ಸುಪ್ರೀಂಕೋರ್ಟ್​​ನ ಹಿರಿಯ ನ್ಯಾಯಮೂರ್ತಿ ಎಂಆರ್ ಶಾ ನಿವೃತ್ತಿ; ರಾಜ್ ಕಪೂರ್ ಹಾಡು ಗುನುಗಿ ಭಾವುಕ

ನ್ಯಾಯಮೂರ್ತಿ ಶಾ ಅವರಿಗೆ ಬೀಳ್ಕೊಡಲು ಸ್ಥಾಪಿಸಲಾದ ಔಪಚಾರಿಕ ಪೀಠದ ನೇತೃತ್ವ ವಹಿಸಿದ ಸಿಜೆಐ ಚಂದ್ರಚೂಡ್ ನಿವೃತ್ತ ನ್ಯಾಯಾಧೀಶರೊಂದಿಗಿನ ತಮ್ಮ ಒಡನಾಟವನ್ನು ಪ್ರೀತಿಯಿಂದ ನೆನಪಿಸಿಕೊಂಡರು.

ಸುಪ್ರೀಂಕೋರ್ಟ್​​ನ ಹಿರಿಯ ನ್ಯಾಯಮೂರ್ತಿ ಎಂಆರ್ ಶಾ ನಿವೃತ್ತಿ; ರಾಜ್ ಕಪೂರ್ ಹಾಡು ಗುನುಗಿ ಭಾವುಕ
ನ್ಯಾಯಮೂರ್ತಿ ಎಂ.ಆರ್ ಶಾ
ರಶ್ಮಿ ಕಲ್ಲಕಟ್ಟ

Updated on: May 15, 2023 | 6:57 PM

ಸುಪ್ರೀಂಕೋರ್ಟ್ ನ ನಾಲ್ಕನೇ ಹಿರಿಯ ನ್ಯಾಯಮೂರ್ತಿ ಎಂಆರ್ ಶಾ (Justice MR Shah) ಅವರು ಸೋಮವಾರ ತಮ್ಮ ಕಚೇರಿಯ ಕೊನೆಯ ದಿನದಂದು ನ್ಯಾಯಾಲಯದಲ್ಲಿ ಭಾವುಕರಾಗಿದ್ದು, ನಾನು ನಿವೃತ್ತಿಯಾಗುವ ವ್ಯಕ್ತಿಯಲ್ಲ .ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತೇನೆ ಎಂದು ಹೇಳಿದರು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Chief Justice DY Chandrachud) ಅವರ ನೇತೃತ್ವದ ಔಪಚಾರಿಕ ಪೀಠದಲ್ಲಿ ಕುಳಿತು ಮಾತನಾಡಿದ ನ್ಯಾಯಮೂರ್ತಿ ಶಾ ತಮ್ಮ ಭಾಷಣದ ಕೊನೆಯಲ್ಲಿ ಭಾವುಕರಾಗಿ ರಾಜ್ ಕಪೂರ್ ಅವರ ಜೀನಾ ಯಹಾ ಮರ್​​ನಾ ಯಹಾ ಹಾಡಿನ ಸಾಲನ್ನು ಹೇಳಿದರು.ನಾನು ನಿವೃತ್ತಿಯಾಗುವ ವ್ಯಕ್ತಿಯಲ್ಲ ಮತ್ತು ನನ್ನ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದೇನೆ. ಹೊಸ ಇನ್ನಿಂಗ್ಸ್ ಆಡಲು ನನಗೆ ಶಕ್ತಿ ಮತ್ತು ಧೈರ್ಯ ಮತ್ತು ಉತ್ತಮ ಆರೋಗ್ಯವನ್ನು ನೀಡುವಂತೆ ನಾನು ಸರ್ವಶಕ್ತ ದೇವರನ್ನು ಪ್ರಾರ್ಥಿಸುತ್ತೇನೆ ಎಂದು ನ್ಯಾಯಮೂರ್ತಿ ಶಾ ಹೇಳಿದ್ದಾರೆ.

‘ಕಲ್ ಖೇಲ್ ಮೇ ಹಮ್ ಹೋ ನಾ ಹೋ, ಗರ್ದಿಶ್ ಮೇ ತಾರೆ ರಹೇಂಗೆ ಸದಾ’ ಹಾಡನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿದಾಗ ಭಾವುಕರಾಗಿ ಗಂಟಲು ಕಟ್ಟಿಕೊಂಡಿತು.

ನವೆಂಬರ್ 2, 2018 ರಂದು ಸುಪ್ರೀಂಕೋರ್ಟ್‌ಗೆ ನೇಮಕಗೊಂಡ ನ್ಯಾಯಮೂರ್ತಿ ಶಾ ಅವರ ನಿವೃತ್ತಿಯೊಂದಿಗೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಾಧೀಶರ ಸಂಖ್ಯೆ ಈಗ 32 ಕ್ಕೆ ಇಳಿಯಲಿದೆ. ಒಂದು ದಿನದ ಹಿಂದೆ, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನಿವೃತ್ತರಾಗಿದ್ದರು. ಸುಪ್ರೀಂಕೋರ್ಟ್ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದೆ.

ನ್ಯಾಯಮೂರ್ತಿ ಶಾ ಅವರಿಗೆ ಬೀಳ್ಕೊಡಲು ಸ್ಥಾಪಿಸಲಾದ ಔಪಚಾರಿಕ ಪೀಠದ ನೇತೃತ್ವ ವಹಿಸಿದ ಸಿಜೆಐ ಚಂದ್ರಚೂಡ್ ನಿವೃತ್ತ ನ್ಯಾಯಾಧೀಶರೊಂದಿಗಿನ ತಮ್ಮ ಒಡನಾಟವನ್ನು ಪ್ರೀತಿಯಿಂದ ನೆನಪಿಸಿಕೊಂಡರು.

ನಾನು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದಾಗ ನ್ಯಾಯಮೂರ್ತಿ ಶಾ ಅವರೊಂದಿಗಿನ ನನ್ನ ಒಡನಾಟವು ಬಹಳ ಹಿಂದಿನದು.ಅವರು ಸುಪ್ರೀಂಕೋರ್ಟ್‌ಗೆ ಬಂದಾಗ ನಾವು ನಮ್ಮ ಸ್ನೇಹವನ್ನು ನವೀಕರಿಸಿದ್ದೇವೆ. ಅತ್ಯಂತ ಕಷ್ಟದ ಸಮಯದಲ್ಲಿ, ಅಂದರೆ ಕೋವಿಡ್ ಸಮಯದಲ್ಲಿ ನಾವು ಒಟ್ಟಿಗೆ ವಿಚಾರಣೆ ನಡೆಸಿದ್ದೇವೆ. ನ್ಯಾಯಮೂರ್ತಿ ಎಂ ಆರ್ ಶಾಅವರೊಂದಿಗೆ ಕುಳಿತು ಪೀಠದಲ್ಲಿ ಎಲ್ಲಾ ರೀತಿಯ ಪ್ರಕರಣಗಳನ್ನು ನಿಭಾಯಿಸುವುದು ನಿಜವಾದ ಸಂತೋಷವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ‘ಜನಶಕ್ತಿ’ ಕಲಾಕೃತಿ ಪ್ರದರ್ಶನ: ಪ್ರಧಾನಿ ಮೋದಿ ಭೇಟಿಯಾದ ಕನ್ನಡದ ಕಲಾವಿದ ಈರಣ್ಣ ಯಾರು ಗೊತ್ತಾ?

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲು ಸಹಾಯ ಮಾಡಿದ್ದಕ್ಕಾಗಿ ಬಾರ್‌ನ ಸದಸ್ಯರು ಮತ್ತು ಸುಪ್ರೀಂಕೋರ್ಟ್ ಅಧಿಕಾರಿಗಳು ಮತ್ತು ಅವರ ಸಹಾಯಕ ಸಿಬ್ಬಂದಿಗೆ ನ್ಯಾಯಮೂರ್ತಿ ಶಾ ಧನ್ಯವಾದ ಅರ್ಪಿಸಿದರು. ನನ್ನ ಅಧಿಕಾರಾವಧಿಯಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಅದು ಉದ್ದೇಶಪೂರ್ವಕವಲ್ಲ. ನಾನು ಯಾವಾಗಲೂ ನನ್ನ ಕೆಲಸವನ್ನು ಪೂಜೆ ಎಂದು ಪರಿಗಣಿಸಿದ್ದೇನೆ … ನೀವು ತೋರಿದ ಪ್ರೀತಿಗೆ ಋಣಿ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಬಾರ್ ಮತ್ತು ರಿಜಿಸ್ಟ್ರಿ ಸದಸ್ಯರು, ನನ್ನ ಸಹಾಯಕ ಸಿಬ್ಬಂದಿ ಮತ್ತು ನಿವಾಸ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Mon, 15 May 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us