AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?
ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jul 28, 2023 | 2:53 PM

Share

ತೆಲಂಗಾಣ, ಜುಲೈ 28: ಮೊಬೈಲ್ ಎಂಬ ಮಾಯಾ ಲೋಕ ಕೈಗೆ ಬಂದಿದ್ದೇ ತಡ ಬರುತಾ ಬರುತಾ ಇಡೀ ಜಗತ್ತನ್ನು ಒಂದು ಸ್ಥಳೀಯ ಹಳ್ಳಿಯನ್ನಾಗಿ ಮಾರ್ಪಟ್ಟಿಸಿಬಿಟ್ಟಿದೆ. ಟಿವಿ, ಚಲನಚಿತ್ರ, OTT, ಸುದ್ದಿ, ನಿಯತಕಾಲಿಕೆಗಳು, ಆಟಗಳು ಆನ್‌ಲೈನ್ ಶಾಪಿಂಗ್ ಈ ಮಾಯಾಲೋಕದಲ್ಲಿ ರಾರಾಜಿಸುತ್ತಿದೆ. ಇದರಿಂದ ಪುಸ್ತಕ ಓದು ಸಂಪೂರ್ಣ ಕುಸಿದಿದೆ. ಮೊಬೈಲ್ ನಲ್ಲಿ ಎಲ್ಲವನ್ನೂ ಪಡೆಯುವ ಅವಕಾಶವನ್ನು ಸಾಧಿಸುವುದು ಒಂದೆಡೆ ಮನುಷ್ಯ ಸಾಧಿಸಿರುವ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.. ಇನ್ನೊಂದೆಡೆ ದೃಷ್ಟಿ, ಜ್ಞಾಪಕಶಕ್ತಿ, ವಿಕಿರಣಗಳಿಂದ ಉಂಟಾಗುವ ದೈಹಿಕ ಸಮಸ್ಯೆಗಳು, ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಬೆಚ್ಚಿಬೀಳುವಂತಾಗಿದೆ. ಇದೂ ಕೂಡ ಮೊಬೈಲ್‌ ಎಂಬ ಪುಟ್ಟ ಮಾಯಾಲೋಕದ ಕೊಡುಗೆಯಾಗಿದೆ. ಆದರೆ ಪುಸ್ತಕದ ಓದುವ ಈಗ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಗಿದೆ. ಇದರ ಬಗ್ಗೆ ತೀವ್ರವಾಗಿ ಆಲೋಚಿಸಿದ ತೆಲಂಗಾಣ ರಾಜ್ಯ ಸರ್ಕಾರ ಮತ್ತೊಮ್ಮೆ ಗ್ರಂಥಾಲಯಗಳನ್ನು ಮುನ್ನೆಲೆಗೆ ತಂದಿದೆ. ಪುಸ್ತಕ ಓದುವುದರ ಜೊತೆಗೆ ಸಂಪೂರ್ಣ ವೈ-ಫೈ ಸಂಪರ್ಕ ಹೊಂದಿರುವ ಡಿಜಿಟಲ್ ಲೈಬ್ರರಿಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಆದರೆ, ನಾವು ಇಲ್ಲಿಯವರೆಗೆ ನೋಡಿದ ಬಹುತೇಕ ಗ್ರಂಥಾಲಯಗಳು ಪುರುಷರಿಗೆ ಮುಕ್ತವಾಗಿ ಹೋಗಿ ಅಧ್ಯಯನ ಮಾಡಲು ಮಾತ್ರವೆ ಇದ್ದಿತ್ತು. ಆದರೆ, ಅದಕ್ಕಿಂತ ಭಿನ್ನವಾಗಿ ಈಗ ಮಹಿಳೆಯರಿಗೂ ವಿಶೇಷವಾಗಿದೆ. ಅದರ ಭಾಗವಾಗಿ ಕರೀಂನಗರ ಜಿಲ್ಲೆಯ ರಾಮನಗರ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಮಹಿಳಾ ಗ್ರಂಥಾಲಯ ಈಗ ಪ್ರಗತಿಪರವಾಗಿ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಸುತ್ತಮುತ್ತಲಿನ ಮಹಿಳೆಯರು ಈ ಗ್ರಂಥಾಲಯಕ್ಕೆ ಬರಲು ಸಾಲುಗಟ್ಟಿ ನಿಂತಿದ್ದಾರೆ.

ಮಹಿಳೆಯರಿಗೆ ಬೇಕಾದ ಎಲ್ಲ ಸೌಲಭ್ಯಗಳ ಜತೆಗೆ.. ಸಾವಿತ್ರಿಭಾಯಿ ಫುಲೆ, ಸರೋಜಿನಿ ದೇವಿ, ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ಮದರ್ ತೆರೆಸಾ, ಸೂಪರ್ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿ ಅವರಿಂದ ಹಿಡಿದು ಮಹಿಳೆಯರಿಗಾಗಿಯೇ ಅನೇಕ ಸ್ಪೂರ್ತಿದಾಯಕ ಪುಸ್ತಕಗಳು ಲಭ್ಯವಿವೆ. ಅಷ್ಟೇ ಏಕೆ ಅಡುಗೆ, ಹೊಲಿಗೆ, ಹೆಣಿಗೆ, ತೋಟಗಾರಿಕೆ, ಆರೋಗ್ಯ ತತ್ವಗಳು, ಮಹಿಳೆಯರಿಗೆ ಜನಪ್ರಿಯವಾಗಿರುವ ಬ್ಯೂಟಿಷಿಯನ್ ಪುಸ್ತಕಗಳು.. ಕಾದಂಬರಿಗಳು, ಐತಿಹಾಸಿಕ ಪುಸ್ತಕಗಳನ್ನುಓದ ಬಯಸಿ, ಅನೇಕ ಮಹಿಳೆಯರು ತಮ್ಮ ಕೌಟುಂಬಿಕ ಕೆಲಸಗಳನ್ನು ಮುಗಿಸಿ ಕರೀಂನಗರದ ಗ್ರಂಥಾಲಯಕ್ಕೆ ಹೋಗುತ್ತಿದ್ದಾರೆ.. ಇದು ಪ್ರಗತಿಪರ ಬೆಳವಣಿಗೆಯಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸುವ ಸಲುವಾಗಿ ಇದು ಉತ್ತಮ ಹೆಜ್ಜೆಯಾಗಿದೆ.

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

ಇನ್ನು ಈ ಪ್ರಗತಿಪರ ನಿರ್ಧಾರದೊಂದಿಗೆ ಕರೀಂನಗರದಲ್ಲಿ ಮೊದಲ ಮಹಿಳಾ ಗ್ರಂಥಾಲಯವನ್ನು ಪ್ರಾರಂಭಿಸಿದ ತೆಲಂಗಾಣ ರಾಜ್ಯ ಸರ್ಕಾರವು ಅದನ್ನು ಪ್ರತಿ ಹಳ್ಳಿಗೂ ವಿಸ್ತರಿಸಲು ಬಯಸಿದೆ. ಗ್ರಾಮ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಆಶ್ರಯದಲ್ಲಿ ಇಂತಹ ಮಹಿಳಾಯುಕ್ತ ಗ್ರಂಥಾಲಯಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ