ಹರ್ಯಾಣ: ಕಳೆದ 4 ದಿನಗಳಲ್ಲಿ 3 ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ 18 ಮಂದಿ ಸಾವು

ಹರ್ಯಾಣದಲ್ಲಿ ಕಳೆದ 4 ದಿನಗಳಲ್ಲಿ ನಕಲಿ ಮದ್ಯ ಸೇವಿಸಿ 18ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಒಟ್ಟು 3 ಗ್ರಾಮಗಳಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರ ಮತ್ತು ಯುಪಿಯಲ್ಲಿ ವಿಷಪೂರಿತ ಮದ್ಯದಿಂದ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿದ್ದವು, ಆದರೆ ಈಗ ಯಮುನಾನಗರದಲ್ಲಿಯೂ ಇದು ನಡೆದಿದೆ, ಮಂಡೆಬರಿ, ಪಂಜೆಟೊ ಕಾ ಮಜ್ರಾ ಮತ್ತು ಸರನ್ ಗ್ರಾಮದಲ್ಲಿ ಇದುವರೆಗೆ 18 ಜನರು ಮೃತಪಟ್ಟಿದ್ದಾರೆ.

ಹರ್ಯಾಣ: ಕಳೆದ 4 ದಿನಗಳಲ್ಲಿ 3 ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ 18 ಮಂದಿ ಸಾವು
ಪೊಲೀಸ್
Image Credit source: Hindustan Times

Updated on: Nov 12, 2023 | 11:10 AM

ಹರ್ಯಾಣದಲ್ಲಿ ಕಳೆದ 4 ದಿನಗಳಲ್ಲಿ ನಕಲಿ ಮದ್ಯ ಸೇವಿಸಿ 18ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಒಟ್ಟು 3 ಗ್ರಾಮಗಳಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರ ಮತ್ತು ಯುಪಿಯಲ್ಲಿ ವಿಷಪೂರಿತ ಮದ್ಯದಿಂದ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿದ್ದವು, ಆದರೆ ಈಗ ಯಮುನಾನಗರದಲ್ಲಿಯೂ ಇದು ನಡೆದಿದೆ, ಮಂಡೆಬರಿ, ಪಂಜೆಟೊ ಕಾ ಮಜ್ರಾ ಮತ್ತು ಸರನ್ ಗ್ರಾಮದಲ್ಲಿ ಇದುವರೆಗೆ 18 ಜನರು ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸಾವಿನ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಮದ್ಯ ಸೇವಿಸಿದವರು ಖಂಡಿತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದಲ್ಲದೇ ಫೋರೆನ್ಸಿಕ್ ತಂಡವು ಸ್ಮಶಾನ ಸ್ಥಳಕ್ಕೆ ತೆರಳಿ ಚಿತಾಭಸ್ಮದ ಮಾದರಿಗಳನ್ನು ಸಂಗ್ರಹಿಸಿದೆ ಆದರೆ ಸಾವನ್ನಪ್ಪಿದ ಕುಟುಂಬ ಸದಸ್ಯರು ಇನ್ನೂ ಆಘಾತದಿಂದ ಹೊರಬಂದಿಲ್ಲ. ಕೇವಲ 27 ವರ್ಷ ವಯಸ್ಸಿನ ರವೀಂದ್ರ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಈಗ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ರವೀಂದ್ರನ ತಂದೆ ಮತ್ತು ಸಹೋದರ ಈಗಾಗಲೇ ಮೃತಪಟ್ಟಿದ್ದಾರೆ. ಅಕ್ಕಪಕ್ಕದವರು, ಬಂಧುಗಳು ಈಗ ಮನೆಗೆ ಬಂದು ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ. 29 ವರ್ಷದ ಯುವಕ ವಿಶಾಲ್‌ನ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ವಿಶಾಲ್ ಮಂದಾವರಿ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಇಂದು ಅವರ ಅಂತಿಮ ಸಂಸ್ಕಾರ ನಡೆಯಿತು.

ಮತ್ತಷ್ಟು ಓದಿ: ಹರ್ಯಾಣ: ನಕಲಿ ಮದ್ಯ ಸೇವನೆ, ಯಮುನಾನಗರದಲ್ಲಿ 6 ಮಂದಿ ಸಾವು

ಇಂದು ಬೆಳಗಿನ ತನಕ 16 ಜನರ ಸಾವನ್ನು ಆಡಳಿತ ಮಂಡಳಿ ಖಚಿತಪಡಿಸಿದ್ದು, ಅದರಲ್ಲಿ 10 ಮಂದಿ ಮಾಂದಾವರಿ ಗ್ರಾಮದವರು ಮತ್ತು ನಾಲ್ವರು ಸರನ್ ಗ್ರಾಮದವರು ಎಂದು ಹೇಳಲಾಗುತ್ತಿದೆ. ಮದ್ಯದಂಗಡಿಗಳಿಗೆ ಆಡಳಿತ ಮಂಡಳಿ ಮೊಹರು ಹಾಕಿದ್ದು, ಯಾರ ಮನೆಯಲ್ಲಿಯಾದರೂ ಒಂದೇ ಒಂದು ಬಾಟಲಿ ಮದ್ಯವಿದ್ದರೆ ಬಿಸಾಡಿ ಎಂದು ಸಮೀಪದ ಗ್ರಾಮಗಳಿಗೂ ಮಾಹಿತಿ ರವಾನಿಸಲಾಗಿದೆ.

ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿ ಅನಾರೋಗ್ಯ ಪೀಡಿತರಿಗೆ ಔಷಧ ನೀಡಲಾಗುತ್ತಿದೆ. ಅವರನ್ನು ಪರೀಕ್ಷಿಸಲಾಗುತ್ತಿದ್ದು, ಮದ್ಯಪಾನ ಮಾಡದಂತೆ ಮನವಿ ಮಾಡಲಾಗುತ್ತಿದೆ. ಅಂಬಾಲಾ ಜಿಲ್ಲೆಯಲ್ಲಿ ಎರಡು ಸಾವುಗಳು ಸಂಭವಿಸಿದ್ದು, ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಏಳು ಮಂದಿಯನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದಾರೆ.

ಅವರಿಂದ ಹೆಚ್ಚಿನ ಮಾಹಿತಿ ಪಡೆದು ಶಂಕಿತರನ್ನು ಬಂಧಿಸಲಾಗುತ್ತಿದೆ. ಸದ್ಯ ಪೊಲೀಸರ ಪಟ್ಟಿಯಲ್ಲಿ ಇನ್ನೂ ಐದು ಮಂದಿಯ ಹೆಸರು ದಾಖಲಾಗಿದೆ. ಮೃತರಲ್ಲಿ ವಿಶಾಲ್, ರವೀಂದರ್, ಸುರೇಶ್, ಸುರೇಂದ್ರ ಪಾಲ್, ಸುಮೇರ್ ಚಂದ್ ಸೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ