AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamdev Jatara: ಕಾಮದೇವ ಜಾತ್ರೆ – ಎಳ್ಳೆಣ್ಣೆಯೇ ಭಕ್ತರಿಗೆ ಮಹಾ ಪ್ರಸಾದ, ಹೆಂಗಸರು ಎಳ್ಳೆಣ್ಣೆ ಕುಡಿದು ಶುದ್ಧಿ ಮಾಡಿಕೊಳ್ಳುವುದು ವಾಡಿಕೆ!

ಸಾಂಸ್ಕೃತಿಕ ಸಂಪ್ರದಾಯಗಳ ನಡುವೆ ವಿಶೇಷ ಪೂಜೆಗಳೊಂದಿಗೆ ಕಾಮದೇವ ಜಾತ್ರೆ ಆರಂಭಗೊಂಡಿತು. ಕುಲದ ಹೆಣ್ಣು ಮಗಳಿಗೆ ಪವಿತ್ರ ಎಳ್ಳೆಣ್ಣೆ ಕುಡಿಸಿ ಶುದ್ಧಿ ಮಾಡಲಾಯಿತು. ಈ ಜಾತ್ರೆ 15 ದಿನ ವಿಜೃಂಭಣೆಯಿಂದ ನಡೆಯಲಿದೆ. ಮೇಳದ ಸಂದರ್ಭದಲ್ಲಿ ಸಂಘಟಕರು ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ.

Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 29, 2024 | 2:29 PM

ಅದಿಲಾಬಾದ್ ಜಿಲ್ಲೆಯ ನಾರ್ನೂರ್ ಮಂಡಲದ ಕೇಂದ್ರದಲ್ಲಿ ತೊಡಸಂ ಕುಲದ ಆರಾಧ್ಯ ದೈವವಾದ ಕಾಮದೇವನ ಉತ್ಸವ ನಡೆಯುತ್ತಿದೆ. ಪುಷ್ಯ ಮಾಸದ ಹುಣ್ಣಿಮೆಯ ಸಂದರ್ಭದಲ್ಲಿ ತೋಡಸಂನ ಮನೆತನಗಳಿಂದ ಕಾಮದೇವ ಜಾತ್ರೆಯನ್ನು ಪ್ರತಿ ವರ್ಷ ನಡೆಸುತ್ತಾರೆ. ಸಾಂಪ್ರದಾಯಿಕ ಡೋಲು ವಾದ್ಯಗಳೊಂದಿಗೆ ಮಹಾಪೂಜೆ ಕಳೆದ ವಾರ ನೆರವೇರಿತು. ಎರಡನೇ ದಿನ ಮನೆಯಲ್ಲಿ ತಯಾರಿಸಿದ ಎಳ್ಳೆಣ್ಣೆಯನ್ನು ದೇವಸ್ಥಾನಕ್ಕೆ ತಂದು ಕಾಮದೇವನಿಗೆ ನೈವೇದ್ಯ ಸಮರ್ಪಿಸಿ ಅದ್ಧೂರಿಯಾಗಿ ಪೂಜೆ ಸಲ್ಲಿಸಲಾಯಿತು. ತೊಡಸಂ ಕುಲದ ಹೆಂಗಸರು ಈ ಎಳ್ಳೆಣ್ಣೆಯನ್ನು ಕುಡಿದು ಶುದ್ಧಿ ಮಾಡಿಕೊಳ್ಳುವುದು ವಾಡಿಕೆ.

ಈ ವರ್ಷ ತೊಡಸಂ ಮನೆತನದ ಹೆಣ್ಣುಮಕ್ಕಳು ಮೆಸ್ರಂ ನಾಗುಬಾಯಿ ಚಂದು (52) ಎಂಬುವರು ಎರಡೂವರೆ ಲೀಟರ್ ಎಳ್ಳೆಣ್ಣೆ ಕುಡಿದು ಮುಡಿಪು ಸಲ್ಲಿಸಿದರು. ಜಾತ್ರೆಯಲ್ಲಿ ಎಳ್ಳೆಣ್ಣೆ ಕುಡಿಯುವುದು ವಾಡಿಕೆ. ಈ ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಸಂತಾನ ಯೋಗ ಕೂಡಿಬಂದು, ಕುಟುಂಬದ ಎಲ್ಲರಿಗೂ ಒಳಿತಾಗುತ್ತದೆ ಎಂದು ಆದಿವಾಸಿಗಳು ಬಲವಾಗಿ ನಂಬುತ್ತಾರೆ. ಕಾಮದೇವ ದೇವಸ್ಥಾನ ಸಮಿತಿ ಸದಸ್ಯ ತೊಡಸಂ ನಾಗೋರಾವ್ ಮಾತನಾಡಿ, ಶತಮಾನಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ ಎಂದರು.

ಆದಿಲಾಬಾದ್ ಜಿಲ್ಲೆಯ ನಾರ್ನೂರ್ ಮಂಡಲ ಕೇಂದ್ರದಲ್ಲಿ ನಡೆದ ಕಾಮದೇವ ಜಾತ್ರೆ ಇದೇ 24ರಂದು ತೊಡಸಂ ಕುಲಬಾಂಧವರ ನೇತೃತ್ವದಲ್ಲಿ ಆರಂಭಗೊಂಡಿತು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಂಘಟಕರು ಸಕಲ ವ್ಯವಸ್ಥೆ ಮಾಡಿದ್ದಾರೆ. ವಾರ್ಷಿಕವಾಗಿ ಪುಷ್ಯ ಮಾಸದಲ್ಲಿ ಖಂಡದೇವರ ಜಾತ್ರೆ ನಡೆಯುತ್ತದೆ. ಕಾಮದೇವರ ಜಾತ್ರೆ ಮುಗಿದ ಮೇಲೆ ಆದಿವಾಸಿಗಳೆಲ್ಲ ನಾಗೋಬಾ ಜಾತ್ರೆಗೆ ಹೊರಡುವುದು ವಾಡಿಕೆ.

ಮಾಂಕಾಪುರದ ಗೋವರ್ಧನಗುಟ್ಟದಲ್ಲಿ ಇದೇ ತಿಂಗಳ 24ರಂದು ತೊಡಸಂ ವಂಶಸ್ಥರು ಕುಟುಂಬ ಸಮೇತ ವಾಸ್ತವ್ಯ ಹೂಡಿ ಮೈಸಮಾ ದೇವತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. 25ರಂದು ಅಲ್ಲಿಂದ ಖಂಡದೇವ ದೇಗುಲ ತಲುಪಿ… ಮಧ್ಯರಾತ್ರಿ ತೋಡಸಂನವರು ದೇವರ ಮೂರ್ತಿಗಳಿಗೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿದರು.

Also Read: ಸಾವಿನಲ್ಲೂ ಒಂದಾದ ಪತಿ-ಪತ್ನಿ ಬಾಂಧವ್ಯ… ಹೆಂಡತಿಯ ಸಾವಿನ ಬೆನ್ನಿಗೆ ಗಂಡನ ಸಾವು

ಸಾಂಸ್ಕೃತಿಕ ಸಂಪ್ರದಾಯಗಳ ನಡುವೆ ವಿಶೇಷ ಪೂಜೆಗಳೊಂದಿಗೆ ಜಾತ್ರೆ ಆರಂಭಗೊಂಡಿತು. 26ರಂದು ಕುಲದ ಹೆಣ್ಣು ಮಗಳಿಗೆ ಪವಿತ್ರ ಎಳ್ಳೆಣ್ಣೆ ಕುಡಿಸಿ ಶುದ್ಧಿ ಮಾಡಲಾಯಿತು. ಈ ಜಾತ್ರೆ 15 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಮೇಳದ ಸಂದರ್ಭದಲ್ಲಿ ಸಂಘಟಕರು ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ.

ತೆಲಂಗಾಣ ರಾಜ್ಯವಲ್ಲದೆ, ಆಂಧ್ರಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಸಂಯುಕ್ತ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಎಣ್ಣೆ ಕುಡಿಯುವ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಗಣ್ಯರು, ಅಧಿಕಾರಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಆಡಳಿತಾಧಿಕಾರಿಗಳು ಮಿನಿ ದರ್ಬಾರ್ ನಡೆಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?