AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇದಾರನಾಥ, ಯಮುನೋತ್ರಿ ದೇಗುಲಗಳ ಪ್ರವೇಶದ್ವಾರ ಇಂದು ಬಂದ್​; ಬದರಿನಾಥದ ಬಾಗಿಲು ನ.20ಕ್ಕೆ ಕ್ಲೋಸ್​

ತೃತೀಯ ಕೇದಾರ ಶ್ರೀ ತುಂಗಾನಾಥ ದೇಗುಲ ಅಕ್ಟೋಬರ್​ 30ರಂದು ಮುಚ್ಚಿದೆ. ಹಾಗೇ, ದ್ವಿತೀಯ ಕೇದಾರ ಶ್ರೀ ಮದ್ಮಹೇಶ್ವರ ದೇವಸ್ಥಾನದ ಬಾಗಿಲು ನವೆಂಬರ್​ 22ರಂದು ಮುಚ್ಚಲಿದೆ.

ಕೇದಾರನಾಥ, ಯಮುನೋತ್ರಿ ದೇಗುಲಗಳ ಪ್ರವೇಶದ್ವಾರ ಇಂದು ಬಂದ್​; ಬದರಿನಾಥದ ಬಾಗಿಲು ನ.20ಕ್ಕೆ ಕ್ಲೋಸ್​
ಕೇದಾರನಾಥ ದೇಗುಲ
TV9 Web
| Edited By: |

Updated on: Nov 06, 2021 | 9:55 AM

Share

ಡೆಹ್ರಾಡೂನ್​: ಇಂದಿನಿಂದ ಚಳಿಗಾಲ ಶುರುವಾದ ಹಿನ್ನೆಲೆಯಲ್ಲಿ ಕೇದಾರನಾಥ ಮತ್ತು ಯಮುನೋತ್ರಿ ದೇವಸ್ಥಾನದ ಮಹಾದ್ವಾರಗಳು ಮುಚ್ಚಲಿದ್ದು, ಮುಂದಿನ ಆರು ತಿಂಗಳು ಮತ್ತೆ ತೆರೆಯುವುದಿಲ್ಲ. ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಗಂಗೋತ್ರಿ ಬಾಗಿಲು ನಿನ್ನೆಯೇ ಬಂದ್​ ಆಗಿದೆ. ಹಾಗೇ ಬದರೀನಾಥ್​​ ದೇವಸ್ಥಾನದ ಬಾಗಿಲು ನವೆಂಬರ್​ 20ರಂದು ಮುಚ್ಚಲಿದೆ.  

ಈ ನಾಲ್ಕೂ ದೇಗುಲಗಳನ್ನು ಸೇರಿ ಚಾರ್​ಧಾಮ್​ ಎಂದು ಕರೆಯಲಾಗುತ್ತದೆ. ಇದು ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದು. ಗಂಗೋತ್ರಿ ದೇಗುಲದ ಪ್ರವೇಶದ್ವಾರ ನಿನ್ನೆ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿರುವ ಗಂಗೋತ್ರಿ ಮಂದಿರ ಸಮಿತಿ ಸಹ ಕಾರ್ಯದರ್ಶಿ ರಾಜೇಶ್​ ಸೆಮ್ವಾಲ್​, ದೇಗುಲದ ಗೇಟ್​ ಬೆಳಗ್ಗೆ 11.45ಕ್ಕೆ ಬಂದ್ ಆಗಿದೆ. ಗಂಗಾ ಮಾತೆಯ ವಿಗ್ರವನ್ನು ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕ್ಕಿಯ ಮೇಲೆ ಮುಖ್ಭಾ ಗ್ರಾಮಕ್ಕೆ ಕರೆದೊಯ್ಯಲಾಯಿತು. ಅದು ದೇವಿಯ ಚಳಿಗಾಲದ ವಾಸಸ್ಥಾನವಾಗಿದೆ ಎಂದು ಹೇಳಿದರು.  ಇನ್ನು ಈ ಬಾರಿ ಸೆಪ್ಟೆಂಬರ್​ನಲ್ಲಿ ಬಾಗಿಲು ತೆರೆದಿದ್ದ ಗಂಗೋತ್ರಿಗೆ ಇಲ್ಲಿಯವರೆಗೆ 32,948 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಇಲ್ಲಿ ಕೇವಲ ಭಾರತದ ಭಕ್ತರಷ್ಟೇ ಅಲ್ಲ, ವಿದೇಶಗಳಿಂದಲೂ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಆದರೆ ಇವು ಇರುವುದು ಹಿಮಾಲಯದ ಸಮೀಪ ಆಗಿದ್ದರಿಂದ ಚಳಿಗಾಲದಲ್ಲಿ ವಿಪರೀತ ಎನ್ನುವಷ್ಟು ಹಿಮಪಾತ ಇರುತ್ತದೆ. ಹಾಗಾಗಿ ಬಾಗಿಲು ಹಾಕಲ್ಪಡುತ್ತದೆ.

ಇನ್ನುಳಿದಂತೆ ತೃತೀಯ ಕೇದಾರ ಶ್ರೀ ತುಂಗಾನಾಥ ದೇಗುಲ ಅಕ್ಟೋಬರ್​ 30ರಂದು ಮುಚ್ಚಿದೆ. ಹಾಗೇ, ದ್ವಿತೀಯ ಕೇದಾರ ಶ್ರೀ ಮದ್ಮಹೇಶ್ವರ ದೇವಸ್ಥಾನದ ಬಾಗಿಲು ನವೆಂಬರ್​ 22ರಂದು ಮುಚ್ಚಲಿದೆ ಎಂದು ಮಂಡಳಿಯ ಸದಸ್ಯ  ಡಾ. ಹರೀಶ್​ ಗೌರ್​ ತಿಳಿಸಿದ್ದಾರೆ. ಈ ಮಧ್ಯೆ ನಿನ್ನೆಯಷ್ಟೇ ಕೇದಾರನಾಥಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿ 130 ಕೋಟಿ ರೂ.ಪುನರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: Puneeth Rajkumar: ಅನಧಿಕೃತವಾಗಿ ಪುನೀತ್ ಪುತ್ಥಳಿ ಪ್ರತಿಷ್ಠಾಪಿಸಬೇಡಿ, ಅನುಮತಿ ಪಡೆಯಿರಿ: ಅಭಿಮಾನಿಗಳಿಗೆ ಬಿಬಿಎಂಪಿ ಸೂಚನೆ

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ