AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು

Trevor Noah's Show Canceled In Bengaluru: ಸೆಪ್ಟೆಂಬರ್ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಟ್ರೆವೊರ್ ನೋವಾ ಅವರ ಕಾಮಿಡಿ ಶೋ ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಂಡಿದೆ. ಸೌತ್ ಆಫ್ರಿಕಾದ ಸ್ಟ್ಯಾಂಡಪ್ ಕಾಮಿಡಿಯನ್ ನಿನ್ನೆ ವೇದಿಕೆಗೆ ಬಂದು ಶೋ ಶುರು ಮಾಡಲು ಯತ್ನಿಸಿದರೂ ಆಡಿಯೋ ಸಮಸ್ಯೆಯಾಗಿ ಕಾರ್ಯಕ್ರಮ ನಿಲ್ಲಿಸಿದ್ದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ತಮ್ಮ ಕಾಮಿಡಿ ಶೋ ರದ್ದಾಗಿರುವುದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ, ಟೆಕ್ ಸಿಟಿ ಬೆಂಗಳೂರಿನ ಹೆಸರಿಗೆ ಈ ಘಟನೆ ಕಳಂಕ ಆಗಿದೆ ಎಂದು ವಿಷಾದಿಸಿದ್ದಾರೆ.

ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು
ಸೌತ್ ಆಫ್ರಿಕಾ ಸ್ಟ್ಯಾಂಡಪ್ ಕಾಮಿಡಿಯನ್ ಟ್ರೆವೊರ್ ನೋವಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2023 | 3:39 PM

ಬೆಂಗಳೂರು, ಸೆಪ್ಟೆಂಬರ್ 28: ನಿನ್ನೆ ಇಲ್ಲಿ ನಡೆಯಬೇಕಿದ್ದ ಟ್ರೆವೊರ್ ನೋವಾ ಅವರ ಕಾಮಿಡಿ ಶೋ (South African standup comedian Trevor Noah) ತಾಂತ್ರಿಕ ತೊಂದರೆಯಿಂದಾಗಿ ರದ್ದುಗೊಂಡಿದೆ. ಸೌತ್ ಆಫ್ರಿಕಾದ ಸ್ಟ್ಯಾಂಡಪ್ ಕಾಮಿಡಿಯನ್ ಟ್ರೆವೊರ್ ಅವರು ನಿನ್ನೆ ವೇದಿಕೆಗೆ ಬಂದು ಶೋ ಶುರು ಮಾಡಲು ಯತ್ನಿಸಿದರೂ ಆಡಿಯೋ ಸಮಸ್ಯೆಯಾಗಿ ಕಾರ್ಯಕ್ರಮ ನಿಲ್ಲಿಸಿದ್ದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ತಮ್ಮ ಕಾಮಿಡಿ ಶೋ ರದ್ದಾಗಿರುವುದನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಿವಾಸಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah), ಟೆಕ್ ಸಿಟಿ ಎನಿಸಿರುವ ಬೆಂಗಳೂರಿನ ಹೆಸರಿಗೆ ಈ ಘಟನೆ ಕಳಂಕ ಆಗಿದೆ ಎಂದು ವಿಷಾದಿಸಿದ್ದಾರೆ.

‘ಬಲವಂತವಾಗಿ ರದ್ದು ಮಾಡಬೇಕಾಯಿತು’: ಟ್ರೆವೊರ್ ನೊವಾ ಅವರ ಬೆಂಗಳೂರು ಕಾರ್ಯಕ್ರಮಗಳನ್ನು ತಾಂತ್ರಿಕ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಟೆಕ್ ಇಮೇಜ್​ಗೆ ಇದು ಕಪ್ಪುಚುಕ್ಕೆಯಾಗಿದೆ. ಕನ್ವೆನ್ಷನ್ ಸೆಂಟರ್​ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿರಣ್ ಮುಜುಮ್ದಾರ್ ಷಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪಿಂಚಣಿದಾರರು ಹಾಸಿಗೆ ಹಿಡಿದಿದ್ದರೆ ಮನೆ ಬಾಗಿಲಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಪಡೆಯಿರಿ: ಬ್ಯಾಂಕುಗಳಿಗೆ ಕೇಂದ್ರ ನಿರ್ದೇಶನ

ದಕ್ಷಿಣ ಆಫ್ರಿಕಾದ ಹಾಸ್ಯಗಾರ ಟ್ರೆವೋರ್ ನೋವಾ ಅವರು ನಾಗವಾರಯಲ್ಲಿರುವ ಮ್ಯಾನ್​ಫೋ ಕನ್ವೆನ್ಷನ್ ಸೆಂಟರ್​ನಲ್ಲಿ ನಿನ್ನೆ ಮತ್ತು ಇವತ್ತು (ಸೆ. 27, 28) ಕಾರ್ಯಕ್ರಮ ನಡೆಸಬೇಕಿತ್ತು. ನಿನ್ನೆ ಕನ್ವೆನ್ಷನ್ ಸೆಂಟರ್​​ನ ಸಭಾಂಗಣದಲ್ಲಿ ವೇದಿಕೆ ಏರಿ ಕಾರ್ಯಕ್ರಮ ಶುರು ಮಾಡಿದಾಗಲೇ ಗೊತ್ತಾಗಿದ್ದು ತಾಂತ್ರಿಕ ತೊಂದರೆ ಇದೆ ಎಂಬದು. ಸಭಾಂಗಣದಲ್ಲಿ ನೆರೆದಿದ್ದ ಸಭಿಕರಲ್ಲಿ ಒಬ್ಬರಿಗೂ ಕೂಡ ಅವರ ಧ್ವನಿ ಕೇಳುತ್ತಿರಲಿಲ್ಲ. ಈ ಸಮಸ್ಯೆ ಬೇರ ಸರಿಯಾಗಲೂ ಇಲ್ಲ. ಹೀಗಾಗಿ, ಟ್ರೆವೊರ್ ಅವರು ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಬೇಕಾಯಿತು.

ಇನ್ನೂ ವಿಚಿತ್ರ ಎಂದರೆ, ನಿನ್ನೆ ಇದೇ ಪ್ರದೇಶದ ಸುತ್ತಮುತ್ತ ಮಾಮೂಲಿಗಿಂತ ತುಸು ಹೆಚ್ಚೇ ಟ್ರಾಫಿಕ್ ಜಾಮ್ ಇತ್ತು. ಹೀಗಾಗಿ, ಶೋಗೆ ಟಿಕೆಟ್ ಬುಕ್ ಮಾಡಿದ್ದವರಲ್ಲಿ ಬಹಳ ಮಂದಿ ತಡವಾಗಿ ಬಂದಿದ್ದರು. ಅವರೆಲ್ಲರೂ ಸಭಾಂಗಣಕ್ಕೆ ಬರುವ ಹೊತ್ತಿಗೆ ಶೋ ರದ್ದಾಗಿರುವುದು ಗೊತ್ತಾಗಿ ಪೆಚ್ಚುಮೋರೆ ಹಾಕಿ ಮರಳಬೇಕಾಯಿತು. ಸದ್ಯ, ಟಿಕೆಟ್ ನೀಡಿದ ಸಂಘಟಕರು, ಸಭಾಂಗಣದವರು ಮತ್ತು ಬುಕ್ ಮೈ ಶೋನವರು ಎಲ್ಲರಿಗೂ ರೀಫಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಣಬೀರ್ ಕಪೂರ್ ಒಟ್ಟೂ ಆಸ್ತಿ ಎಷ್ಟು? ಎಲ್ಲಿಂದ ಬಂತು ಇಷ್ಟೊಂದು ಹಣ?

ಇನ್ನು, ಬೆಂಗಳೂರಿನಲ್ಲಿ ಎರಡು ದಿನ ಶೋ ನಡೆಸಬೇಕಿದ್ದ ಟ್ರೆವೊರ್ ನೋವಾ ಅವರು ಮುಂಬೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ಶೋ ಕೊಡುತ್ತಿದ್ದಾರೆ. ಅಲ್ಲಿಯೂ ಅವರಿಗೆ ತಾಂತ್ರಿಕ ತೊಂದರೆ ಆಗದಿದ್ದರೆ ಸರಿ..!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್