AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್​ ನೋಡಲು ಹೋಗಿದ್ದ ದಂಪತಿ, ಬರುವಷ್ಟರಲ್ಲಿ ಒಂದು ಮಗು ಕಿಡ್ನ್ಯಾಪ್

ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್​ ನೋಡಲು ಹೋಗಿದ್ದ ದಂಪತಿ ಹಿಂದಿರುಗುವಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಾದಿತ್ತು. ದಂಪತಿ ಒಟ್ಟಿಗೆ ಎಲ್ಲೂ ಹೋಗದೆ ತುಂಬಾ ದಿನವಾಗಿತ್ತೆಂದು ಮೂವರು ಮಕ್ಕಳನ್ನು ಸ್ನೇಹಿತ ರಾಜೇಶ್ ಮನೆಯಲ್ಲಿ ಬಿಟ್ಟು ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಅವರು ಹಿಂದಿರುಗಿ ಬರುವಷ್ಟರಲ್ಲಿ ಒಂದು ಮಗುವಿನ ಅಪಹರಣವಾಗಿತ್ತು. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್​ ನೋಡಲು ಹೋಗಿದ್ದ ದಂಪತಿ, ಬರುವಷ್ಟರಲ್ಲಿ ಒಂದು ಮಗು ಕಿಡ್ನ್ಯಾಪ್
ಮಗು-ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Dec 11, 2025 | 8:11 AM

Share

ಮುಂಬೈ, ಡಿಸೆಂಬರ್ 11: ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್​ ನೋಡಲು ಹೋಗಿದ್ದ ದಂಪತಿ ಹಿಂದಿರುಗುವಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಾದಿತ್ತು. ದಂಪತಿ ಒಟ್ಟಿಗೆ ಎಲ್ಲೂ ಹೋಗದೆ ತುಂಬಾ ದಿನವಾಗಿತ್ತೆಂದು ಮೂವರು ಮಕ್ಕಳನ್ನು ಸ್ನೇಹಿತ ರಾಜೇಶ್ ಮನೆಯಲ್ಲಿ ಬಿಟ್ಟು ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಅವರು ಹಿಂದಿರುಗಿ ಬರುವಷ್ಟರಲ್ಲಿ ಒಂದು ಮಗುವಿನ ಅಪಹರಣ(Kidnap)ವಾಗಿತ್ತು. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇದೀಗ 24 ಗಂಟೆಗಳ ಒಳಗಾಗಿ ಅಪಹೃತವಾಗಿದ್ದ 2 ವರ್ಷದ ಬಾಲಕಿಯನ್ನು ಥಾಣೆ ಸರ್ಕಾರಿ ರೈಲ್ವೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಘಾಟ್ಕೋಪರ್‌ನ ನಿತ್ಯಾನಂದ ನಗರದ 30 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2) (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಡಿಸೆಂಬರ್ 8, 2025 ರಂದು, ರಾತ್ರಿ 8.30 ರ ಸುಮಾರಿಗೆ ಮಹಿಳೆ ಪತಿಯೊಂದಿಗೆ ಹೊರಗೆ ಹೋಗಿದ್ದರು. ಸಿನಿಮಾ ಮತ್ತು ಭೋಜನದ ನಂತರ, ದಂಪತಿ ಡಿಸೆಂಬರ್ 9 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಥಾಣೆ ರೈಲ್ವೆ ನಿಲ್ದಾಣಕ್ಕೆ ಹಿಂತಿರುಗಿದ್ದರು. ಕಲ್ಯಾಣ್-ಕೊನೆಯ ಪಾದಚಾರಿ ಮೇಲ್ಸೇತುವೆಯ ಬಳಿ ಪ್ಲಾಟ್‌ಫಾರ್ಮ್ ಸಂಖ್ಯೆ 8 ರ ಬಳಿ ಕಾಯುತ್ತಿದ್ದ ರಾಜೇಶ್ ಅವರಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಹೋದರು. ಆದರೆ ಒಂದು ಮಗು ಎಲ್ಲೂ ಕಾಣಿಸಲಿಲ್ಲ.

ಮತ್ತಷ್ಟು ಓದಿ: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಾಲಕನನ್ನು ಅಪಹರಿಸಿದ್ರಾ ಪೊಲೀಸರು?

ರಾಜೇಶ್ ಬಳಿ ವಿಚಾರಿಸಿದಾಗ ತಮಗೆ ಪರಿಚಯವಿದ್ದ 14 ವರ್ಷದ ಬಾಲಕಿ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಇಷ್ಟು ಹೊತ್ತಾದರೂ ವಾಪಸ್ ಬರಲೇ ಇಲ್ಲ ಎನ್ನುವ ವಿಚಾರವನ್ನು ಪೋಷಕರಿಗೆ ರಾಜೇಶ್ ತಿಳಿಸಿದ್ದಾರೆ. ಎಲ್ಲೆಡೆ ತೀವ್ರ ಹುಟುಕಾಟ ನಡೆಸಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಚಿಂತಿತರಾದ ಪೋಷಕರು ಅಪಹರಣ ದೂರು ದಾಖಲಿಸಿದ್ದರು.

ತ್ವರಿತವಾಗಿ ಕಾರ್ಯನಿರ್ವಹಿಸಿದ ಥಾಣೆ ರೈಲ್ವೆ ಪೊಲೀಸರ ಅಪರಾಧ ಪತ್ತೆ ಘಟಕವು ಕಲ್ಯಾಣ್, ಅಂಬರ್ನಾಥ್ ಮತ್ತು ಇತರ ಶಂಕಿತ ಸ್ಥಳಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಾಹಿತಿದಾರರಿಂದ ಬಂದ ಮಾಹಿತಿಗಳನ್ನು ಬಳಸಿಕೊಂಡು, ತಂಡವು ಡಿಸೆಂಬರ್ 9 ರಂದು ಅಂಬರ್ನಾಥ್ ರೈಲು ನಿಲ್ದಾಣದ ಹೊರ ಪ್ರದೇಶದ ಬಳಿ ಬಾಲಕಿ ಮತ್ತು ಮಗುವನ್ನು ಪತ್ತೆಹಚ್ಚಿತು. ಅಪಹರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ