಡಿಕೊಳ್ತಿದ್ರು .

ಅವರು ಹಾಡಿರೋ ದೇವರು ಹಾಡುಗಳು ದೇವರಿಗೆ ತಲುಪಿವೆ. ಈಗ ಆ ದೇವರೇ ಅವರನ್ನ ಬದುಕಿಸ್ತಾರೆ ಅನ್ನೋ ನಂಬಿಕೆ ಇದೆ. ತಿರುವಣ್ಣಾಮಲೈಗೆ ಎಸ್​ಪಿಬಿ ಜಾಸ್ತಿ ಹೋಗ್ತಾ ಇದ್ರು. ಪೂಜೆ ಮುಗಿಯೋ ವರೆಗೂ ಎಸ್​ಪಿಬಿ ಹನಿ ನೀರು ಕುಡಿಯುತ್ತಿರಲಿಲ್ಲ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಎಸ್​ಪಿಬಿ ಹಣ ನೀಡಿದ್ರು . ನನಗೆ ಬೈಪಾಸ್ ಸರ್ಜರಿ ಆದಾಗಲೂ ಅವರೇ ಹಣ ನೀಡಿ ನನ್ನನ್ನ ಬದುಕಿಸಿದ್ರು . ಅವರು ವಾಪಸ್ ಬರ್ತಾರೆ ಅನ್ನೋ ನಂಬಿಕೆ ಇದೆ. ವಾಪಸ್ ಬಂದು ಹಾಡು ಹಾಡದೇ ಇದ್ರೂ ನಮ್ಮ ಜೊತೆ ಇದ್ರೆ ಸಾಕು ಎಂದು ಡ್ರೈವರ್ ಷಣ್ಮುಗಂ ದುಃಖದಿಂದ ತಮ್ಮ ನೋವನ್ನು ಹೊರಹಾಕಿದ್ದಾರೆ.

Published On - 12:20 pm, Fri, 25 September 20

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್