AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಂಕಣ್ಣನ ಸನ್ನಿಧಿಯಲ್ಲಿ ಹಸಿವು ಎಂಬ ಪದಕ್ಕೆ ಜಾಗವಿಲ್ಲ, ಇಲ್ಲಿ ಪ್ರತಿದಿನ ಎಷ್ಟು ಜನರಿಗೆ ಅನ್ನದಾನ ನಡೆಯುತ್ತದೆ ಗೊತ್ತಾ?

ತಿರುಮಲದಲ್ಲಿ ಟಿಟಿಡಿ ವತಿಯಿಂದ ಪ್ರತಿದಿನ ಸುಮಾರು 3 ಲಕ್ಷ ಭಕ್ತರಿಗೆ ಉಚಿತ ಅನ್ನಪ್ರಸಾದ ನೀಡಲಾಗುತ್ತದೆ. ಕಲಿಯುಗದ ವೈಕುಂಠದಲ್ಲಿ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಹಸಿದವರು ಇರಬಾರದೆಂಬುದು ಇದರ ಮುಖ್ಯ ಉದ್ದೇಶ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ, ಶ್ರೀ ಅಕ್ಷಯ, ಮತ್ತು ವಕುಲಮಾತಾ ಅಡುಗೆಮನೆಗಳು 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಇದು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಆಹಾರ ನೀಡುವ ಮಹಾಕಾರ್ಯವಾಗಿದೆ ಎಂದು ಟಿಟಿಡಿ ಹೇಳಿದೆ.

ವೆಂಕಣ್ಣನ ಸನ್ನಿಧಿಯಲ್ಲಿ ಹಸಿವು ಎಂಬ ಪದಕ್ಕೆ ಜಾಗವಿಲ್ಲ, ಇಲ್ಲಿ ಪ್ರತಿದಿನ ಎಷ್ಟು ಜನರಿಗೆ ಅನ್ನದಾನ ನಡೆಯುತ್ತದೆ ಗೊತ್ತಾ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jan 14, 2026 | 2:48 PM

Share

ಕಲಿಯುಗದ ವೈಕುಂಠ, ಶ್ರೀಮಾನ್​ ನಾರಾಯಣ ವೆಂಕಟೇಶ್ವರನಾಗಿ (Tirumala Anna Prasadam) ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ. ಟಿಟಿಡಿ ಪ್ರತಿದಿನ 3 ಲಕ್ಷ ಭಕ್ತರಿಗೆ ಅದ್ಭುತವಾದ ಅನ್ನಪ್ರಸಾದವನ್ನು ನೀಡಲಾಗುತ್ತದೆ. ಕಲಿಯುಗದ ಜೀವಂತ ದೇವರು ಎಂದು ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಯ ವಾಸಸ್ಥಾನವಾಗಿರುವ ತಿರುಮಲ ದೇಗುಲದಲ್ಲಿ ಭಕ್ತರು ಹಸಿದುಕೊಂಡು ಇರಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ದೇವರ ದರ್ಶನದ ನಂತರ ಜನರು ಇಲ್ಲಿ ಬಂದು ಅನ್ನ ಪ್ರಸಾದವನ್ನುಸ್ವೀಕಾರ ಮಾಡುತ್ತಾರೆ. ಇಲ್ಲಿ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲರಿಗೂ ಅನ್ನದಾನ ಮಾಡಲಾಗುತ್ತದೆ. ಈ ಕಾರಣಕ್ಕೆ ತಿರುಮಲವನ್ನು ಹೊಟ್ಟೆ ತುಂಬಿಸುವ ಸ್ಥಳ ಎಂದು ಕರೆಯುತ್ತಾರೆ.

ಟಿಟಿಡಿಯ ಅಡಿಯಲ್ಲಿ ಬರುವ ಅನ್ನ ಪ್ರಸಾದ ಇಲಾಖೆಯು ಈ ಕಾರ್ಯವನ್ನು ನಿಭಾಯಿಸುತ್ತದೆ. ಪ್ರತಿದಿನ ಸುಮಾರು ಮೂರು ಲಕ್ಷ ಭಕ್ತರು ಅನ್ನ ಪ್ರಸಾದವನ್ನು ಸೇವನೆ ಮಾಡುತ್ತಾರೆ ಎಂಬುದೇ ತುಂಬಾ ವಿಶೇಷವಾಗಿರುವುದು. ತಿರುಮಲದಲ್ಲಿ ಮೂರು ಅಡುಗೆಮನೆಗಳು ಇದೆ. ಅದರಲ್ಲಿಯೂ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರ, ಶ್ರೀ ಅಕ್ಷಯ ಮತ್ತು ವಕುಲಮಠ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಾಗಲಿ, ಊಟದ ಹಾಲ್‌ನಲ್ಲಿ ಕುಳಿತಿರುವ ಯಾತ್ರಿಕರಾಗಲಿ ಅಥವಾ ಹೊರಗೆ ಕಾಯುತ್ತಿರುವವರಾಗಲಿ, ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಟಿಟಿಡಿಯ ಗುರಿಯಾಗಿದೆ.

Pm Modi Opens Buddha Piprahwa (8)

ತಿರುಮಲದ ತರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರದ ಶ್ರೀ ಅಕ್ಷಯ ಅಡುಗೆಮನೆ ದಿನಕ್ಕೆ 1.48 ಲಕ್ಷ ಭಕ್ತರಿಗೆ ಮತ್ತು ವಕುಲಮಾತಾ ಅಡುಗೆಮನೆಯಲ್ಲಿ ಪ್ರತಿದಿನ 74 ಸಾವಿರ ಭಕ್ತರಿಗೆ ಗುಣಮಟ್ಟದ ಮತ್ತು ರುಚಿಕರವಾದ ಆಹಾರವನ್ನು ತಯಾರಿಸುತ್ತಿದೆ. ಶ್ರೀ ವೆಂಕಟೇಶ್ವರ ನಿತ್ಯಾನಂದ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ ಅವರು ಏಪ್ರಿಲ್ 6, 1985 ರಂದು ತಿರುಮಲದಲ್ಲಿ ಪ್ರಾರಂಭಿಸಿದರು. ಈ ಯೋಜನೆಯನ್ನು ಏಪ್ರಿಲ್ 1, 1994 ರಂದು ಟ್ರಸ್ಟ್ ಆಗಿ ಪರಿವರ್ತಿಸಲಾಯಿತು.ಪ್ರಸ್ತುತ ಸಿಎಂ ಚಂದ್ರಬಾಬು ಅವರ ಆದೇಶದಂತೆ, ತಿರುಮಲದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಟಿಟಿಡಿ ಅಡಿಯಲ್ಲಿ ಬರುವ ದೇವಾಲಯಗಳಲ್ಲಿಯೂ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ

ಪ್ರತಿದಿನ ತಯಾರಿಸುವ ಅನ್ನ ಪ್ರಸಾದಗಳ ವಿವರ:

ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರದಲ್ಲಿ ತಯಾರಿಸಲಾಗುವ ಅನ್ನ ಪ್ರಸಾದಗಳು ಯಾವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಬೆಳಿಗ್ಗೆ ಗೋಧಿ ರವೆ ಉಪ್ಮಾ, ಸೂಜಿ ರವೆ ಉಪ್ಮಾ, ಸೇಮಿಯಾ ಉಪ್ಮಾ, ಪೊಂಗಲಿ, ಚಟ್ನಿ, ಸಾಂಬಾರ್, ಮಧ್ಯಾಹ್ನ ಹೊತ್ತಿಗೆ ಸಿಹಿ ಪೊಂಗಲ್, ಅನ್ನ, ಕರಿ, ಚಟ್ನಿ, ವಡ, ಸಾಂಬಾರ್, ರಸ, ಮಜ್ಜಿಗೆ, ಸಂಜೆಗೆ ಸಿಹಿ ಪೊಂಗಲ್, ಅನ್ನ, ಕರಿ, ಚಟ್ನಿ, ವಡೆ, ಸಾಂಬಾರ್, ರಸ, ಮಜ್ಜಿಗೆ ಮಾಡಲಾಗುತ್ತದೆ.

Pm Modi Opens Buddha Piprahwa (7)

ಶ್ರೀ ಅಕ್ಷಯ ಅವರ ಅಡುಗೆಮನೆಯಲ್ಲಿ ಗೋಧಿ ರವೆ ಉಪ್ಮಾ/ರವೆ ರವೆ ಉಪ್ಮಾ, ಪೊಂಗಲಿ, ಸಾಂಬಾರನ್ನಂ, ಪೆರುಗನ್ನಂ, ಟೊಮೇಟೊ ರೈಸ್, ಸುಂಡಲ್, ಹಾಲು, ಚಹಾ ಮತ್ತು ಕಾಫಿಯನ್ನು ತಯಾರಿಸಲಾಗುತ್ತದೆ. ಹಬ್ಬಗಳು ಮತ್ತು ಪ್ರಮುಖ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಮಜ್ಜಿಗೆ, ಬಾದಾಮಿ ಹಾಲು, ಬಿಸ್ಕತ್ತು ಮತ್ತು ಜ್ಯೂಸ್ ಪ್ಯಾಕೆಟ್‌ಗಳನ್ನು ಸಹ ಭಕ್ತರಿಗೆ ವಿತರಿಸಲಾಗುತ್ತದೆ.

ಇನ್ನು ವಕುಲಮಾತಾ ಅಡುಗೆಮನೆಯಲ್ಲಿ, ಸಬರನ್ನಂ, ಪೆರುಗನ್ನಂ ಮತ್ತು ಉಪ್ಮಾವನ್ನು ಪಿಲಿಗ್ರಿಮ್ ಅಕೌಂಡೇಶನ್ ಕಾಂಪ್ಲೆಕ್ಸ್ -2, 4 ಮತ್ತು 5 ರಲ್ಲಿರುವ ಊಟದ ಹಾಲ್‌ಗಳಿಗೆ ಮತ್ತು ಹೊರ ಪ್ರದೇಶದಲ್ಲಿರುವ ಕೇಂದ್ರ ವಿಚಾರಣಾ ಕಚೇರಿ, ಪಿಲಿಗ್ರಿಮ್ ಅಕೌಂಡೇಶನ್ ಕಾಂಪ್ಲೆಕ್ಸ್ ಕಾಂಪ್ಲೆಕ್ಸ್ -1, ರಾಮ್ ಭಾಗಿಚಾ ಅತಿಥಿ ಗೃಹ ಮತ್ತು ಅಂಜನಾದ್ರಿ ನಿಲಯಂ ಕಾಟೇಜ್‌ಗಳಲ್ಲಿರುವ ಭಕ್ತರಿಗೆ ವಿತರಿಸಲು ತಯಾರಿಸಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನದ (TTD) ವತಿಯಿಂದ ಸಹಾಯದಿಂದ ಸುಮಾರು ಸಾವಿರ ಅನ್ನ ಪ್ರಸಾದ ಇಲಾಖೆಯ ಸಿಬ್ಬಂದಿ, ಕಾಲಕಾಲಕ್ಕೆ ಯಾವುದೇ ಅಡೆತಡೆಯಿಲ್ಲದೆ ಭಕ್ತರಿಗೆ ಅನ್ನ ಪ್ರಸಾದವನ್ನು ವಿತರಿಸಲು ಸಹಕಾರಿಯಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Wed, 14 January 26

ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು RTO ಅಧಿಕಾರಿಗಳೇ ದಂಗು!
ಒಂದೇ ಬಸ್​​ಗೆ 2 ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು RTO ಅಧಿಕಾರಿಗಳೇ ದಂಗು!
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು!
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ವಿಡಿಯೋ: ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ
ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
ಚೊಚ್ಚಲ ಪಂದ್ಯ... ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​
ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ
ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ
ಮೆಟ್ರೋ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ
ಮೆಟ್ರೋ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ
ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?
ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ?