ಪ್ಯಾಲೆಸ್ತೀನ್ ಬಗೆಗಿನ ನನ್ನ ಹೇಳಿಕೆಯನ್ನು ಟೀಕಿಸಿದವರು ರಾಜನಿಗಿಂತ ಹೆಚ್ಚು ನಿಷ್ಠಾವಂತರು: ಶರದ್ ಪವಾರ್

|

Updated on: Oct 20, 2023 | 8:21 PM

ನಾನು ಪ್ಯಾಲೆಸ್ತೀನ್​ ಬಗ್ಗೆ ನೀಡಿರುವ ಹೇಳಿಕೆಯನ್ನು ಟೀಕಿಸಿದವರು ರಾಜನಿಗಿಂತಲೂ ಹೆಚ್ಚು ನಿಷ್ಠಾವಂತರು ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ದೇಶದಲ್ಲಿ ವಾಕ್ಚಾತುರ್ಯ ಮುಂದುವರೆದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಾಮೆಂಟ್‌ಗಳನ್ನು ಉಲ್ಲೇಖಿಸಿದ್ದಾರೆ.

ಪ್ಯಾಲೆಸ್ತೀನ್ ಬಗೆಗಿನ ನನ್ನ ಹೇಳಿಕೆಯನ್ನು ಟೀಕಿಸಿದವರು ರಾಜನಿಗಿಂತ ಹೆಚ್ಚು ನಿಷ್ಠಾವಂತರು: ಶರದ್ ಪವಾರ್
ಶರದ್ ಪವಾರ್
Image Credit source: Mint
Follow us on

ನಾನು ಪ್ಯಾಲೆಸ್ತೀನ್(Palestine)​ ಬಗ್ಗೆ ನೀಡಿರುವ ಹೇಳಿಕೆಯನ್ನು ಟೀಕಿಸಿದವರು ರಾಜನಿಗಿಂತಲೂ ಹೆಚ್ಚು ನಿಷ್ಠಾವಂತರು ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಹೇಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ದೇಶದಲ್ಲಿ ವಾಕ್ಚಾತುರ್ಯ ಮುಂದುವರೆದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಾಮೆಂಟ್‌ಗಳನ್ನು ಉಲ್ಲೇಖಿಸಿದ್ದಾರೆ.

ಪ್ಯಾಲೆಸ್ತೀನ್‌ಗೆ ನೆರವು ಕಳುಹಿಸುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಅವರು ಸ್ವಾಗತಿಸಿದರು ಮತ್ತು ಅವರನ್ನು ಶ್ಲಾಘಿಸಿದರು.
ನಾವು ಭಯೋತ್ಪಾದನೆ, ಹಿಂಸಾಚಾರ ಮತ್ತು ಪ್ರದೇಶದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ನಮ್ಮ ಆಳವಾದ ಕಳವಳವನ್ನು ಹಂಚಿಕೊಂಡಿದ್ದೇವೆ.

ಇಸ್ರೇಲ್-ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತದ ದೀರ್ಘಕಾಲೀನ ತಾತ್ವಿಕ ನಿಲುವನ್ನು ನಾವು ಪುನರುಚ್ಚರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಪ್ಯಾಲೆಸ್ತೀನ್​ ಬಗೆಗಿನ ನಮ್ಮ ಅಭಿಪ್ರಾಯವೂ ಇದೇ ಆಗಿತ್ತು ಎಂದು ಪವಾರ್ ಹೇಳಿದ್ದಾರೆ. ಜವಾಹರಲಾಲ್ ನೆಹರು ಅವರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ ಅವರವರೆಗಿನ ಹಿಂದಿನ ಪ್ರಧಾನಿಗಳು ಹೇಳಿರುವ ಮಾತನ್ನೇ ನಾನು ಆಡಿದ್ದೇನೆ.

ಇದು ದೀರ್ಘಕಾಲದ ವಿವಾದಕ್ಕೆ ಶಾಂತಿಯುತ ಪರಿಹಾರವನ್ನು ಖಚಿತಪಡಿಸುತ್ತದೆ, ಅಲ್ಲಿ ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯರು ನೆರೆಹೊರೆಯವರಾಗಿ ಶಾಂತಿ ಮತ್ತು ಸಾಮರಸ್ಯದಿಂದ ಬದುಕಬಹುದು ಎಂದು ಹೇಳಿದ್ದಾರೆ. ಹಮಾಸ್ ಪರ ಹೋರಾಡಲು ಶರದ್ ಪವಾರ್ ತಮ್ಮ ಪುತ್ರಿ ಸುಪ್ರಿಯಾ ಸುಳೆಯನ್ನು ಗಾಜಾಕ್ಕೆ ಕಳುಹಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ನಿತಿನ್ ಗಡ್ಕರಿ, ಪಿಯೂಷ್ ಗೋಯಲ್ , ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಬಿಜೆಪಿ ನಾಯಕರು ಶರದ್ ಪವಾರ್ ಅವರ ಪ್ಯಾಲೆಸ್ತೀನ್ ಪರ ಹೇಳಿಕೆಯನ್ನು ಟೀಕಿಸಿದ್ದರು. ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಪಕ್ಕದಲ್ಲಿ ನಿಂತಿದೆ, ಭಾರತವು ಪ್ಯಾಲೆಸ್ಟೀನಿಯನ್ನರನ್ನು ಭೂಮಿಯ ಮೂಲ ನಿವಾಸಿಗಳು ಎಂದು ಪರಿಗಣಿಸಿದೆ ಎಂದು ಹೇಳಿಕೆ ನೀಡಿದ ಬಳಿಕ ವಾಕ್ಸಮರ ಆರಂಭವಾಗಿತ್ತು.

ಶರದ್ ಪವಾರ್ ಏನು ಹೇಳಿದ್ದರು?
ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧವು ವಿಶ್ವ ಶಾಂತಿಗೆ ಬೆದರಿಕೆಯಾಗಿದೆ. ಅಲ್ಲಿನ ಭೂಮಿ ಮತ್ತು ಮನೆಗಳು ಪ್ಯಾಲೆಸ್ತೀನ್ ಗೆ ಸೇರಿದ್ದವು. ಇಸ್ರೇಲ್ ಅದನ್ನು ವಶಪಡಿಸಿಕೊಂಡಿತ್ತು. ದೇಶದ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ಯಾಲೆಸ್ತೀನ್‌ಗೆ ಸಹಾಯ ಮಾಡುವ ಪಾತ್ರವನ್ನು ವಹಿಸಿದ್ದರು. ಪ್ರಸ್ತುತ ಪ್ರಧಾನಿ (ಪಿಎಂ ಮೋದಿ) ದುರದೃಷ್ಟವಶಾತ್ ಇಸ್ರೇಲ್ ಅನ್ನು ಬೆಂಬಲಿಸುವ ಮೂಲಕ ಮೂಲ ಮಾಲೀಕರನ್ನು ವಿರೋಧಿಸಿದ್ದಾರೆ ಎಂದಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ