AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ. ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ […]

ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ
KUSHAL V
|

Updated on: Nov 19, 2020 | 6:57 PM

Share

ತಿರುವನಂತಪುರಂ: ನನ್ನವರಿಗಾಗಿ ನಾನು ಏನಾದರೂ ಮಾಡಲೇಬೇಕು. ಇನ್ನೆಷ್ಟು ನಾವು ಹೀಗಿರಲು ಸಾಧ್ಯ? ಎಂದು ಸಿ.ಸುದೀಶ್​ರ ಈ ಪ್ರಶ್ನೆ ಕೇಳಿದಾಗ ಅದರಲ್ಲಿ ತಾವು ಗೆಲ್ಲುವ ಆತ್ಮವಿಶ್ವಾಸದೊಂದಿಗೆ ತಮ್ಮ ಗೆಲುವು ಏಕೆ ಅನಿವಾರ್ಯ ಎಂಬ ವಿವರಣೆಯೂ ಇಣುಕುತ್ತಿತ್ತು. ಅಂದ ಹಾಗೆ, ಸುದೀಶ್​ ಮಾತನಾಡುತ್ತಿರುವುದು ತಮ್ಮ ಚೋಳನಾಯಕನ್ ಸಮುದಾಯದ ಬಗ್ಗೆ.

ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿ ವಾಸವಿರುವ ಚೋಳನಾಯಕನ್ ಸಮುದಾಯ ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಪೈಕಿ ಒಂದು. ಈ ಸಮುದಾಯದ ಯಾರೊಬ್ಬರೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಪಡೆದಿರುವ ಸಮುದಾಯದ ಸುದೀಶ್ ಕೇರಳ ಇತಿಹಾಸಕ್ಕೆ ಹೊಸ ಪುಟವೊಂದನ್ನು ಸೇರಿಸುತ್ತಿದ್ದಾರೆ. ಆನೆಗಳು ಸ್ವಚ್ಛಂದವಾಗಿ ವಿಹರಿಸುವ ಅಲಕ್ಕಳಲ್ ಕಾಲೋನಿಯ ನಿವಾಸಿ ಸುದೀಶ್ ಮುಂದಿನ ದಿನಗಳಲ್ಲಿ ನೀಲಂಬೂರು ಬ್ಲಾಕ್ ಪಂಚಾಯಿತಿಯಲ್ಲಿ ವಝಿಕ್ಕಡವು ವಿಭಾಗದಿಂದ ಸ್ಪರ್ಧಿಸಲಿದ್ದಾರೆ. ಆಡಳಿತಾರೂಢ LDF ಮೈತ್ರಿಕೂಟದಿಂದ ಸುದೀಶ್​ ಟಿಕೆಟ್ ಪಡೆದಿದ್ದಾರೆ.

ಇಂದಿಗೂ ಕಿರು ಅರಣ್ಯ ಉತ್ಪನ್ನಗಳು, ಜೇನು ಮತ್ತು ಧೂಪ (ಅಗರು) ಸಂಗ್ರಹವನ್ನೇ ಜೀವನೋಪಾಯವಾಗಿ ನೆಚ್ಚಿಕೊಂಡಿರುವ ಈ ಸಮುದಾಯ ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿದೆ. PUC ತೇರ್ಗಡೆಯಾಗಿರುವ ಸುದೀಶ್​ಗೆ ತನ್ನವರ ಕಣ್ಣೀರು ಒರೆಸಬೇಕೆನ್ನುವ ಹಂಬಲವಿದೆ.

‘ಗೆದ್ದರೆ ಇಷ್ಟೆಲ್ಲಾ ಮಾಡುವ ಆಸೆಯಿದೆ’ ಹಲವು ತಲೆಮಾರುಗಳು ಕಳೆದರೂ ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ. ನಮ್ಮವರ ಬದುಕಿನಲ್ಲಿ ಏನಾದರೂ ಬದಲಾವಣೆ ತರಬೇಕೆನ್ನುವ ಆಶಯದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮೀಸಲು ಕ್ಷೇತ್ರವಾಗಿದ್ದ ಕಾರಣ ಅವಕಾಶ ದೊರೆಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು, ನಮ್ಮವರ ಮನೆಗಳಿರುವ ಸ್ಥಳಗಳಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂಬ ಆಶಯವಿದೆ ಎಂದು ತಾವು ಜಯಗಳಿಸಿದರೆ ಏನೆಲ್ಲಾ ಮಾಡುತ್ತೇನೆ ಎಂದು ಸುದೀಶ್ ತಮ್ಮ ಕನಸುಗಳನ್ನು ಉತ್ಸಾಹದಿಂದ ಹಂಚಿಕೊಂಡರು.

ಜೊತೆಗೆ, ಚುನಾವಣಾ ಪ್ರಚಾರಕ್ಕಾಗಿ ಮತ್ತೊಂದು ಜನವಸತಿ ಪ್ರದೇಶ ತಲುಪಲು ಕನಿಷ್ಠ 8 ಕಿ.ಮೀ. ನಡೆಯಬೇಕಾಗುತ್ತದೆ. ಕಾಡಿನಲ್ಲಿ ಸಂಚರಿಸುವಾಗ ಕಾಡಾನೆಗಳದೇ ದೊಡ್ಡ ಆತಂಕ. ಸಾರ್ವಜನಿಕ ರಸ್ತೆಯೇನೋ ಇದೆ. ಆದರೆ ಅದಕ್ಕೆ ಡಾಂಬರು ಹಾಕಿಲ್ಲ. ಮಳೆಗಾಲದಲ್ಲಿ ವಾಹನ ಸಂಚಾರ ತುಂಬಾ ಕಷ್ಟ. ಹತ್ತಿರದ ಪಟ್ಟಣದಿಂದ ಹಾಡಿ ತಲುಪಲು ಎರಡು ನದಿ ದಾಟಬೇಕಿದೆ ಎಂದು ಸುದೀಶ್​ ತಮ್ಮ ಈಗಿನ ಪರಿಸ್ಥಿತಿ ವಿವರಿಸಿದರು.

ಚೋಳನಾಯ್ಕರ್ ಬುಡಕಟ್ಟು ಸಮುದಾಯ ಉತ್ತರ ಕೇರಳದ ನೀಲಂಬೂರ್ ಕಣಿವೆಯಲ್ಲಿದ್ದ ಚೋಳನಾಯಕನ್ ಸಮುದಾಯದ ಜನರು, 1970ರವರೆಗೂ ದಟ್ಟ ಕಾಡಿನ ‘ಅಲಕ್ಕಳ್’ (ಗುಹೆಗಳು)ಗಳಲ್ಲಿ ವಾಸವಿದ್ದರು. ಸಣ್ಣ ಪ್ರಾಣಿಗಳ ಬೇಟೆ, ಜೇನು ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹವೇ ಅವರ ಮುಖ್ಯ ಜೀವನೋಪಾಯವಾಗಿತ್ತು.

ನಂತರದ ದಿನಗಳಲ್ಲಿ ಕಾಡಂಚಿನ ನೆಲೆಗಳಾದ ಅಲಕ್ಕಳ್ ಮತ್ತು ಪಂಚಕ್ಕೊಲ್ಲಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಸರ್ಕಾರಿ ಸ್ವಾಮ್ಯದ ರಬ್ಬರ್ ನೆಡುತೋಪುಗಳಲ್ಲಿ ರಬ್ಬರ್ ಸಂಗ್ರಹಕಾರರಾಗಿ (ಟೇಪರ್ಸ್) ಬಹುತೇಕರು ಕೆಲಸ ಆರಂಭಿಸಿದರು. ಅಂಕಿಅಂಶಗಳ ಪ್ರಕಾರ ನೀಲಂಬೂರ್ ಪ್ರದೇಶದ ಬುಡಕಟ್ಟು ಹಾಡಿಗಳ 100 ಚೋಳನಾಯ್ಕರ್ ಕುಟುಂಬಗಳಲ್ಲಿ 400 ಮಂದಿ ಇದ್ದಾರೆ. ಈ ಪೈಕಿ ಸುಮಾರು 200 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.

Follow Us
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ