AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ

ದೇಶಾದ್ಯಂತ ಸುಮಾರು 3691 ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು, ಪುರಾತತ್ವ ಸ್ಥಳಗಳು ಇವೆ. ಕಳೆದವರ್ಷ ಮಾರ್ಚ್​ 17ರಿಂದ ಇವೆಲ್ಲವನ್ನೂ ಬಂದ್​ ಮಾಡಿ, ಜುಲೈ 6ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ
ತಾಜ್​ಮಹಲ್​
TV9 Web
| Edited By: |

Updated on: Jun 15, 2021 | 9:53 AM

Share

ಕೊವಿಡ್​ 19 ಎರಡನೇ ಅಲೆ ಉಲ್ಬಣಗೊಂಡ ಬೆನ್ನಲ್ಲೇ ಬಾಗಿಲು ಮುಚ್ಚಲ್ಪಟ್ಟಿದ್ದ ಕೇಂದ್ರ ಸಂರಕ್ಷಿತ ಸ್ಮಾರಕಗಳು ಜೂ.16(ನಾಳೆ)ರಿಂದ ಮತ್ತೆ ತೆರೆಯಲಿವೆ ಎಂದು ಭಾರತೀಯ ಪುರಾತತ್ವ ಇಲಾಖೆ (ASI) ತಿಳಿಸಿದೆ. ತಾಜ್​ ಮಹಲ್​ ಸೇರಿ ಎಲ್ಲ ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು ಓಪನ್​ ಆಗಲಿದ್ದು, ಪ್ರವಾಸಿಗರು ಆನ್​​ಲೈನ್​ ಮೂಲಕ ಪ್ರವೇಶ ಟಿಕೆಟ್​ ಬುಕ್​ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್​​ನಿಂದ ಕೊವಿಡ್​ 19 ಸೋಂಕು ಅತ್ಯಂತ ಹೆಚ್ಚಾಗಿ ಬಾಧಿಸಲು ಶುರವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಂಪುಕೋಟೆ, ತಾಜ್​ಮಹಲ್​, ಅಜಂತಾ ಸೇರಿ ಎಲ್ಲ ಕೇಂದ್ರಸಂರಕ್ಷಿತ ತಾಣಗಳನ್ನೂ ಬಂದ್​ ಮಾಡುವುದಾಗಿ ಏಪ್ರಿಲ್​ 15ರಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಲ್ಹಾದ್ ಸಿಂಗ್​ ಏಪ್ರಿಲ್​ 15ರಂದು ಹೇಳಿದ್ದರು. ಇದೀಗ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕ್ರಮೇಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಂಡು ಮತ್ತೆ ತೆರೆಯುವುದಾಗಿ ಸಚಿವಾಲಯ ತಿಳಿಸಿದೆ. ಕಳೆದವರ್ಷವೂ ಸಹ ದೇಶಾದ್ಯಂತ ಲಾಕ್​ಡೌನ್​ ಇದ್ದ ಕಾರಣ 100 ದಿನಗಳ ಕಾಲದ ತಾಜ್​ಮಹಲ್​, ಕೆಂಪುಕೋಟೆ ಸೇರಿ ಎಲ್ಲ ತಾಣಗಳಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.

ದೇಶಾದ್ಯಂತ ಸುಮಾರು 3691 ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು, ಪುರಾತತ್ವ ಸ್ಥಳಗಳು ಇವೆ. ಕಳೆದವರ್ಷ ಮಾರ್ಚ್​ 17ರಿಂದ ಇವೆಲ್ಲವನ್ನೂ ಬಂದ್​ ಮಾಡಿ, ಜುಲೈ 6ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ತಾಜ್​ಮಹಲ್​ ಕಂಟೇನ್​​ಮೆಂಟ್​ ವಲಯವಾಗಿ, ಸೆಪ್ಟೆಂಬರ್​ನಲ್ಲಿ ತೆರೆಯಲ್ಪಟ್ಟಿತ್ತು. ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಜ್​ಮಹಲ್​ಗೆ ವಾರ್ಷಿಕವಾಗಿ 70-80 ಲಕ್ಷ ಜನರು ಭೇಟಿಕೊಡುತ್ತಾರೆ. ಆದಾಯದ ಪ್ರಮುಖ ತಾಣವಾಗಿದೆ.

ಇದನ್ನೂ ಓದಿ: Karnataka Weather: ಕರಾವಳಿ ಜಿಲ್ಲೆಗಳು -ಮಲೆನಾಡು ಘಟ್ಟಗಳಲ್ಲಿ ಇನ್ನೂ 3 ದಿನ ಮುಂಗಾರು ಅಬ್ಬರ, ಆರೆಂಜ್ ಅಲರ್ಟ್​​

Taj Mahal and other centrally protected monuments will reopen on June 16

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ