AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆಗಾರನಿಗೆ ಅವನು ಕಳಿಸಿದ ಮೆಸೆಜೇ ಮುಳುವಾಯ್ತು! ಪೊಲೀಸರ ಚಾಣಾಕ್ಷತೆಗೆ ಶಹಬಾಸ್​​ ಅನ್ನಿ..

ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ.. ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. […]

ಕೊಲೆಗಾರನಿಗೆ ಅವನು ಕಳಿಸಿದ ಮೆಸೆಜೇ ಮುಳುವಾಯ್ತು! ಪೊಲೀಸರ ಚಾಣಾಕ್ಷತೆಗೆ ಶಹಬಾಸ್​​ ಅನ್ನಿ..
ಸಾಂದರ್ಭಿಕ ಚಿತ್ರ
ಪೃಥ್ವಿಶಂಕರ
|

Updated on:Nov 09, 2020 | 2:34 PM

Share

ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ..

ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. ಅದೇ ದಿನ ಅವನು ಕದ್ದ ಫೋನ್ ಬಳಸಿ ಬಾಲಕನ ತಂದೆಗೆ ಆತನ ಬಿಡುಗಡೆಗಾಗಿ 2 ಲಕ್ಷ ರೂ. ನೀಡಬೇಕೆಂದು ಸಂದೇಶ ಕಳುಹಿಸಿದ್ದಾನೆ.

ಜೊತೆಗೆ ಸಂದೇಶದಲ್ಲಿ ಅವನು 2 ಲಕ್ಷ ರೂಪಾಯಿಯನ್ನು ಸೀತಾ-ಪುರ್​ಗೆ ತೆಗೆದುಕೊಂಡು ಬನ್ನಿ. ಆದ್ರೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಬಾರದು. ತಿಳಿಸಿದರೆ ನಿಮ್ಮ ಮಗನನ್ನು ಕೊಲೆ ಮಾಡಲಾಗುತ್ತದೆ ಎಂದು ಹೆದರಿಸಿದ್ದಾನೆ. ಇದರಿಂದ ಭಯಭೀತರಾದ ಕುಟುಂಬಸ್ಥರು ನವೆಂಬರ್ 4 ರಂದು ಬೆನಿಗಂಜ್ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾದ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯಲ್ಲಿ ಸೂಪರ್​ ಪ್ಲಾನ್ ಮಾಡಿದ ಪೊಲೀಸರು.. ತನಿಖೆ ಚುರುಕುಗೊಳಿಸಿದ ಪೊಲೀಸರು ಒಟ್ಟಾರೆಯಾಗಿ 10 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ಸೂಪರ್​ ಪ್ಲಾನ್ ಮಾಡಿದ ಪೊಲೀಸರು 10 ಶಂಕಿತರಿಗೂ ನನಗೆ ಪೊಲೀಸ್ ಕೆಲಸ ಬೇಕು. ಹಾಗೂ ನನಗೆ ಹಾರ್ಡೋಯಿಯಿಂದ ಸೀತಾಪುರಕ್ಕೆ ಓಡುವ ಸಾಮರ್ಥ್ಯ ಇದೆ ಎಂಬುದನ್ನು ಬರೆಯಲು ತಿಳಿಸಿದ್ದಾರೆ.

10 ಶಂಕಿತರೂ ಬರೆದಿರುವುದನ್ನು ಅಪಹರಣಕಾರನು ಪೋಷಕರಿಗೆ ಕಳುಹಿಸಿದ್ದ ಸಂದೇಶದೊಂದಿಗೆ ತಾಳೆ ಮಾಡಿ ನೋಡಿದ್ದಾರೆ. ಅದರಲ್ಲಿ ರಾಮ್ ಪ್ರತಾಪ್ ಸಿಂಗ್ ಎಂಬಾತ ಪೊಲೀಸ್​ ಪದವನ್ನು ಪುಲಿಷ್ (pulish)​ ಎಂದೂ ಹಾಗೂ ಸೀತಾಪುರವನ್ನು ಸೀತಾ-ಪುರ್ (Seeta-pur) ಎಂದು ಬರೆದಿದ್ದ! ಇದನ್ನು ಗಮನಿಸಿದ ಪೊಲೀಸರಿಗೆ ಆರೋಪಿ ಯಾರು ಎಂಬುದು ತಕ್ಷಣ ಅರಿವಿಗೆ ಬಂದಿದೆ. ಕೂಡಲೇ ರಾಮ್ ಪ್ರತಾಪ್ ಸಿಂಗ್​ನನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪಾಪಿ ಯುವಕ ಅಪಹರಣ ಮಾಡಿದ್ದ ಬಾಲಕನನ್ನು ಕೊಂದು ಮುಗಿಸಿದ್ದ.

Published On - 2:32 pm, Mon, 9 November 20

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ