AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆ ಸಮಯದಲ್ಲಿ ನಿದ್ರೆ ತಪ್ಪಿಸಲು ಉಗ್ರರು ಬಳಸುವ ಮಾತ್ರೆಗಳನ್ನು ಸೇವಿಸುತ್ತಿರುವ ವಿದ್ಯಾರ್ಥಿಗಳು

10ನೇ ತರಗತಿ ವಿದ್ಯಾರ್ಥಿನಿ ಪ್ರಜಕ್ತಾ ಸ್ವರೂಪ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಕಳೆದ ವಾರ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ರಕ್ತನಾಳಗಳು ಊದಿಕೊಂಡವು. ಹುಡುಗಿ ರಾತ್ರಿಯಿಡೀ ನಿದ್ರೆ ಮಾಡದೆ ತನ್ನ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಅವನ ತಾಯಿ ಅವನಿಗೆ ಎಚ್ಚರವಾಗಿರಲು ಸಹಾಯ ಮಾಡಲು ಒಂದು ಲೋಟ ಬಿಸಿ ಕಾಫಿಯನ್ನು ನೀಡುತ್ತಿದ್ದಳು. ಪ್ರಜಕ್ತಾ ಒಂದು ಸಂಜೆ ಪ್ರಜ್ಞಾಹೀನಳಾದಳು ಮತ್ತು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಆಕೆಯ ಪೋಷಕರು ಆಕೆಯ ಡ್ರಾಯರ್‌ನಲ್ಲಿ ಮಾತ್ರೆ ತುಂಬಿದ ಬಾಟಲಿಯನ್ನು ಕಂಡು ವೈದ್ಯರಿಗೆ ಮಾತ್ರೆಗಳನ್ನು ನೀಡಿದಾಗ, ತಮ್ಮ ಮಗಳು ನಿದ್ರಾಜನಕ ಮಾತ್ರೆಗಳನ್ನು ಸೇವಿಸುತ್ತಿರುವುದು ತಿಳಿದು ಆಘಾತಕ್ಕೊಳಗಾದರು

ಪರೀಕ್ಷೆ ಸಮಯದಲ್ಲಿ ನಿದ್ರೆ ತಪ್ಪಿಸಲು ಉಗ್ರರು ಬಳಸುವ ಮಾತ್ರೆಗಳನ್ನು ಸೇವಿಸುತ್ತಿರುವ ವಿದ್ಯಾರ್ಥಿಗಳು
ಪುಸ್ತಕ
ನಯನಾ ರಾಜೀವ್
|

Updated on:Feb 19, 2024 | 8:14 AM

Share

ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಕುರಿತು ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಪರೀಕ್ಷೆ ವೇಳೆ ನಿದ್ರೆ ತಡೆಯಲು ವಿದ್ಯಾರ್ಥಿಗಳು ಉಗ್ರರು ಸೇವಿಸುವ  ಮಾತ್ರೆಗಳನ್ನು ಸೇವಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಗ್ರರು ನಿದ್ರೆಯನ್ನು ಸೇವಿಸುವ ನಿದ್ರೆ ಮಾತ್ರ ಇದಾಗಿದ್ದು, ಇದನ್ನು ನುಂಗಿದರೆ 40 ಗಂಟೆಗಳ ಕಾಲ ನಿದ್ರೆ ಬರುವುದಿಲ್ಲ, ಈ ಆಘಾತಕಾರಿ ವಿಚಾರವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಳು, 10ನೇ ತರಗತಿ ವಿದ್ಯಾರ್ಥಿನಿ ಕುಸಿದುಬಿದ್ದು ಆಸ್ಪತ್ರೆ ಸೇರಿದ್ದಳು. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಪ್ರಜಕ್ತಾ ಸ್ವರೂಪ್​​ಗೆ ಚಿಕಿತ್ಸೆ ನೀಡಲಾಗಿತ್ತು.

ಈ ವೇಳೆ ಉಗ್ರರು ನುಂಗುವ ಮಾತ್ರೆ ಸೇವಿಸಿರುವುದು ತಿಳಿದುಬಂದಿದೆ, ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ನರಗಳು ಊದಿಕೊಂಡಿರುವುದು ಪತ್ತೆಯಾಗಿತ್ತು,ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ವಿದ್ಯಾರ್ಥಿನಿ, ನಿದ್ದೆ ಬರದಂತೆ ಮಾತ್ರೆ ನುಂಗುತ್ತಿದ್ದೆ ಎಂದಿದ್ದಳು.

ಕೊಠಡಿಯಲ್ಲಿ ನಿದ್ದೆ ತಡೆಯುವ ಮಾತ್ರೆಯ ಬಾಟಲ್ ಪತ್ತೆಯಾಗಿ, ಪೋಷಕರು ಆಘಾತಕ್ಕೊಳಗಾಗಿದ್ದರು. ವೈದ್ಯರು ಅದನ್ನು ನೋಡಿ ಆ ಮಾತ್ರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಮಾತ್ರೆಗಳ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. 26/11 ಮುಂಬೈ ದಾಳಿ ವೇಳೆ ಮೊದಲ ಬಾರಿ ಈ ಮಾತ್ರೆಗಳು ಪತ್ತೆಯಾಗಿದ್ದವು.

ಮತ್ತಷ್ಟು ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ

ಉಗ್ರರ ಬ್ಯಾಗ್​​ಗಳಲ್ಲಿ ಈ ಮಾತ್ರೆಗಳು ಪತ್ತೆಯಾಗಿದ್ದವು, ಪರೀಕ್ಷೆಗಳ ಸಮಯದಲ್ಲಿ ಈ ಮಾತ್ರೆಗೆ ಹೆಚ್ಚು ಬೇಡಿಕೆ ಇದೆ, ಈ ವಿಚಾರವನ್ನು ಮೆಡಿಕಲ್ ಶಾಪ್ ಮಾಲೀಕರು ತಿಳಿಸಿದ್ದಾರೆ. ಪರೀಕ್ಷೆ ಒತ್ತಡಕ್ಕೆ ಒಳಗಾಗಿ ಈ ಮಾತ್ರೆಗೆ ಮೊರೆಹೋಗಿದ್ದು ಆತಂಕದ ಅಂಶ ಬಹಿರಂಗಗೊಂಡಿದೆ. ವೈದ್ಯರ ಪ್ರಕಾರ, ಈ ಔಷಧಿಗಳನ್ನು ‘ಚುನಿಯಾ’ ಮತ್ತು ‘ಮೀಠಿ’ ಮುಂತಾದ ಹೆಸರುಗಳಲ್ಲಿ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ನಿದ್ರಾ ನಿವಾರಕ ಮಾತ್ರೆಗಳು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವ ಔಷಧಿಗಳ ಮಾರಾಟ ಹೆಚ್ಚಾಗಿದೆ ಎಂದು ರಸಾಯನಶಾಸ್ತ್ರಜ್ಞ ಸುರಿಂದರ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಈ ಔಷಧಿಗಳಿಗೆ ಗ್ರಾಹಕರು ಯಾವುದೇ ಬೆಲೆ ತೆರಲು ಸಿದ್ಧರಿದ್ದಾರೆ ಎಂದರು. ಅವರು ಆಯಾಸವನ್ನು ನಿವಾರಿಸಲು ಶಕ್ತಿ ಪಾನೀಯಗಳನ್ನು ಸಹ ಖರೀದಿಸುತ್ತಾರೆ. ಮೊಡಫಿನಿಲ್ ಅನ್ನು ಪ್ರೊವಿಜಿಲ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ, ಇದನ್ನು ಪ್ರಾಥಮಿಕವಾಗಿ ನಾರ್ಕೊಲೆಪ್ಸಿ, ಶಿಫ್ಟ್ ವರ್ಕ್ ಸ್ಲೀಪ್ ಡಿಸಾರ್ಡರ್, ಇಡಿಯೋಪಥಿಕ್ ಹೈಪರ್ಸೋಮ್ನಿಯಾ ಮತ್ತು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾಗೆ ಸಂಬಂಧಿಸಿದ  ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:09 am, Mon, 19 February 24

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌