AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೂಯಿಸ್ ವಿಟಾನ್ ಬ್ಯಾಗ್ ವಿವಾದ; ಜೋಲಾ ಲೇಕೆ ಆಯೇ ಥೇ ಎಂದು ಫೋಟೊ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ

Louis Vuitton bag ತನ್ನ ಬ್ಯಾಗ್ ಬಗ್ಗೆ ಟ್ವೀಟಿಗರು ಟ್ವೀಟ್ ದಾಳಿ ನಡೆಸುತ್ತಿದ್ದಂತೆ ಮೊಯಿತ್ರಾ, ವಿವಿಧ ಸಂದರ್ಭಗಳಲ್ಲಿ ಆಕೆ ಸಂಸತ್ ನಲ್ಲಿ ಅದೇ ಲೂಯಿಸ್ ವಿಟ್ಟಾನ್ ಬ್ಯಾಗ್ ತೆಗೆದುಕೊಂಡು ಬಂದಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ

ಲೂಯಿಸ್ ವಿಟಾನ್ ಬ್ಯಾಗ್ ವಿವಾದ; ಜೋಲಾ ಲೇಕೆ ಆಯೇ ಥೇ ಎಂದು ಫೋಟೊ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
TV9 Web
| Edited By: |

Updated on:Aug 02, 2022 | 7:58 PM

Share

ಸಂಸತ್​​ನಲ್ಲಿ ಸೋಮವಾರ ಬೆಲೆ ಏರಿಕೆ (price rise) ಚರ್ಚೆ ನಡೆಯುತ್ತಿದ್ದಾಗ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ತಮ್ಮ ಬಳಿ ಇದ್ದ ದುಬಾರಿ ಬೆಲೆಯ ಲೂಯಿಸ್ ವಿಟಾನ್ ಬ್ಯಾಗ್  (Louis Vuitton bag)ಅಡಗಿಸುತ್ತಿರುವುದು ಎಂಬ ವಿಡಿಯೊ ವೈರಲ್ ಆಗಿದೆ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಕಕೋಲಿ ಘೋಷ್ ದಸ್ತಿದಾರ್ ಮಾತನಾಡುತ್ತಿರುವಾಗ ಪಕ್ಕದಲ್ಲೇ ಮೊಯಿತ್ರಾ ಕುಳಿತಿರುವುದು ಕಾಣುತ್ತದೆ. ದಸ್ತಿದಾರ್ ಮೆಹಂಗಾಯಿ (ಬೆಲೆ ಏರಿಕೆ) ಎಂದು ಹೇಳುತ್ತಿದ್ದಾಗ ಮೊಯಿತ್ರಾ ತಮ್ಮ ಬಳಿ ಇದ್ದ ಬ್ಯಾಗ್​​ನ್ನು ನೆಲದಲ್ಲಿ ಇರಿಸುವಂತೆ ಕಾಣುತ್ತದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೊಯಿತ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ. ಬಿಜೆಪಿ ವಕ್ತಾರೆ ಶೈನಾ ನಾನ ಚುದಸಮ ಅಕಾ ಶೈನಾ ಎನ್ ಸಿ ಮಹುವಾ ಮೊಯಿತ್ರಾ ಅವರ ಲಕ್ಷ ರುಪಾಯಿ ಬೆಲೆ ಬಾಳುವ ಬ್ರಾಂಡೆಡ್ ಬ್ಯಾಗ್ ಬಗ್ಗೆ ಟೀಕಾಪ್ರಹಾರ ಮಾಡಿದ್ದು, ಔರ್ ಕಿತ್ನೇ ಅಚ್ಚೇ ದಿನ್ ಚಾಹಿಯೇ? ( ಇನ್ನೆಷ್ಟು ಒಳ್ಳೆಯ ದಿನ ಬೇಕು?) ಎಂದು ಕೇಳಿದ್ದಾರೆ.

ಮಹುವಾ ಮೊಯಿತ್ರಾ ಪ್ರತಿಕ್ರಿಯೆ ತನ್ನ ಬ್ಯಾಗ್ ಬಗ್ಗೆ ಟ್ವೀಟಿಗರು ಟ್ವೀಟ್ ದಾಳಿ ನಡೆಸುತ್ತಿದ್ದಂತೆ ಮೊಯಿತ್ರಾ, ವಿವಿಧ ಸಂದರ್ಭಗಳಲ್ಲಿ ಆಕೆ ಸಂಸತ್ ನಲ್ಲಿ ಅದೇ ಲೂಯಿಸ್ ವಿಟ್ಟಾನ್ ಬ್ಯಾಗ್ ತೆಗೆದುಕೊಂಡು ಬಂದಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. 2019ರಿಂದ ಜೋಲೇವಾಲಾ ಫಕೀರ್. ಜೋಲಾ ಲೇಕೆ ಆಯೇ ಥೇ, ಜೋಲಾ ಲೇಕೆ ಚಲ್ ಪಡೇಂಗೇ (2019ರಿಂದ ಜೋಳಿಗೆ ಹಾಕಿದ ಫಕೀರ, ಜೋಳಿಗೆ ಹಾಕಿ ಕೊಂಡು ಬಂದಿದ್ದೆ, ಜೋಳಿಗೆ ಹಾಕಿಯೇ ಹೋಗುವೆ) ಎಂದು ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ
Image
ಅಮಿತ್ ಶಾರನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ; ಎನ್‌ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸಲು ಮನವಿ
Image
Mahua Moitra: ಸದನದಲ್ಲಿ ಬೆಲೆಯೇರಿಕೆ ಚರ್ಚೆ ವೇಳೆ ತನ್ನ 1.5 ಲಕ್ಷ ರೂ. ಮೌಲ್ಯದ ಬ್ಯಾಗ್ ಬಚ್ಚಿಟ್ಟ ಸಂಸದೆ; ವಿಡಿಯೋ ವೈರಲ್
Image
ಲೋಕಸಭೆಯಲ್ಲಿ ಬೆಲೆ ಏರಿಕೆ ಚರ್ಚೆ ನಡುವೆ ಎದ್ದು ನಿಂತು ಹಸಿ ಬದನೆಕಾಯಿ ಕಚ್ಚಿ ತಿಂದ ಟಿಎಂಸಿ ಸಂಸದೆ

2016 ಡಿಸೆಂಬರ್ 3ರಂದು ಉತ್ತರಪ್ರದೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಹಮ್ ಫಕೀರ್ ಆದ್ಮಿ ಹೈ, ಜೋಲಾ ಲೇಕೆ ಚಲ್ ಪಡೇಂಗೇ ಎಂದು ಹೇಳಿದ್ದರು. ಮೊಯಿತ್ರಾ ಮೋದಿಯವರ ಅದೇ ಡೈಲಾಗ್​​ನ್ನು ಇಲ್ಲಿ ಹೇಳಿ ಟ್ರೋಲಿಗರಿಗೆ ಪ್ರತಿಕ್ರಿಯಿಸಿದ್ದಾರೆ.

ಮಹುವಾ ಮೊಯಿತ್ರಾ ಅದೇ ಬ್ಯಾಗ್​​ನ್ನು ಸಂಸತ್​​ಗೆ ಬರುವಾಗ ತರುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಟಿಎಂಸಿ ಸಂಸದೆಯನ್ನು ಬೆಂಬಲಿಸಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡಾ ಮಹುವಾ ಮೊಯಿತ್ರಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಈ ಹಿಂದೆ ಕಾರ್ಪೊರೇಟ್ ವೃತ್ತಿಜೀವನವನ್ನು ಹೊಂದಿದ್ದರು. ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಬ್ರಾಂಡ್ ವಸ್ತುಗಳನ್ನು ಖರೀದಿಸಿದರು. ಸ್ವತಂತ್ರ ದನಿ ಹೊಂದಿರುವ ಮಹಿಳೆಯನ್ನು ಅಪಖ್ಯಾತಿಗೊಳಿಸಲು #Poopindia ಅವರ ಮತ್ತೊಂದು ಕಲ್ಪನಾರಹಿತ ಪ್ರಯತ್ನ. ಮಹುವಾ ಮೊಯಿತ್ರಾ ತಮ್ಮ ಬ್ರಾಂಡೆಂಡ್ ಬ್ಯಾಗ್​​ನ್ನು ಅಡಗಿಸಲು ಯಾವತ್ತೂ ಪ್ರಯತ್ನಿಸಿಲ್ಲ. ಆಕೆ ಕಾರ್ಪೊರೇಟ್ ವೃತ್ತಿ ಜೀವನ ಹೊಂದಿದ್ದವರು. ತಮ್ಮ ಸಂಪಾದನೆಯಿಂದಲೇ ಅವರು ಬ್ರಾಂಡೆಂಡ್ ವಸ್ತು ಖರೀದಿಸಿದ್ದಾರೆ. ಓಹ್ , ಎಷ್ಟು ವಿವಾದಾತ್ಮಕ ಅಲ್ವಾ ಎಂದು ಸ್ವರಾ ಟ್ವೀಟ್ ಮಾಡಿದ್ದಾರೆ.

Published On - 7:56 pm, Tue, 2 August 22

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ