ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise! ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು […]

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 05, 2020 | 3:27 PM

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise!

ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ!
ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು ನಿಸರ್ಗದತ್ತ ಕಂಟಕ ಎದುರಿಸಿದೆ. ಅಂದ್ರೆ ನಿಸರ್ಗ ಸೈಕ್ಲೋನ್ ಮಹಾರಾಷ್ಟ್ರವನ್ನು ನಡುಗಿಸಿತ್ತು.

ಆ ಮಹಾಮಳೆಯಲ್ಲಿ ವಾಣಿಜ್ಯನಗರಿ ಮುಂಬೈ ತೊಯ್ದುತೊಪ್ಪೆಯಾಗಿತ್ತು. ಹಾನಿ ಪ್ರಮಾಣವನ್ನು ಪಕ್ಕಕ್ಕಿಟ್ಟು ನೋಡುವುದಾದ್ರೆ ಚಂಡಮಾರುತದಿಂದಾಗಿ ಇಡೀ ನಗರ ಸ್ವಚ್ಛಗೊಂಡಂತಾಗಿದೆ. ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಮಾಲಿನ್ಯ ಎಷ್ಟರಮಟ್ಟಿಗೆ ಕಡಿಮೆಯಾಗಿದೆಯೆಂದ್ರೆ ವಾಯು ಗುಣಮಟ್ಟ ಸೂಚ್ಯಂಕ (AQI) 22ರಲ್ಲಿ ಸುರಕ್ಷಿತವಾಗಿದೆ! ಅಂದ್ರೆ ನಿಸರ್ಗ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ!

Published On - 1:29 pm, Fri, 5 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us