AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಹೀಗೆ ಮಾತನಾಡುವುದು ಸರಿಯಲ್ಲ: ಬಿಜೆಪಿ ವಿರುದ್ಧ ಸ್ಟಾಲಿನ್ ಮಾಡಿದ ಟೀಕೆಗಳಿಗೆ ಅಣ್ಣಾಮಲೈ ತಿರುಗೇಟು

ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಪರ ಎಂಕೆ ಸ್ಟಾಲಿನ್ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅಣ್ಣಾಮಲೈ ಕಳೆದ ತಿಂಗಳು ಬಾಲಾಜಿ ಅವರ ಸಹೋದರ ಮತ್ತು ಪರಿಚಯಸ್ಥರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲು ಬಂದಾಗ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ನೀವು ಹೀಗೆ ಮಾತನಾಡುವುದು ಸರಿಯಲ್ಲ: ಬಿಜೆಪಿ ವಿರುದ್ಧ ಸ್ಟಾಲಿನ್ ಮಾಡಿದ ಟೀಕೆಗಳಿಗೆ ಅಣ್ಣಾಮಲೈ ತಿರುಗೇಟು
ಕೆ ಅಣ್ಣಾಮಲೈ
ರಶ್ಮಿ ಕಲ್ಲಕಟ್ಟ
|

Updated on:Jun 16, 2023 | 6:34 PM

Share

ಚೆನ್ನೈ: ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿರುವ ತಮಿಳುನಾಡು (Tamil Nadu) ಮುಖ್ಯಮಂತ್ರಿ  ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ (K Annamalai) ವಾಗ್ದಾಳಿ ನಡೆಸಿದ್ದು, ಎಂಕೆ ಸ್ಟಾಲಿನ್ (M K Stalin)  ಸಾಮಾನ್ಯ ವೇದಿಕೆಯ ಭಾಷಣಕಾರರಂತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಮಿಳುನಾಡು ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (CBI) ನೀಡಿದ ಸಾಮಾನ್ಯ ಸಮ್ಮತಿಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿದ್ದು ಅನೇಕ ವಿಷಯಗಳ ಬಗ್ಗೆ ಏಜೆನ್ಸಿ ತನಿಖೆಗೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸ್ಟಾಲಿನ್ ಮಾಡಿದ್ದ ಹಲವಾರು ಬೇಡಿಕೆಗಳನ್ನು ನೆನಪಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸಂಪುಟ ಸಹೋದ್ಯೋಗಿ ವಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವ ಕುರಿತು ಬಿಜೆಪಿ ವಿರುದ್ಧ ಎಂಕೆ ಸ್ಟಾಲಿನ್ ಮಾಡಿದ ವಾಗ್ದಾಳಿಗೆ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಕ್ಷ ಮತ್ತು ಅದರ ಕಾರ್ಯಕರ್ತರನ್ನು ಪ್ರಚೋದಿಸುವುದು ತನ್ನದೇ ಆದ ಪರಿಣಾಮಗಳನ್ನು ಬೀರಬಹುದು. ಇದು ನಾವು ಬಿಜೆಪಿಗೆ ನೀಡುವ ಬೆದರಿಕೆಯಲ್ಲ ಎಚ್ಚರಿಕೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಕೇಳುಗರ ಗಮನ ಸೆಳೆಯುವುದಕ್ಕಾಗಿ ಸಾಮಾನ್ಯ ಮಾತುಗಾರನೊಬ್ಬ ವೇದಿಕೆಯಲ್ಲಿ ಎಚ್ಚರಿಕೆ ನೀಡುವಂತೆ ಸ್ಟಾಲಿನ್ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಗೌರವಾನ್ವಿತ ಸ್ಟಾಲಿನ್ ಅವರೇ, ನೀವು ಈ ರೀತಿ ಮಾತನಾಡುವುದು ನೀವಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಹೊಂದುತ್ತದೆಯೇ ಎಂದು ಯೋಚಿಸಿ ಎಂದಿದ್ದಾರೆ.

1949 ರಲ್ಲಿ ಸ್ಥಾಪನೆಯಾದ ಡಿಎಂಕೆ, ಹಲವು ವರ್ಷಗಳಿಂದ ಆಡಳಿತ ಮತ್ತು ವಿರೋಧ ಪಕ್ಷದಲ್ಲಿದೆ. ಎಲ್ಲಾ ಕಾನೂನುಗಳು ಮತ್ತು ತನಿಖಾ ಕಾರ್ಯವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಮತ್ತು 30 ವರ್ಷಗಳ ಶಾಸಕಾಂಗ ಅನುಭವ ಹೊಂದಿರುವ ನೀವು ಐದು ಪಕ್ಷಗಳನ್ನು ಬದಲಾಯಿಸಿದ ಯಾರನ್ನಾದರೂ (ಬಾಲಾಜಿ) ರಕ್ಷಿಸಲು ಎರಡನೇ ದರ್ಜೆಯ ಭಾಷಣಕಾರನಂತೆ ಮಾತನಾಡುವುದು ನ್ಯಾಯವೇ ಎಂದು ಅಣ್ಣಾಮಲೈ ಕೇಳಿದ್ದಾರೆ.

ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಪರ ಎಂಕೆ ಸ್ಟಾಲಿನ್ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅಣ್ಣಾಮಲೈ ಕಳೆದ ತಿಂಗಳು ಬಾಲಾಜಿ ಅವರ ಸಹೋದರ ಮತ್ತು ಪರಿಚಯಸ್ಥರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲು ಬಂದಾಗ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ಬಾಲಾಜಿ ವಿರುದ್ಧ ಇಡಿ ಹುಡುಕಾಟಗಳು 2016 ರಲ್ಲಿ ಆಗ ಡಿಎಂಕೆಯಲ್ಲಿಲ್ಲದ ಬಾಲಾಜಿ ವಿರುದ್ಧ ಕ್ರಮ ಕೋರಿ ಸ್ಟಾಲಿನ್ ಎತ್ತಿದ ಆರೋಪಗಳಿಗೆ ಸಂಬಂಧಿಸಿವೆ. ಏಳು ವರ್ಷಗಳಲ್ಲಿ ಬದಲಾಗಿದ್ದು ಏನು ಅಂದರೆ ನಿಮ್ಮ ಮನವಿಯ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ, ಅದನ್ನು ನಿಮ್ಮ ಪಕ್ಷದ ಪರವಾಗಿ ಸ್ವಾಗತಿಸಬೇಕಿತ್ತಲ್ಲವೇ ಎಂದು ಅಣ್ಣಾಮಲೈ ಹೇಳಿದ್ದಾರೆ.

ಎಐಎಡಿಎಂಕೆ ಆಡಳಿತದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸ್ಟಾಲಿನ್, ಅಂದಿನ ಸಿಎಂ ಜೆ ಜಯಲಲಿತಾ ಸಾವು, ನಗರದಲ್ಲಿ ಕಟ್ಟಡ ಕುಸಿತ, ಅಂದಿನ ಸಚಿವರ ವಿರುದ್ಧದ ತನಿಖೆ, ಗುಟ್ಕಾ ಹಗರಣ, ಸ್ಟೆರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ತೂತ್ತುಕುಡಿ ಪೊಲೀಸರು ಗೋಲಿಬಾರ್ ಸೇರಿದಂತೆ ವಿಷಯಗಳ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು.

ಅರವಕುರಿಚಿ ಮತ್ತು ತಂಜಾವೂರಿನಲ್ಲಿ ಹಣ ಹಂಚಿಕೆಗೆ ಸಂಬಂಧಿಸಿದಂತೆ ನೀವು 2016 ರ ಮೇನಲ್ಲಿ ಚುನಾವಣಾ ಸಮಯದಲ್ಲಿ ಸಿಬಿಐ ತನಿಖೆಗೆ ಕೋರಿದ್ದೀರಿ. ಆಗ ಅರವಕುರಿಚಿಯಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ನೀವು ಆರೋಪಗಳನ್ನು ಮಾಡಿದ್ದೀರಿ ಎಂದು ಅಣ್ಣಾಮಲೈ ನೆನಪಿಸಿದ್ದಾರೆ.

ಈಗ ನೀವು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವಂತೆ ಹೇಳುತ್ತಿರುವುದು ಈ ಆಡಳಿತದ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ. ತಮ್ಮ ವಿಡಿಯೊದಲ್ಲಿ ಸ್ಟಾಲಿನ್ ಬಳಸಿದ ಪದಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅಣ್ಣಾಮಲೈ, ನೀವು ಯಾರನ್ನು ಗುರಿಯಾಗಿಸಿಕೊಂಡಿದ್ದೀರಿ? ನಿಮ್ಮ ಪಕ್ಷದ ಕಾರ್ಯಕರ್ತರನ್ನು ನೀವು ಹೇಗೆ ಮುನ್ನಡೆಸುತ್ತೀರಿ? ಎಂದು ಕೇಳಿದ್ದಾರೆ. ಇಂತಹ ಪದಗಳನ್ನು ಬಳಸುವುದು ಹಲವು ವಿಶೇಷತೆಗಳಿಗೆ ಹೆಸರಾದ ನಮ್ಮ ರಾಜ್ಯಕ್ಕೆ ತಕ್ಕುದಲ್ಲ.

ನೀವು 8.5 ಕೋಟಿ ತಮಿಳು ಜನರಿಗೆ ಮುಖ್ಯಮಂತ್ರಿಯಾಗಿದ್ದೀರಾ ಅಥವಾ ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತಲಿನ ಸಣ್ಣ ವಲಯಕ್ಕೆ ಮುಖ್ಯಮಂತ್ರಿಯಾಗಿದ್ದೀರಾ ಎಂಬುದನ್ನು ನೀವು ನಿರ್ಧರಿಸಬೇಕು. ಇತರರು ಮಾಡಿದ ತಪ್ಪುಗಳಿಗಾಗಿ ನೀವು ಸಿಬಿಐ ತನಿಖೆಗೆ ಕೋರಿದಾಗ, ನಿಮ್ಮ ತಪ್ಪುಗಳಿಗೆ ನಾವು ಅದೇ ರೀತಿ ಮಾಡುವಾಗ ನೀವು ಏನು ತಪ್ಪು ಮಾಡಿದ್ದೀರಿ ಎಂಬುದು ಗೊತ್ತು. ನೀವು ಯಾಕೆ ಭಯಭೀತರಾಗಿ ಈ ರೀತಿ ಆರೋಪ ಮಾಡುತ್ತಿದ್ದೀರಿ ಎಂದು ಅಣ್ಣಾಮಲೈ, ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Fri, 16 June 23

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ