ವೇಶ್ಯಾವಾಟಿಕೆಯನ್ನು ಕೂಲ್ ವೃತ್ತಿ ಎಂದ ಕಾಮಿಡಿಯನ್ ವಿದುಷಿ ಸ್ವರೂಪ್; ಜನರಿಂದ ಟೀಕೆ

"ಅಶಿಕ್ಷಿತ ಮೂರ್ಖರು ಮಾತ್ರ ವೇಶ್ಯಾವಾಟಿಕೆಯನ್ನು ತಮಾಷೆ ಮಾಡಬಹುದು. ಆಕೆಗೆ ಆಕಸ್ಮಿಕವಾಗಿ ಮಕ್ಕಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಬಡತನದ ವಿಷವರ್ತುಲದ ಬಗ್ಗೆ ಕಲಿಯಲು ಯಾವುದೇ ಅವಕಾಶ ಸಿಕ್ಕಿದರೆ ಅವಳು ತನ್ನ ಬಗ್ಗೆ ತುಂಬಾ ನಾಚಿಕೆಪಡುತ್ತಾಳೆ" ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ

ವೇಶ್ಯಾವಾಟಿಕೆಯನ್ನು ಕೂಲ್ ವೃತ್ತಿ ಎಂದ ಕಾಮಿಡಿಯನ್ ವಿದುಷಿ ಸ್ವರೂಪ್; ಜನರಿಂದ ಟೀಕೆ
ವಿದುಷಿ ಸ್ವರೂಪ್
ರಶ್ಮಿ ಕಲ್ಲಕಟ್ಟ

Updated on: Oct 23, 2023 | 5:30 PM

ದೆಹಲಿ ಅಕ್ಟೋಬರ್ 23:  ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ (stand-up comedy) ಹೆಚ್ಚಿನ ಬೆಳವಣಿಗೆ ಕಂಡಿದೆ. ಅನೇಕ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಈ ಸ್ಟ್ಯಾಂಡ್-ಅಪ್ ವಿಡಿಯೊಗಳು ಮತ್ತು ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಕಾರ್ಯಕ್ರಮಗಳನ್ನು ಲೈವ್ ಆಗಿ ವೀಕ್ಷಿಸಲು ಹಲವರು ಆಫ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ. ಆದಾಗ್ಯೂ, ಕೆಲವೊಮ್ಮೆ, ಹಾಸ್ಯ ಕಲಾವಿದರ ಹಾಸ್ಯಗಳು ಪ್ರೇಕ್ಷಕರಿಗೆ ಸರಿಯಾಗಿ ರುಚಿಸುವುದಿಲ್ಲ. ಅಂತದ್ದೇ ಪ್ರಕರಣವೊಂದು ಈಗ ಸುದ್ದಿಯಲ್ಲಿದೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿದುಷಿ ಸ್ವರೂಪ್(Vidushi Swaroop) ಅವರು ವೇಶ್ಯಾವಾಟಿಕೆಯನ್ನು (Prostitution) “ಕೂಲ್ ಪ್ರೊಫೆಷನ್” ಎಂದು ಕರೆದಿದ್ದು, ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದುಷಿ ಸ್ವರೂಪ್ ವೇಶ್ಯಾವಾಟಿಕೆಯನ್ನು “ಕೂಲ್ ಪ್ರೊಫೆಷನ್” ಎಂದು ಲೇಬಲ್ ಮಾಡುವ ಮೂಲಕ ತಮ್ಮ ಹಾಸ್ಯ ಕಾರ್ಯಕ್ರಮ ಪ್ರಾರಂಭಿಸುತ್ತಾರೆ. ಆನಂತರ ವೃತ್ತಿಯಲ್ಲಿನ “ಅನುಭವ” ಮತ್ತು ಅದು ಉಳಿದವುಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಹೇಳಿದ್ದಾರೆ. ಆದಾಗ್ಯೂ ಆಕೆಯ ಅಸೂಕ್ಷ್ಮ ಮಾತುಗಳು ಜನರಿಗೆ ಹಿಡಿಸಿಲ್ಲ.


ಇದರಲ್ಲಿ ಹಾಸ್ಯ ಎಲ್ಲಿದೆ? ನನಗೆ ಅಸಹ್ಯವನ್ನು ಹೊರತುಪಡಿಸಿ ಬೇರೇನೂ ಅನಿಸಲಿಲ್ಲ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇದೆಂಥಾ ಅವಮಾನ ಎಂದು ಇನ್ನೊಬ್ಬರು ಹೇಳಿದ್ದಾರೆ, ಮತ್ತೊಬ್ಬರು ಇದು “ನಾಚಿಕೆಗೇಡು” ಎಂದು ಹೇಳಿದ್ದಾರೆ.

“ಸರಿ ನಾನು ನಗುತ್ತಿರುವ ಪ್ರೇಕ್ಷಕರಿಗೆ ಪದಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ” ಎಂದು ಬಳಕೆದಾರರು ಸೇರಿಸಿದ್ದಾರೆ.

“ಅಶಿಕ್ಷಿತ ಮೂರ್ಖರು ಮಾತ್ರ ವೇಶ್ಯಾವಾಟಿಕೆಯನ್ನು ತಮಾಷೆ ಮಾಡಬಹುದು. ಆಕೆಗೆ ಆಕಸ್ಮಿಕವಾಗಿ ಮಕ್ಕಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಬಡತನದ ವಿಷವರ್ತುಲದ ಬಗ್ಗೆ ಕಲಿಯಲು ಯಾವುದೇ ಅವಕಾಶ ಸಿಕ್ಕಿದರೆ ಅವಳು ತನ್ನ ಬಗ್ಗೆ ತುಂಬಾ ನಾಚಿಕೆಪಡುತ್ತಾಳೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ

ಕವಿ ಕುಮಾರ್ ವಿಶ್ವಾಸ್ ಅವರು ಎಕ್ಸ್ ನಲ್ಲಿ, “ವಾಸ್ತವವಾಗಿ, ಇದು ಕೇವಲ ಅಸಂಬದ್ಧ ಅಲ್ಲ ಅಮಾನವೀಯ ಮತ್ತು ಕ್ರೂರವಾಗಿದೆ. ಈ ಸಂವೇದನಾಶೀಲವಲ್ಲದ ಹಾಸ್ಯವು ಅಸಭ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಗೇಲಿ ಮಾಡುವ ಇಂದಿನ ಸ್ಟ್ಯಾಂಡ್-ಅಪ್ ಗಳ ಒಂದು ನೋಟವಾಗಿದೆ. .ಯಾವ ಪುರುಷ ನಿರೂಪಕನೂ ಈ ಒಳ್ಳೆ ಕೆಲಸ ಮಾಡದಿರುವುದು ಭಾಗ್ಯ, ಇಲ್ಲದಿದ್ದರೆ ಸಮಿತಿಗಳಲ್ಲವೂ ಎಚ್ಚೆತ್ತುಕೊಳ್ಳುತ್ತಿದ್ದವು.ನಕ್ಕವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು

ಆದರೆ, ಕೆಲವರು ಆಕೆಯನ್ನು ಬೆಂಬಲಿಸಿದ್ದಾರೆ. ಬಳಕೆದಾರರೊಬ್ಬರು, ನನ್ನ ಅಭಿಪ್ರಾಯ ಏನೆಂದರೆ, ಇದು ವೇಶ್ಯಾವಾಟಿಕೆ ಮತ್ತು ದುಃಖದ ವಾಸ್ತವತೆಯನ್ನು ಬಹಿರಂಗಪಡಿಸುವ ಡಾರ್ಕ್ ಕಾಮಿಡಿಯಾಗಿದೆ (ಆದರೂ ಪೂರ್ಣ ವಿಡಿಯೊವನ್ನು ವೀಕ್ಷಿಸುವ ಮೂಲಕ ಮಾತ್ರ ಉದ್ದೇಶವನ್ನು ದೃಢೀಕರಿಸಬಹುದು). ಅವಳು ಅದನ್ನು ಸಮರ್ಥಿಸದಿದ್ದರೆ ಅಥವಾ ತಪ್ಪು ಮಾಹಿತಿಯನ್ನು ಹರಡದಿದ್ದರೆ ಅದರಲ್ಲಿ ಏನೂ ತಪ್ಪಿಲ್ಲ” ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us