AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆಗಾರನಿಗೆ ಅವನು ಕಳಿಸಿದ ಮೆಸೆಜೇ ಮುಳುವಾಯ್ತು! ಪೊಲೀಸರ ಚಾಣಾಕ್ಷತೆಗೆ ಶಹಬಾಸ್​​ ಅನ್ನಿ..

ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ.. ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. […]

ಕೊಲೆಗಾರನಿಗೆ ಅವನು ಕಳಿಸಿದ ಮೆಸೆಜೇ ಮುಳುವಾಯ್ತು! ಪೊಲೀಸರ ಚಾಣಾಕ್ಷತೆಗೆ ಶಹಬಾಸ್​​ ಅನ್ನಿ..
ಸಾಂದರ್ಭಿಕ ಚಿತ್ರ
ಪೃಥ್ವಿಶಂಕರ
|

Updated on:Nov 09, 2020 | 2:34 PM

Share

ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ..

ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. ಅದೇ ದಿನ ಅವನು ಕದ್ದ ಫೋನ್ ಬಳಸಿ ಬಾಲಕನ ತಂದೆಗೆ ಆತನ ಬಿಡುಗಡೆಗಾಗಿ 2 ಲಕ್ಷ ರೂ. ನೀಡಬೇಕೆಂದು ಸಂದೇಶ ಕಳುಹಿಸಿದ್ದಾನೆ.

ಜೊತೆಗೆ ಸಂದೇಶದಲ್ಲಿ ಅವನು 2 ಲಕ್ಷ ರೂಪಾಯಿಯನ್ನು ಸೀತಾ-ಪುರ್​ಗೆ ತೆಗೆದುಕೊಂಡು ಬನ್ನಿ. ಆದ್ರೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಬಾರದು. ತಿಳಿಸಿದರೆ ನಿಮ್ಮ ಮಗನನ್ನು ಕೊಲೆ ಮಾಡಲಾಗುತ್ತದೆ ಎಂದು ಹೆದರಿಸಿದ್ದಾನೆ. ಇದರಿಂದ ಭಯಭೀತರಾದ ಕುಟುಂಬಸ್ಥರು ನವೆಂಬರ್ 4 ರಂದು ಬೆನಿಗಂಜ್ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾದ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯಲ್ಲಿ ಸೂಪರ್​ ಪ್ಲಾನ್ ಮಾಡಿದ ಪೊಲೀಸರು.. ತನಿಖೆ ಚುರುಕುಗೊಳಿಸಿದ ಪೊಲೀಸರು ಒಟ್ಟಾರೆಯಾಗಿ 10 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ಸೂಪರ್​ ಪ್ಲಾನ್ ಮಾಡಿದ ಪೊಲೀಸರು 10 ಶಂಕಿತರಿಗೂ ನನಗೆ ಪೊಲೀಸ್ ಕೆಲಸ ಬೇಕು. ಹಾಗೂ ನನಗೆ ಹಾರ್ಡೋಯಿಯಿಂದ ಸೀತಾಪುರಕ್ಕೆ ಓಡುವ ಸಾಮರ್ಥ್ಯ ಇದೆ ಎಂಬುದನ್ನು ಬರೆಯಲು ತಿಳಿಸಿದ್ದಾರೆ.

10 ಶಂಕಿತರೂ ಬರೆದಿರುವುದನ್ನು ಅಪಹರಣಕಾರನು ಪೋಷಕರಿಗೆ ಕಳುಹಿಸಿದ್ದ ಸಂದೇಶದೊಂದಿಗೆ ತಾಳೆ ಮಾಡಿ ನೋಡಿದ್ದಾರೆ. ಅದರಲ್ಲಿ ರಾಮ್ ಪ್ರತಾಪ್ ಸಿಂಗ್ ಎಂಬಾತ ಪೊಲೀಸ್​ ಪದವನ್ನು ಪುಲಿಷ್ (pulish)​ ಎಂದೂ ಹಾಗೂ ಸೀತಾಪುರವನ್ನು ಸೀತಾ-ಪುರ್ (Seeta-pur) ಎಂದು ಬರೆದಿದ್ದ! ಇದನ್ನು ಗಮನಿಸಿದ ಪೊಲೀಸರಿಗೆ ಆರೋಪಿ ಯಾರು ಎಂಬುದು ತಕ್ಷಣ ಅರಿವಿಗೆ ಬಂದಿದೆ. ಕೂಡಲೇ ರಾಮ್ ಪ್ರತಾಪ್ ಸಿಂಗ್​ನನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪಾಪಿ ಯುವಕ ಅಪಹರಣ ಮಾಡಿದ್ದ ಬಾಲಕನನ್ನು ಕೊಂದು ಮುಗಿಸಿದ್ದ.

Published On - 2:32 pm, Mon, 9 November 20

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ