AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ. ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ […]

ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ
KUSHAL V
|

Updated on: Nov 19, 2020 | 6:57 PM

Share

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ.

ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಪಡೆದಿರುವ ಸಮುದಾಯದ ಸುದೀಶ್ ಕೇರಳ ಇತಿಹಾಸಕ್ಕೆ ಹೊಸ ಪುಟವೊಂದನ್ನು ಸೇರಿಸುತ್ತಿದ್ದಾರೆ. ಆನೆಗಳು ಸ್ವಚ್ಛಂದವಾಗಿ ವಿಹರಿಸುವ ಅಲಕ್ಕಳಲ್ ಕಾಲೋನಿಯ ನಿವಾಸಿ ಸುದೀಶ್ ಮುಂದಿನ ದಿನಗಳಲ್ಲಿ ನೀಲಂಬೂರು ಬ್ಲಾಕ್ ಪಂಚಾಯಿತಿಯಲ್ಲಿ ವಝಿಕ್ಕಡವು ವಿಭಾಗದಿಂದ ಸ್ಪರ್ಧಿಸಲಿದ್ದಾರೆ. ಆಡಳಿತಾರೂಢ LDF ಮೈತ್ರಿಕೂಟದಿಂದ ಸುದೀಶ್​ ಟಿಕೆಟ್ ಪಡೆದಿದ್ದಾರೆ.

ಇಂದಿಗೂ ಕಿರು ಅರಣ್ಯ ಉತ್ಪನ್ನಗಳು, ಜೇನು ಮತ್ತು ಧೂಪ (ಅಗರು) ಸಂಗ್ರಹವನ್ನೇ ಜೀವನೋಪಾಯವಾಗಿ ನೆಚ್ಚಿಕೊಂಡಿರುವ ಈ ಸಮುದಾಯ ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿದೆ. PUC ತೇರ್ಗಡೆಯಾಗಿರುವ ಸುದೀಶ್​ಗೆ ತನ್ನವರ ಕಣ್ಣೀರು ಒರೆಸಬೇಕೆನ್ನುವ ಹಂಬಲವಿದೆ.

‘ಗೆದ್ದರೆ ಇಷ್ಟೆಲ್ಲಾ ಮಾಡುವ ಆಸೆಯಿದೆ’ ಹಲವು ತಲೆಮಾರುಗಳು ಕಳೆದರೂ ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ. ನಮ್ಮವರ ಬದುಕಿನಲ್ಲಿ ಏನಾದರೂ ಬದಲಾವಣೆ ತರಬೇಕೆನ್ನುವ ಆಶಯದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮೀಸಲು ಕ್ಷೇತ್ರವಾಗಿದ್ದ ಕಾರಣ ಅವಕಾಶ ದೊರೆಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು, ನಮ್ಮವರ ಮನೆಗಳಿರುವ ಸ್ಥಳಗಳಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂಬ ಆಶಯವಿದೆ ಎಂದು ತಾವು ಜಯಗಳಿಸಿದರೆ ಏನೆಲ್ಲಾ ಮಾಡುತ್ತೇನೆ ಎಂದು ಸುದೀಶ್ ತಮ್ಮ ಕನಸುಗಳನ್ನು ಉತ್ಸಾಹದಿಂದ ಹಂಚಿಕೊಂಡರು.

ಜೊತೆಗೆ, ಚುನಾವಣಾ ಪ್ರಚಾರಕ್ಕಾಗಿ ಮತ್ತೊಂದು ಜನವಸತಿ ಪ್ರದೇಶ ತಲುಪಲು ಕನಿಷ್ಠ 8 ಕಿ.ಮೀ. ನಡೆಯಬೇಕಾಗುತ್ತದೆ. ಕಾಡಿನಲ್ಲಿ ಸಂಚರಿಸುವಾಗ ಕಾಡಾನೆಗಳದೇ ದೊಡ್ಡ ಆತಂಕ. ಸಾರ್ವಜನಿಕ ರಸ್ತೆಯೇನೋ ಇದೆ. ಆದರೆ ಅದಕ್ಕೆ ಡಾಂಬರು ಹಾಕಿಲ್ಲ. ಮಳೆಗಾಲದಲ್ಲಿ ವಾಹನ ಸಂಚಾರ ತುಂಬಾ ಕಷ್ಟ. ಹತ್ತಿರದ ಪಟ್ಟಣದಿಂದ ಹಾಡಿ ತಲುಪಲು ಎರಡು ನದಿ ದಾಟಬೇಕಿದೆ ಎಂದು ಸುದೀಶ್​ ತಮ್ಮ ಈಗಿನ ಪರಿಸ್ಥಿತಿ ವಿವರಿಸಿದರು.

ಚೋಳನಾಯ್ಕರ್ ಬುಡಕಟ್ಟು ಸಮುದಾಯ ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿದ್ದ ಚೋಳನಾಯಕನ್ ಸಮುದಾಯದ ಜನರು, 1970ರವರೆಗೂ ದಟ್ಟ ಕಾಡಿನ ‘ಅಲಕ್ಕಳ್’ (ಗುಹೆಗಳು)ಗಳಲ್ಲಿ ವಾಸವಿದ್ದರು. ಸಣ್ಣ ಪ್ರಾಣಿಗಳ ಬೇಟೆ, ಜೇನು ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹವೇ ಅವರ ಮುಖ್ಯ ಜೀವನೋಪಾಯವಾಗಿತ್ತು.

ನಂತರದ ದಿನಗಳಲ್ಲಿ ಕಾಡಂಚಿನ ನೆಲೆಗಳಾದ ಅಲಕ್ಕಳ್ ಮತ್ತು ಪಂಚಕ್ಕೊಲ್ಲಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಸರ್ಕಾರಿ ಸ್ವಾಮ್ಯದ ರಬ್ಬರ್ ನೆಡುತೋಪುಗಳಲ್ಲಿ ರಬ್ಬರ್ ಸಂಗ್ರಹಕಾರರಾಗಿ (ಟೇಪರ್ಸ್) ಬಹುತೇಕರು ಕೆಲಸ ಆರಂಭಿಸಿದರು. ಅಂಕಿಅಂಶಗಳ ಪ್ರಕಾರ ನೀಲಂಬೂರ್ ಪ್ರದೇಶದ ಬುಡಕಟ್ಟು ಹಾಡಿಗಳ 100 ಚೋಳನಾಯ್ಕರ್ ಕುಟುಂಬಗಳಲ್ಲಿ 400 ಮಂದಿ ಇದ್ದಾರೆ. ಈ ಪೈಕಿ ಸುಮಾರು 200 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ