AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

Telangana: ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು, ಯಾವ ಊರಲ್ಲಿ?
ಮಹಿಳೆಯರಿಗೆ ಮಾತ್ರವೇ ಈ ಗ್ರಂಥಾಲಯ.. ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲು
ಸಾಧು ಶ್ರೀನಾಥ್​
|

Updated on: Jul 28, 2023 | 2:53 PM

Share

ತೆಲಂಗಾಣ, ಜುಲೈ 28: ಮೊಬೈಲ್ ಎಂಬ ಮಾಯಾ ಲೋಕ ಕೈಗೆ ಬಂದಿದ್ದೇ ತಡ ಬರುತಾ ಬರುತಾ ಇಡೀ ಜಗತ್ತನ್ನು ಒಂದು ಸ್ಥಳೀಯ ಹಳ್ಳಿಯನ್ನಾಗಿ ಮಾರ್ಪಟ್ಟಿಸಿಬಿಟ್ಟಿದೆ. ಟಿವಿ, ಚಲನಚಿತ್ರ, OTT, ಸುದ್ದಿ, ನಿಯತಕಾಲಿಕೆಗಳು, ಆಟಗಳು ಆನ್‌ಲೈನ್ ಶಾಪಿಂಗ್ ಈ ಮಾಯಾಲೋಕದಲ್ಲಿ ರಾರಾಜಿಸುತ್ತಿದೆ. ಇದರಿಂದ ಪುಸ್ತಕ ಓದು ಸಂಪೂರ್ಣ ಕುಸಿದಿದೆ. ಮೊಬೈಲ್ ನಲ್ಲಿ ಎಲ್ಲವನ್ನೂ ಪಡೆಯುವ ಅವಕಾಶವನ್ನು ಸಾಧಿಸುವುದು ಒಂದೆಡೆ ಮನುಷ್ಯ ಸಾಧಿಸಿರುವ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.. ಇನ್ನೊಂದೆಡೆ ದೃಷ್ಟಿ, ಜ್ಞಾಪಕಶಕ್ತಿ, ವಿಕಿರಣಗಳಿಂದ ಉಂಟಾಗುವ ದೈಹಿಕ ಸಮಸ್ಯೆಗಳು, ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಬೆಚ್ಚಿಬೀಳುವಂತಾಗಿದೆ. ಇದೂ ಕೂಡ ಮೊಬೈಲ್‌ ಎಂಬ ಪುಟ್ಟ ಮಾಯಾಲೋಕದ ಕೊಡುಗೆಯಾಗಿದೆ. ಆದರೆ ಪುಸ್ತಕದ ಓದುವ ಈಗ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಗಿದೆ. ಇದರ ಬಗ್ಗೆ ತೀವ್ರವಾಗಿ ಆಲೋಚಿಸಿದ ತೆಲಂಗಾಣ ರಾಜ್ಯ ಸರ್ಕಾರ ಮತ್ತೊಮ್ಮೆ ಗ್ರಂಥಾಲಯಗಳನ್ನು ಮುನ್ನೆಲೆಗೆ ತಂದಿದೆ. ಪುಸ್ತಕ ಓದುವುದರ ಜೊತೆಗೆ ಸಂಪೂರ್ಣ ವೈ-ಫೈ ಸಂಪರ್ಕ ಹೊಂದಿರುವ ಡಿಜಿಟಲ್ ಲೈಬ್ರರಿಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಆದರೆ, ನಾವು ಇಲ್ಲಿಯವರೆಗೆ ನೋಡಿದ ಬಹುತೇಕ ಗ್ರಂಥಾಲಯಗಳು ಪುರುಷರಿಗೆ ಮುಕ್ತವಾಗಿ ಹೋಗಿ ಅಧ್ಯಯನ ಮಾಡಲು ಮಾತ್ರವೆ ಇದ್ದಿತ್ತು. ಆದರೆ, ಅದಕ್ಕಿಂತ ಭಿನ್ನವಾಗಿ ಈಗ ಮಹಿಳೆಯರಿಗೂ ವಿಶೇಷವಾಗಿದೆ. ಅದರ ಭಾಗವಾಗಿ ಕರೀಂನಗರ ಜಿಲ್ಲೆಯ ರಾಮನಗರ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಮಹಿಳಾ ಗ್ರಂಥಾಲಯ ಈಗ ಪ್ರಗತಿಪರವಾಗಿ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಸುತ್ತಮುತ್ತಲಿನ ಮಹಿಳೆಯರು ಈ ಗ್ರಂಥಾಲಯಕ್ಕೆ ಬರಲು ಸಾಲುಗಟ್ಟಿ ನಿಂತಿದ್ದಾರೆ.

ಮಹಿಳೆಯರಿಗೆ ಬೇಕಾದ ಎಲ್ಲ ಸೌಲಭ್ಯಗಳ ಜತೆಗೆ.. ಸಾವಿತ್ರಿಭಾಯಿ ಫುಲೆ, ಸರೋಜಿನಿ ದೇವಿ, ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ಮದರ್ ತೆರೆಸಾ, ಸೂಪರ್ ಹ್ಯೂಮನ್ ಕಂಪ್ಯೂಟರ್ ಶಕುಂತಲಾ ದೇವಿ ಅವರಿಂದ ಹಿಡಿದು ಮಹಿಳೆಯರಿಗಾಗಿಯೇ ಅನೇಕ ಸ್ಪೂರ್ತಿದಾಯಕ ಪುಸ್ತಕಗಳು ಲಭ್ಯವಿವೆ. ಅಷ್ಟೇ ಏಕೆ ಅಡುಗೆ, ಹೊಲಿಗೆ, ಹೆಣಿಗೆ, ತೋಟಗಾರಿಕೆ, ಆರೋಗ್ಯ ತತ್ವಗಳು, ಮಹಿಳೆಯರಿಗೆ ಜನಪ್ರಿಯವಾಗಿರುವ ಬ್ಯೂಟಿಷಿಯನ್ ಪುಸ್ತಕಗಳು.. ಕಾದಂಬರಿಗಳು, ಐತಿಹಾಸಿಕ ಪುಸ್ತಕಗಳನ್ನುಓದ ಬಯಸಿ, ಅನೇಕ ಮಹಿಳೆಯರು ತಮ್ಮ ಕೌಟುಂಬಿಕ ಕೆಲಸಗಳನ್ನು ಮುಗಿಸಿ ಕರೀಂನಗರದ ಗ್ರಂಥಾಲಯಕ್ಕೆ ಹೋಗುತ್ತಿದ್ದಾರೆ.. ಇದು ಪ್ರಗತಿಪರ ಬೆಳವಣಿಗೆಯಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸುವ ಸಲುವಾಗಿ ಇದು ಉತ್ತಮ ಹೆಜ್ಜೆಯಾಗಿದೆ.

ಪ್ರಸ್ತುತ ಕರೀಂನಗರದ ಲೈಬ್ರರಿ ಮಹಿಳಾ ಸಂಘದ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಕೊಠಡಿಗಳು ಮತ್ತು ಸಂಪೂರ್ಣ ಪೀಠೋಪಕರಣಗಳೊಂದಿಗೆ ಇಲ್ಲಿ ಹೊಸ ಗ್ರಂಥಾಲಯವನ್ನು ನಿರ್ಮಿಸಲು ಸಿದ್ಧತೆ ಭರದಿಂದ ನಡೆದಿದೆ.

ಇನ್ನು ಈ ಪ್ರಗತಿಪರ ನಿರ್ಧಾರದೊಂದಿಗೆ ಕರೀಂನಗರದಲ್ಲಿ ಮೊದಲ ಮಹಿಳಾ ಗ್ರಂಥಾಲಯವನ್ನು ಪ್ರಾರಂಭಿಸಿದ ತೆಲಂಗಾಣ ರಾಜ್ಯ ಸರ್ಕಾರವು ಅದನ್ನು ಪ್ರತಿ ಹಳ್ಳಿಗೂ ವಿಸ್ತರಿಸಲು ಬಯಸಿದೆ. ಗ್ರಾಮ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಆಶ್ರಯದಲ್ಲಿ ಇಂತಹ ಮಹಿಳಾಯುಕ್ತ ಗ್ರಂಥಾಲಯಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್