AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊರೊನಾ ಲಸಿಕೆಯ 2ಡೋಸ್​ ತೆಗೆದುಕೊಂಡಿದ್ದೇನೆ..ಖಂಡಿತ ಬದುಕುತ್ತೇನೆ..’-ಖ್ಯಾತ ಸರ್ಜನ್ ಆಡಿದ್ದ ಕೊನೇ ಮಾತುಗಳು​​

ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಿದ್ದು ಕೊರೊನಾ ವಾರಿಯರ್ಸ್ ಎನಿಸಿಕೊಂಡ ಆರೋಗ್ಯ ಸಿಬ್ಬಂದಿಗೆ. ಹಾಗೇ ಡಾ. ರಾವತ್​ ಕೂಡ ಮಾರ್ಚ್​ ಪ್ರಾರಂಭದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್​ ಕೂಡ ಪಡೆದಿದ್ದರು.

‘ಕೊರೊನಾ ಲಸಿಕೆಯ 2ಡೋಸ್​ ತೆಗೆದುಕೊಂಡಿದ್ದೇನೆ..ಖಂಡಿತ ಬದುಕುತ್ತೇನೆ..’-ಖ್ಯಾತ ಸರ್ಜನ್ ಆಡಿದ್ದ ಕೊನೇ ಮಾತುಗಳು​​
ಅನಿಲ್ ರಾವತ್​
Lakshmi Hegde
|

Updated on:May 09, 2021 | 10:03 AM

Share

ನಾನೂ ಎರಡೂ ಡೋಸ್ ಲಸಿಕೆ ಪಡೆದಿದ್ದೇನೆ..ಖಂಡಿತ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ..ದೆಹಲಿಯ ಸರೋಜ್​ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಬೆಡ್​​ನಲ್ಲಿ ಮಲಗುವುದಕ್ಕೂ ಮೊದಲು ಖ್ಯಾತ ಸರ್ಜನ್​ ಡಾ. ಅನಿಲ್ ಕುಮಾರ್​ ರಾವತ್ ತಮ್ಮ ಸಹೋದ್ಯೋಗಿಗಳಿಗೆ​ ಹೇಳಿದ್ದ ಮಾತುಗಳಿವು. ಇವರಿಗೆ 58 ವರ್ಷ. ಎರಡೂ ಡೋಸ್​ ಲಸಿಕೆ ಪಡೆದರೂ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಅವರಿಗೇನೋ ನಂಬಿಕೆ, ನಾನು ಲಸಿಕೆ ಪಡೆದಿದ್ದೇನೆ.. ಜೀವ ಹೋಗುವುದಿಲ್ಲವೆಂದು. ಆದರೆ ಆ ನಂಬಿಕೆ ಸುಳ್ಳಾಯಿತು. ಶನಿವಾರ ಮುಂಜಾನೆ ಕೊವಿಡ್​ ಸೋಂಕಿನಿಂದ ಮೃತರಾಗಿದ್ದಾರೆ.

ಅನಿಲ್​ ಕುಮಾರ್​ ರಾವತ್ 1996ರಿಂದ ಅಂದರೆ ಕಳೆದ 25ವರ್ಷಗಳಿಂದಲೂ ದೆಹಲಿಯ ಸರೋಜ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ಪ್ರಾರಂಭದ ದಿನಗಳಿಂದಲೂ ಇದ್ದ ಅನಿಲ್ ಕುಮಾರ್ ರಾವತ್ ತಮ್ಮ ಕೊನೆಯುಸಿರನ್ನೂ ಅಲ್ಲಿಯೇ ಚೆಲ್ಲಿದ್ದಾರೆ. ಇವರೊಬ್ಬ ರಿಯಲ್ ಜಂಟ್ಲ್​ಮೆನ್​, ಸದಾ ಖುಷಿಯಾಗುತ್ತಿದ್ದ ತಜ್ಞ ವೈದ್ಯ ಎನ್ನುತ್ತಾರೆ ಅವರ ಸಹೋದ್ಯೋಗಿಗಳು.

ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಿದ್ದು ಕೊರೊನಾ ವಾರಿಯರ್ಸ್ ಎನಿಸಿಕೊಂಡ ಆರೋಗ್ಯ ಸಿಬ್ಬಂದಿಗೆ. ಹಾಗೇ ಡಾ. ರಾವತ್​ ಕೂಡ ಮಾರ್ಚ್​ ಪ್ರಾರಂಭದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್​ ಕೂಡ ಪಡೆದಿದ್ದರು. ಇವರು ಲಸಿಕೆಯ ಎರಡೂ ಡೋಸ್ ಪಡೆದಿದ್ದನ್ನು ಸರೋಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪಿ.ಕೆ.ಭಾರದ್ವಾಜ್ ಖಚಿತಪಡಿಸಿದ್ದಾರೆ.

ಅನಿಲ್ ಕುಮಾರ್​ ರಾವತ್​ ನನ್ನ ಹಿರಿಯ ಮಗನಂತೆ ಇದ್ದರು. ದೆಹಲಿಯ ಮೌಲಾನಾ ಅಜಾದ್​ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಮಾಡಿದ್ದರು. 1994ರಲ್ಲಿ ಆರ್​​ಬಿ ಜೈನ್ ಆಸ್ಪತ್ರೆಯಲ್ಲಿ ವೃತ್ತಿ ಶುರು ಮಾಡಿದ್ದರು. ಇದೀಗ ನನ್ನ ಕಣ್ಣೆದುರೇ ಜೀವ ಬಿಟ್ಟಿದ್ದಾರೆ. ಕೊನೆ ಉಸಿರು ಇರುವವರೆಗೂ ನನ್ನ ಜೊತೆಯೇ ಇದ್ದರು ಎಂದು ಡಾ. ಪಿ.ಕೆ.ಭಾರದ್ವಾಜ್ ಭಾವುಕರಾದರು.

ಅನಿಲ್​ ರಾವತ್ ಅವರು 10-12ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೊದಲು ಮನೆಯಲ್ಲೇ ಐಸೋಲೇಶನ್​ನಲ್ಲಿ ಇದ್ದ ಅವರಲ್ಲಿ ಕ್ರಮೇಣ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತ ಬಂದಿತ್ತು. ಹಾಗಾಗಿ ಅವರು ಕೆಲಸ ಮಾಡುತ್ತಿದ್ದ ಸರೋಜ್​ ಆಸ್ಪತ್ರೆಗೇ ದಾಖಲು ಮಾಡಲಾಗಿತ್ತು. ಈಗೆರಡು ದಿನಗಳ ಹಿಂದೆ ವೆಂಟಿಲೇಟರ್​ ಅಳವಡಿಸಲಾಗಿತ್ತು. ಗಂಭೀರಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆ ವೈದ್ಯರ ತಂಡ ಇನ್ನಿಲ್ಲದಂತೆ ಶ್ರಮಿಸಿದೆ. ಶ್ವಾಸಕೋಶದ ಕಸಿ ಮಾಡಲು ಸಿದ್ಧತೆ ನಡೆಸಿದ್ದೆವು ಎಂದು ಭಾರದ್ವಾಜ್​ ಹೇಳಿದ್ದಾರೆ. ಇದು ನಮಗೆ ಅತಿದೊಡ್ಡ ನಷ್ಟ. ನೋವು ಕೊಡುವ ಸಂಗತಿ ಎಂದಿದ್ದಾರೆ.

ರಾವತ್​ ಅವರ ಪತ್ನಿಯೂ ವೈದ್ಯೆಯೇ ಆಗಿದ್ದಾರೆ. ಇವರೂ ಸಹ ಸರೋಜ್​ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು. ಇವರಿಗೆ ಒಬ್ಬ ಪುತ್ರಿಯಿದ್ದಾಳೆ. ರಾವತ್ ನಿಧನಕ್ಕೆ ಇಡೀ ಆಸ್ಪತ್ರೆಯ ವೈದ್ಯರ ತಂಡ ಕಂಬನಿ ಮಿಡಿದಿದೆ.

ಇದನ್ನೂ ಓದಿ: Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ

ನಾಳೆ ಬೆಳಗ್ಗೆಯಿಂದಲೇ ಇಡೀ ರಾಜ್ಯ ಲಾಕ್ಡೌನ್.. 10 ಗಂಟೆ ಬಳಿಕ ಹೊರಗೆ ಕಾಣಿಸಿಕೊಂಡ್ರೆ ಬೀಳುತ್ತೆ ಕೇಸ್, ಫೈನ್

Published On - 9:58 am, Sun, 9 May 21

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ