AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirupati Thimmappa Temple: 3 ಸಾವಿರ ರೂಪಾಯಿಯ ದರ್ಶನ ಟಿಕೆಟ್​ನ್ನು 42 ಸಾವಿರಕ್ಕೆ ಮಾರಾಟ ಮಾಡಿದ ಟಿಟಿಡಿ ಸಿಬ್ಬಂದಿಯ ಬಂಧನ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಟಿಕೆಟ್​ನ್ನು​​ 42,000 ರೂ.ಗೆ ಮಾರಾಟ ಮಾಡಿರುವ ಅಲ್ಲಿನ ಸಿಬ್ಬಂದಿಯನ್ನು ಬಂಧಿಸಲಾಗಿದೆ.

Tirupati Thimmappa Temple: 3 ಸಾವಿರ ರೂಪಾಯಿಯ ದರ್ಶನ ಟಿಕೆಟ್​ನ್ನು 42 ಸಾವಿರಕ್ಕೆ ಮಾರಾಟ ಮಾಡಿದ ಟಿಟಿಡಿ ಸಿಬ್ಬಂದಿಯ ಬಂಧನ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 07, 2023 | 11:50 AM

ಆಂಧ್ರಪ್ರದೇಶ: ದೇವಾಲಯಗಳಲ್ಲೂ ಕೂಡ ಅಕ್ರಮವನ್ನು ಮಾಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ ನೋಡಿ, ಹೌದು ತಿರುಪತಿ ತಿಮ್ಮಪ್ಪನ (Tirupati Thimmappa) ದರ್ಶನಕ್ಕೆ ವಿಐಪಿ ಟಿಕೆಟ್​ನ್ನು​​ 42,000 ರೂ.ಗೆ ಮಾರಾಟ ಮಾಡಿರುವ ಅಲ್ಲಿನ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಹೌದು ತಿರುಪತಿ ತಿಮ್ಮಪ್ಪ ದೇವಸ್ಥಾನದ (ಟಿಟಿಡಿ) ಸಿಬ್ಬಂದಿಯೊಬ್ಬರು ಗುರುವಾರ ದೇವಸ್ಥಾನದ ಪಟ್ಟಣದಲ್ಲಿ ವಿಐಪಿ ದರ್ಶನದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಕೃತ್ಯವನ್ನು ದೇವಾಲಯದ ಉದ್ಯೋಗಿ, ಶಂಕರ್ ಮಾಡಿದ್ದಾನೆ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ನ ಭಕ್ತರೊಬ್ಬರು ಆರು ಟಿಕೆಟ್‌ಗಳನ್ನು 42,000 ರೂ.ಗೆ ಖರೀದಿಸಲಾಗಿದೆ. ಆದರೆ ನಿಜವಾದ ಟಿಕೆಟ್ ಬೆಲೆ ಕೇವಲ 3,000 ರೂ.

ಟಿಟಿಡಿಯ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗಕ್ಕೆ ಈ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ಭಕ್ತರೊಬ್ಬರು ತಮ್ಮ ಕುಟುಂಬದ ಜತೆಗೆ ತಿರುಪತಿಗೆ ಬಂದಿದ್ದು, ಈ ಸಮಯದಲ್ಲಿ ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ದರ್ಶನ ಟಿಕೆಟ್ ಕೌಂಟರ್‌ನಲ್ಲಿ ವಿರಾಮದ ಬಗ್ಗೆ ತನಿಖೆ ನಡೆಸಿದಾಗ ಶಂಕರ್ ಎಂಬ ವ್ಯಕ್ತಿ ಹೈದರಾಬಾದ್ ಮೂಲದ ಭಕ್ತರೊಬ್ಬರ ಕುಟುಂಬಕ್ಕೆ ದರ್ಶನದ ಟಿಕೆಟ್‌ಗಳನ್ನು 42,000 ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಸ್ಥಳೀಯ ಎಂಎಲ್‌ಸಿಯ ಶಿಫಾರಸು ಪತ್ರವನ್ನು ದುರುಪಯೋಗಪಡಿಸಿಕೊಂಡು ಶಂಕರ್ ಟಿಕೆಟ್ ಪಡೆದಿದ್ದರು ಎಂದು ವರದಿಯಾಗಿದೆ. ನಂತರ ವಿಜಿಲೆನ್ಸ್ ವಿಭಾಗವು ತಿರುಮಲ 2 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇದನ್ನೂ ಓದಿ: Tirupati Temple: ಹೊಸ ವರ್ಷದಂದು ಹೊಸ ದಾಖಲೆ ಬರೆದ ತಿರುಪತಿ ದೇವಸ್ಥಾನ; ಒಂದೇ ದಿನ 7.6 ಕೋಟಿ ರೂ. ಕಾಣಿಕೆ ಸಂಗ್ರಹ

ಟಿಟಿಡಿ ಅಧಿಕಾರಿಗಳು ಟಿಕೆಟ್ ಖರೀದಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ದೇವರ ದರ್ಶನ ಪಡೆಯಲು ಪಾರದರ್ಶಕತೆಯುತ ಟಿಕೆಟ್​​ ಬೆಲೆಯನ್ನು ಬಗ್ಗೆ ಟಿಟಿಡಿ ವೆಬ್‌ಸೈಟ್​​ನಲ್ಲಿ ತಿಳಿದುಕೊಳ್ಳಬಹುದು ಮತ್ತು ಅಲ್ಲಿಯೇ ಟಿಕೆಟ್​​ ಬುಕ್​​ ಮಾಡಬಹುದು ಎಂದು ಆಡಳಿತ ಮಂಡಳಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Horoscope: ಜೇಷ್ಠ ನಕ್ಷತ್ರದಲ್ಲಿ ಚಂದ್ರನ ಸಂಚಾರ
Daily Horoscope: ಜೇಷ್ಠ ನಕ್ಷತ್ರದಲ್ಲಿ ಚಂದ್ರನ ಸಂಚಾರ
ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ